Friday, February 9, 2018

ಕಾಶಿ ರಾಜಕುಮರಿಯರನ್ನು ಗೆದ್ದು ಹೊರಟಿದ್ದನಷ್ಟೆಎದುರಿಗೆ ಸಾಲ್ವ ಬಂದಿದ್ದಅವನನ್ನೂ ಸೋಲಿಸಿಯಾಗಿತ್ತುಆದರೆ ಆತ ಹಾಗೆ ಅಜೇಯ ಗಾಂಗೇಯನೆದುರಿಗೆ ಬರಲು ಕಾರಣವಿತ್ತುಮೂವರಲ್ಲಿ ಒಬ್ಬಳು ಆಗಲೇ ಸಾಲ್ವ ರಾಜನನ್ನು ಬಯಸಿದ್ದವಳುಸಾಲ್ವ ಕೂಡಾ ಅಂಬೆಯನ್ನು ಪ್ರೀತಿಸಿದ್ದಅದಕ್ಕಾಗೇ ಸಾಲ್ವನ ಸೋಲು ಅರಗಿಸಿಕೊಳ್ಳದ ರಾಜಕುಮಾರಿಯೊಬ್ಬಳು ಸಿಡಿದು ಕೇಳಿಬಿಟ್ಟಿದ್ದಳು.
"..ಜೀವಮಾನವಿಡಿ ಮದುವೆಯಾಗಲ್ಲ ಎಂದಿದ್ಯಲ್ಲ ಅಜೇಯ ಭೀಷ್ಮ ಆದರೆ  ಸ್ವಯಂವರಕ್ಕೇಕೆ ಬಂದೆ..?" ಎಂದು ಅಂಬೆ ಪ್ರಶ್ನಿಸಿದಾಗ ಅವನಿಗೆ ತಲೆ ತಗ್ಗಿಸುವಂತಾಗಿದ್ದರೂ ಹೆದೆ ಏರಿಸಿ ಎದುರಿಗಿದ್ದ ರಾಜರನ್ನೆಲ್ಲಾ ಬಗ್ಗು ಬಡಿದು ಮೂವರೂಕನ್ಯೆಯರನ್ನು ಹೊತ್ತು ತಂದುಮದುವೆ ಮಾಡಲು ಅಣಿಯಾಗಿದ್ದಆದರೆ ಘಟಿಸಿದ್ದೇ ಬೇರೆಅದಕ್ಕಾಗಿ ಆಕೆ ತಿರುಗಿಬಿದ್ದಿದ್ದಳುತಪ್ಪನ್ನು ಸರಿಪಡಿಸಲು ಇಬ್ಬರನ್ನು ವಿಚಿತ್ರವೀರ್ಯನಿಗೆ ಉಳಿಸಿ ಕೊನೆಯವಳನ್ನು ಸಾಲ್ವನಿಗೆ ಹಿಂದಿರುಗಿಸಲು ಸ್ವತಹೋದಭೀಷ್ಮ ಎದುರಿಸಿದ್ದು ದೊಡ್ಡ ಪ್ರಹಸನಸೋತಿದ್ದ ಸಾಲ್ವನೂ ಆಕೆಯನ್ನು ತಿರಸ್ಕರಿಸಿದ್ದ.
 ದಿನ ಸಾಮಾಜಿಕವಾಗಿ ಎರಡೂ ಕಡೆಯಿಂದ ತಿರಸ್ಕೃತಗೊಂಡು ಅವಮಾನಕ್ಕೀಡಾಗಿ ಎದುರು ನಿಂತ ಅಂಬೆ ಮೇಲಿನಂತೆ ಪ್ರಶ್ನಿಸಿದ್ದಳಲ್ಲದೆ " ಭೀಷ್ಮ ನಿನ್ನ ಅವಸಾನಕ್ಕೆ ನಾನೇ ಕಾರಣಳಾಗುತ್ತೇನೆಹೆಣ್ಣನ್ನು ವರಿಸದಗಂಡಸರನ್ನೂ ಅವಮಾನಿಸಿದನೀನು ಎರಡೂ ಅಲ್ಲದ ಶಿಖ೦ಡಿಯವತಾರದ ಜೀವಿಯಿಂದ ನಾಶ ಹೊಂದುತ್ತಿ..!" ಎಂದು ಹತಾಶೆಯಿಂದ ಪ್ರತಿಜ್ಞೆಗೈದು ಪ್ರಾಣಾರ್ಪಣೆ ಮಾಡಿಕೊಂಡು ಬಿಡಬೇಕೆ...ಅತೃಪ್ತ ಆತ್ಮ ಖಂಡಿತವಾಗಿಯೂ ನೆಲೆ ಹುಡುಕುತ್ತದೆತನ್ನ ಇಷ್ಟಾರ್ಥ ಸಿದ್ಧಿಸುವವರೆಗೆಹಾಗಾಗೇ ಅಲ್ಲೆಲ್ಲೋ ಅಲೆಯುತ್ತಿದ್ದ ಆತ್ಮ ಮುಂದೆಂದೋ ಶಿಖಂಡಿಯಾಗಿ ಜನ್ಮ ತಳೆಯಿತುಇಷ್ಟೆಲ್ಲಾ ನಡೆದ ಮೇಲೆ  ವಿಷಾದನೀಯ ಪ್ರಸಂಗದಿಂದ ಆಗ ತಾತ್ಪೂರ್ತಿಕವಾಗಿ ಭೀಷ್ಮ ಪಾರಾಗಿದ್ದಅಂಥಾ ಭೀಷ್ಮ ಈಗ ಗಾಂಧಾರದತ್ತ ಹೊರಟಿದ್ದ ಕುರುಡರಾಜಕುಮಾರ ಧೃತರಾಷ್ಟ್ರನಿಗೆ ಹೆಣ್ಣು ಕೇಳಲು.
ಧೃತರಾಷ್ಟ್ರನಿಗೆ ಹೆಣ್ಣು ಹುಡುಕಲು ತಾನೇ ಸ್ವಯಂವರಕ್ಕೆ ಹೊರಟು ನಿಂತರೆ ಮತ್ತದೇ ತಾಂತ್ರಿಕ ತೊ೦ದರೆ ಇದ್ದುದರಿಂದ  ಬಾರಿ ಸ್ವಯಂವರದ ಮಾತೇ ಬೇಡಹಾಗೆಯೇ ಸಂಬಂಧ ಹುಡುಕಿಕೊಂಡು ದೂರಕ್ಕೆ ಹೊರಟು ಹೋಗೋಣ ಎ೦ದು ಸ್ವಯಂಭೀಷ್ಮ ಹೊರಟು ನಿಂತಿದ್ದಇಲ್ಲದಿದ್ದರೆ ಯಥಾ ಪ್ರಕಾರ ಕುರು ರಾಜವಂಶಕ್ಕೆ ಸಂತಾನ ಹೀನತೆಹಾಗಾಗೇ ನೇರ ನಡೆದು ತಲುಪಿದ್ದು ಸುಬಲನ ಗಾ೦ಧಾರ ದೇಶಕ್ಕೆಕಾರಣ ಗಾಂಧಾರ ರಾಜ ಸುಬಲನಿಗೆ ಸರಿಯಾಗಿ ಹನ್ನೊಂದು ಹೆಣ್ಣು ಮಕ್ಕಳಿದ್ದಾರೆಎನ್ನುವ ಸುದ್ದಿ ಭೀಷ್ಮನಿಗೆ ಸ್ಪಷ್ಟವಾಗೇ ದೊರಕಿತ್ತುಗಾಂಧಾರ ರಾಜ ಸುಬಲನೂ ಹಲವು ಮದುವೆಗಳನ್ನು ಆಗಿ ಹನ್ನೊಂದು ಜನ ಹೆಣ್ಣು ಮಕ್ಕಳನ್ನುಶಕುನಿ ಸೇರಿದಂತೆ ನೂರು ಜನ ಗಂಡು ಮಕ್ಕಳನ್ನು ಪಡೆದಿದ್ದವನು.
ಮುಂದಿನದು ಇತಿಹಾಸಗಾಂಧಾರದ ಒಳಕೋಣೆಯ ಚರ್ಚೆಯಲ್ಲಿ ಅದೇನೇನಾಯಿತೋ ಗೊತ್ತಿಲ್ಲಒಲ್ಲದ ಮನಸ್ಸಿನಿಂದ ಕುರುಡನೊಂದಿಗಿನ ಸಂಸಾರಕ್ಕೆ ಗಾಂಧಾರಿ ಒಪ್ಪಿದ್ದಳೆನ್ನುವುದು ಒಂದೆಡೆಯಾದರೆಗಾಂಧಾರ ತುಂಬ ಸುಂದರ ರಾಜ್ಯ ಮತ್ತುನೆಮ್ಮದಿಯ ಜನತೆಯನ್ನು ಹೊಂದಿದ್ದು ಅದೆಲ್ಲವನ್ನೂ ಭೀಷ್ಮನ ಕೋಪಕ್ಕೆ ಬಲಿಹಾಕಲಾರದೆ ರಾಜ ಪರಿವಾರ ಇಂಥಾ ತ್ಯಾಗಕ್ಕೆ ಮುಂದಾದರೆನ್ನುವುದೂ ಒಳಗೊಳಗೆ ನಡೆದ ವಿದ್ಯಮಾನಒಟ್ಟಾರೆ ಅಲ್ಲಿಂದ ಕಣ್ಣಿಗೆ ಬಟ್ಟೆ ಬಿಗಿದುಕೊಂಡ ಗಾಂಧಾರಿ ನಡೆದುಬಂದರೆಅವಳ ಹಿಂದೆ ವಿಲಕ್ಷಣ ಕಣ್ಣುಗಳ ಮೊನಚು ಮುಖದ ಶಕುನಿ ಕೂಡಾ ನಡೆದುಬಂದ ತನ್ನ ಪಕ್ಕೆಗೆ ನೇತಾಡಿಸಿಕೊಂಡಿದ್ದ ಎಲುಬಿನ ದಾಳಗಳ ಜೊತೆಗೆಅಂತೂ ಕುರು ಸಿಂಹಾಸನಕ್ಕೆ ರಾಣಿ ದೊರಕಿದಳು ಎನ್ನುವ ಸಂತೋಷದ ಜೊತೆಗೆಹಸ್ತಿನಾಪುರಕ್ಕೆ ಆತಂಕವನ್ನೂ ತರುತ್ತಿದ್ದೇನೆಂದು  ಕ್ಷಣಕ್ಕೆ ಭೀಷ್ಮ ಅರಿಯದೆ ತಪ್ಪು ಮಾಡಿದ್ದಧೃತರಾಷ್ಟ್ರನಿಗಂತೂ ಶಕುನಿಯಂಥವನೊಬ್ಬ ಬಂದು ಸೇರುತ್ತಿರುವುದು ಯಾವ ಲೆಕ್ಕದಲ್ಲೂ ಕುರುಕುಲಕ್ಕೆ ಅವಾಂತರವಾದೀತು ಎನ್ನುವದು ಯಾವಕಾರಣಕ್ಕೂ ಅನ್ನಿಸುವ ಅವಕಾಶವೇ ಇರಲಿಲ್ಲಇನ್ನು ಮೇಲೆ ಪಾಂಡುವಿಲ್ಲದ್ದರಿಂದ ಮಹಾರಾಜನೂ ನಾನೇಮುಂದೆ ಮಕ್ಕಳಾದ ಮೇಲೆ ಅವರೇ ವಾರಸುದಾರರೂ ಕೂಡಾ ಎಂದುಕೊಂಡಿದ್ದ ಅಷ್ಟೆಆದರೆ ಅತ್ತ ಪಾಂಡುವಿನ ಪತ್ನಿ ಕುಂತಿ ಮಗುವನ್ನುಹಡೆದಿರುವ ಸುದ್ದಿ ರಾಜಭವನ ತಲುಪಿತ್ತುಎಲ್ಲಕ್ಕಿಂತಲೂ ಸಂಕಟ ಮತ್ತು ತಳಮಳ ಪಟ್ಟವನೆಂದರೆ ಧೃತರಾಷ್ಟ್ರ.
ಕಾರಣ ಮೊದಲೇ ಸಿಂಹಾಸನ ಹಗಲುಗನಸಾದಾಗ ತಾನಾಗೇ ಒಲಿದು ಬಂದಿದ್ದು ಕಿರೀಟಮದುವೆಯಾಗುವುದೇ ಕಷ್ಟವಾಗಿ ಭವಿಷ್ಯ ಪೂರ್ತಿ ಮಂಕೇನೋ ಎನ್ನಿಸುವಾಗದೊಡ್ಡಪ್ಪ ಅದನ್ನು ನಿವಾರಿಸಿ ಸಂಸಾರ ಸುಖದ ಅನುಭವ ನೀಡಿದ್ದಈಗಮಗುವಾಗಲು ಗಾಂಧಾರಿ ಗರ್ಭ ಧರಿಸಿ ಹಡೆಯಲು ಕಾಯುವ ಮುಂಚೆ ಅತ್ತ ಕುಂತಿ ಹಡೆದು ಕುಳಿತಿದ್ದಾಳೆಅಂದರೆ ಅಲ್ಲಿಗೆ ಪಾಂಡು ಶಾಪ ವಿಮೋಚನೆ ಹೊಂದಿದ್ದಾನೆಹಾಗಾದರೆ ಅರಮನೆಗೆ ಹಿಂದಿರುಗುತ್ತಾನೆದೊಡ್ಡಪ್ಪ ಹಿಂದಿನಂತೆ ನನ್ನಕುರುಡುಗಣ್ಣಿನ ನೆಪದಲ್ಲಿ ಅವನಿಗೆ ಮರಳಿ ರಾಜ್ಯಾಭಿಷೇಕ ಮಾಡುತ್ತಾನೆಸಂಕಟದಲ್ಲಿ ಬೆಂದು ಹೋದ ಧೃತರಾಷ್ಟ್ರನಿಗೆ ಹಿಂದೆಯೇ ಬಂದಾವರಿಸಿದ್ದು ಗಾಂಧಾರಿಯ ಒಳಗುದಿಅದೆಂದರೆ ದಿನಗಳು ತುಂಬಿದ್ದರೂ ಮಗು ಹೊರಕ್ಕೆ ಬರುವ ಲಕ್ಷಣವೇಕಾಣದಿರುವುದುಜೀವನ ಪೂರ್ತಿ ಹಸ್ತಿನಾವತಿಗಾಗಿತನ್ನ ಗಾಂಧಾರದ ಒಳಿತಿಗಾಗಿ ಜೀವ ತೇಯಲು ನಿರ್ಧರಿಸಿದ್ದಾಗಿಬಿಟ್ಟಿತ್ತುಅದಕ್ಕೆ ಸರಿಯಾಗಿ ಇಷ್ಟೆಲ್ಲಾ ತ್ಯಾಗಕ್ಕೆ ಬದಲಾಗಿ ತನ್ನ ಗರ್ಭದಿಂದ ಹುಟ್ಟುವ ಮಗುವೇ ಹಸ್ತಿನಾವತಿಯನ್ನು ಆಳಲಿದೆ ಎಂಬಸಮಾಧಾನವಾದರೂ ಇತ್ತು.
ಈಗ ಅದೂ ಆಗುತ್ತಿಲ್ಲಲೆಕ್ಕದಂತೆ ಮೊದಲು ಗರ್ಭಿಣಿಯಾದವಳು ತಾನುಆದರೆ ಅತ್ತ ಕುಂತಿ ಹಡೆದು ಕುಂತಿದ್ದಾಳೆಅದಕ್ಕಾಗಿಯೇ ನಿಯೋಗ ಆಚರಿಸಿದ್ದಾಳೆಸಿಂಹಾಸನಕ್ಕಾಗಿ ರಾಜಮನೆತನದ ಹೆಂಗಸರು ಎಂಥೆ೦ಥಾ ಅನೈತಿಕ ಅನ್ಯಾಯಗಳಿಗೂ ಕೈಹಾಕುತ್ತಾರೆಹೇಗೆಲ್ಲಾ ಮುಂದುವರೆಯಲು ಸಿದ್ಧರಿರುತ್ತಾರೆಏನೇನು ಮಾಡುತ್ತಾರೆ ಎಂದೆಲ್ಲಾ ರಾಜಮನೆತನದ ಗಾಂಧಾರಿಗೆ ಹೇಳಿಕೊಡಬೇಕಿರಲಿಲ್ಲಒಮ್ಮೆ ಅರಸು ಕುಲದ ಅಗತ್ಯತೆ ಮತ್ತು  ಧಾರ್ಷ್ಟ್ಯವನ್ನೂ ಮೈಗೂಡಿಸಿಕೊಂಡ ಮೇಲೆ ಕುಟುಂಬದಹೆಂಗಸರೂ ಕೂಡಾ ಯಾವ ನಿರ್ಧಾರವನ್ನು ಕೈಗೊಳ್ಳಲೂ ಹಿಂಜರಿಯುವುದಿಲ್ಲ ಎನ್ನುವುದು ಹೊಸದೇನಲ್ಲ ಇತಿಹಾಸದಲ್ಲಿಇವೆಲ್ಲ ದೂರದೃಷ್ಟಿಯಿಂದ ಕುಂತಿ ತುಂಬಾ ದೊಡ್ಡ ನಿರ್ಧಾರಗಳನ್ನು ಕಾಡಿನಲ್ಲಿ ಕುಳಿತೆ ತೆಗೆದುಕೊಂಡಿದ್ದಾಳೆ ಮತ್ತು ಅದಕ್ಕಾಗಿತನಗಿಷ್ಟವಾದ ಪುರುಷರನ್ನು ಆಯ್ದುಕೊಂಡು ನಿಯೋಗ ಆಚರಣೆಯ ನೆಪದಲ್ಲಿ ಬಸಿರಾಗಿದ್ದಾಳೆಎಷ್ಟೆಂದರೂ ಅವಳ ಕುಟುಂಬದ ಮೇಲೆ ರಾಜ ಪರಿವಾರಕ್ಕೂ ವಿಶೇಷ ಮಮತೆ ಇದೆಅದಕ್ಕಾಗಿ ಭವಿಷ್ಯಕ್ಕಾಗಿ ಬದುಕಿನ ಗತಿವಿಧಿಗಳನ್ನು  ಅತ್ಯಂತಸ್ಪಷ್ಟವಾಗಿ ಚಲಾಯಿಸುತ್ತಿದ್ದಾಳೆ.
ಆದರೆ ಎಲ್ಲಾ ತ್ಯಾಗಗಳ ಹೊರತಾಗಿಯೂ ನಾನಿಲ್ಲಿ ಕುಳಿತು ಏನು ಮಾಡುತ್ತಿದ್ದೇನೆ..ಕುರುವಂಶಜನಾಗಿ ಹಿರಿಯ ರಾಜಕುಮಾರ ತನ್ನ ಹೊಟ್ಟೆಯಿಂದ ಹುಟ್ಟಬೇಕಿತ್ತುಎಲ್ಲಾ ಸರಿಯಾಗಿದ್ದರೂ ತಾನು ಹಡೆಯುತ್ತಿಲ್ಲಅತ್ತ ಸಂಸಾರ ವಿಮುಕ್ತನಾಗಿದ್ದರೂಪಾಂಡುವಿನ ಕುಟುಂಬ ತನಗಿಂತಲೂ ಮುಂಚೆ ಮಗು ಹಡೆದಾಗಿದೆತಾಳ್ಮೆ ಕಳೆದುಕೊಂಡ ಗಾಂಧಾರಿ ಹೊಟ್ಟೆಯ ಮೇಲೆ  ಭಾರ ಇಳಿಸಿದಳುಅಲ್ಲಿಗೆ ಅದ್ಯಾವ ಸಮಸ್ಯೆ ಉದರದಲ್ಲಿತ್ತೋಗಟ್ಟಿಪಿಂಡ ರಕ್ತ ರಾಡಿಯಾಗಿ ಈಚೆಗೆ ಬಂತುರಾಜ ಭವನದಲ್ಲಿಭ್ರೂಣ ಅರಚಿತುಅಲ್ಲಿಗೆ ಆಗಬಾರದ ಎಡವಟ್ಟಾಗಿ ಹೋಗಿತ್ತುಗಟ್ಟಿ ಪಿಂಡ ನೆಲದ ಪಾಲಾಗಿತ್ತುಅದ್ಯಾವ ಘಳಿಗೆಯಲ್ಲಿ ಎಡವಟ್ಟಾಗಿತ್ತೊ ಗಾಂಧಾರಿ ದ್ರಾಕ್ಷಾ ಗರ್ಭಕ್ಕೆ ಈಡಾಗಿದ್ದಳುಕೇವಲ ಬಸಿರಿನ ಲಕ್ಷಣ ಮತ್ತು ಭ್ರೂಣ ಬೆಳೆದ೦ತೆ ಬೆಳೆದುಬಿಡುವಗರ್ಭ ಎರಡು ವರ್ಷಗಳವರೆಗೂ ಹಡೆಯುವುದೇ ಇಲ್ಲಉಳಿದೆಲ್ಲವೂ ಮೂಲ ಬಸಿರಿನಂಥ ಲಕ್ಷಣಗಳಿದ್ದರೂ ಮಗುವಾಗದ ಗರ್ಭವನ್ನು ದ್ರಾಕ್ಷಾ ಗರ್ಭ ಎಂದು ಗುರುತಿಸುತ್ತಾರೆ.
ಹೀಗೆ ಆಘಾತಕ್ಕೆ ಸಿಕ್ಕು ಹೊರಬಂದ ರಕ್ತ ಸ್ರಾವದಿಂದ ಗಾಂಧಾರಿಯ ಜೀವಕ್ಕೆ ಅಪಾಯವಾಗುವುದರಲ್ಲಿತ್ತುಸತ್ಯವತಿಯ ಕೋರಿಕೆಯ ಮೇರೆಗೆ ಹಿಂದೊಮ್ಮೆ ಕುಟುಂಬಕ್ಕೆ ನೆರವಾಗಿದ್ದ ವೇದವ್ಯಾಸ ಹಸ್ತಿನಾವತಿಯ ಅರಮನೆಗೆ ಕಾಲಿಟ್ಟು ಪರಿಸ್ಥಿತಿಸಂಭಾಳಿಸಿದಗಿಡ ಮೂಲಿಕೆಗಳ ಅಂಶಗಳಿಂದ ಸೂಕ್ತ ಶೂಶ್ರೂಷೆ ಮಾಡಿ ಗಾಂಧಾರಿಯನ್ನು ಬದುಕಿಸಿದಸರಿಯಾಗಿ ಬಸಿರಾಗಲು ಅಗತ್ಯದ ಔಷಧೋಪಚಾರವನ್ನೂ ಮಾಡಿದಇದೆಲ್ಲ ಕಳೆದುಮತ್ತೆ ಗರ್ಭಧರಿಸಿ ಧೃತರಾಷ್ಟ್ರನನ್ನು ಅಪ್ಪನನ್ನಾಗಿಸಿದ್ದಳುಗಾಂಧಾರಿಅದೇ ಹೊತ್ತಿಗೆ ಸರಿಯಾಗಿ ಕಾಡಿನಲ್ಲಿ ಎರಡನೆಯ ಬಾರಿಗೆ ಕುಂತಿಯು ಗರ್ಭ ತಳೆದಿದ್ದಳುಕೆಲವೇ ಗಂಟೆಗಳ ವ್ಯತ್ಯಾಸದಲ್ಲಿ ರಾಜಭವನದಲ್ಲಿ ದುರ್ಯೋಧನ ಹುಟ್ಟಿದ್ದರೆಅತ್ತ ಕಾಡಿನಲ್ಲಿ ಭೀಮ ಭೂಮಿಗೆ ಕಾಲಿರಿಸಿದ್ದವಾಯು ಎನ್ನುವ ದೈತ್ಯಜಟ್ಟಿಯೊಡನೆ ಕಾಡಿನಲ್ಲಿ ವಿಹರಿಸಿದ್ದ ಕುಂತಿ ಅಸಾಧಾರಣ ಬಲಶಾಲಿ ಮಗುವನ್ನು ಹೆತ್ತಿದ್ದಳುಆದರೆ ಇತ್ತ ಅಂತ:ಪುರದ ಕಡೆಯಿಂದ ಕೇಳಬೇಕಾದ ಮಗುವಿನ ಅಳುವಿಗೆ ಖುಷಿಯ ಬದಲಾಗಿ ಸಮಯ ಮತ್ತು ಜ್ಯೋತಿಷ್ಯದ ಆಧಾರದ ಮೇಲೆ ಅಪಸ್ವರಗಳುಎದ್ದಿದ್ದವುತಪ್ಪು ಮಗುವಿನದೇನಲ್ಲ ಹೊತ್ತಿಗಿನ ಪ್ರಕೃತಿಯೇ ಹಾಗಿದ್ದರೆಹೊರಗೆ ಕಾಡಿನಲ್ಲಿ ನಾಯಿನರಿಗಳು ಊಳಿಡುವ ಹೊತ್ತಾಗಿದ್ದರೆ  ಮಗುವೇನು ಮಾಡೀತು..ಸಹಾಯಕ ವಿವರಿಸುತ್ತಿದ್ದರೆ ತಡಕಾಡುತ್ತಲೇ ಅಂತ:ಪುರಕ್ಕೆ ಧಾವಿಸಿದ್ದಧೃತರಾಷ್ಟ್ರ.
ಇಷ್ಟೆಲ್ಲಾ ಹಿನ್ನೆಲೆಯಲ್ಲಿ ಸುಯೋಧನ ಎಂಬ ಗಂಡು ಮಗು ಅಧಿಕೃತವಾಗಿ ಹಸ್ತಿನಾವತಿಯ ಅರಮನೆಯಲ್ಲಿ ಹುಟ್ಟಿತ್ತುಮತ್ತದೆ ಮಾತುಕೈಯ್ಯಲ್ಲಿ ಗುಂಡು ಗುಂಡಾದ ಮಗುವನ್ನು ಇಡುತ್ತಾ ನುಡಿದಿದ್ದ ಭೀಷ್ಮ.
 ಮಗುವಿನ ಭವಿಷ್ಯದಲ್ಲಿ ಕುಟುಂಬ ನಾಶಕ್ಕೆ ಕಾರಣವಾಗುವ ಲಕ್ಷಣಗಳಿವೆಆಚಾರ್ಯರು ಆಡುವ ಮಾತುಗಳು ಸುಳ್ಳಾಗಲಾರವುತ್ಯಜಿಸಿ ಬಿಡು.."
"..ಎಂಥಾ ಮಾತು..ಇಷ್ಟೆಲ್ಲಾ ಕಷ್ಟಪಟ್ಟು ಪಡೆದ ಗಂಡು ಮಗುವನ್ನು ತ್ಯಜಿಸಿ ಬಿಡುವುದೇಬೇಕಿದ್ದರೆ ಮಗುವಿನ ಪಾಪ ಕರ್ಮ ಕಳೆಯಲು ಬೇಕಾದ ಪುಣ್ಯಕಾರ್ಯಹೋಮಹವನ ಇತ್ಯಾದಿ ಮಾಡಿಸಿದರಾಯ್ತುಅದನ್ನು ಬಿಟ್ಟು ಮಗುವನ್ನುತ್ಯಜಿಸುವುದೇ..?" ಕೊಂಚ ಸಿಡುಕಿದ್ದ ಧೃತರಾಷ್ಟ್ರ.
ಹೀಗೆ ಮಗುವೊಂದು ಭೂಮಿಗೆ ಇಳಿಯುತ್ತಲೇ ವಂಶಕಂಟಕನೆಂಬ ಹಣೆಪಟ್ಟಿಗೆ ಒಳಗಾಗಿ ಮೊದಲ ಅಳುವಿಗೆ ಬಾಯ್ಬಿಡುವ ಅವನ ಮೇಲೆ ತೂಗುಕತ್ತಿ ತೂಗತೊಡಗಿತ್ತುಬರೀ ಯುದ್ಧ ಮಾಡಬಲ್ಲ ಭೀಷ್ಮನಿಗೇನು ಗೊತ್ತಾಗುತ್ತದೆ ತಂದೆಯ ಹೃದಯದಸಂಕಟಸಂಸಾರಿಯಾಗಿದ್ದರೆ  ಎಲ್ಲ ಸಂಕಟಗಳು ಅರ್ಥವಾಗುತ್ತಿದ್ದವುರಣರಂಗ ಮತ್ತು ರಾಜ್ಯಾಧಿಕಾರ ಬಿಟ್ಟರೆ ದೊಡ್ಡಪ್ಪನಿಗೇನು ಗೊತ್ತು ಅಪ್ಪನ ಕರುಳ ಸಂಕಟ ಏನೆಂದುಆದ್ದರಿಂದಲೇ ಭೀಷ್ಮ ನುಡಿಯುವ ಮುಂಚೆ ಅಬ್ಬರಿಸಿದ.
ಸಾಧ್ಯವಿಲ್ಲ ದೊಡ್ಡಪ್ಪನನಗೇ ಗೊತ್ತು ಮಗುವನ್ನು ಪಡೆಯಲು ಆದ ಸಂಕಟಅದಕ್ಕಿಂತಲೂ ಹೆಚ್ಚಾಗಿ ಗಾಂಧಾರಿಗೆ ಆದ ಸಂಕಟಇವೆಲ್ಲವನ್ನು ಬಾಯ್ಬಿಟ್ಟು ವಿವರಿಸಲಾಗುವುದಿಲ್ಲಆದ್ದರಿಂದ ಮಗುವನ್ನು ಸಾತ್ವಿಕವಾಗೂ ರಾಜಋಷಿಗಳಸಹಾಯದಿಂದಲೂ ಬೆಳೆಸೋಣರಾಜ ಕುಟುಂಬಕ್ಕೆ ಯಾವುದನ್ನೂ ಪಡೆಯಲಾಗುವುದಿಲ್ಲ ಎಂದೇನಿಲ್ಲಯಾವ ರೀತಿಯ ಗುರುಗಳು ಬೇಕೊ ಅವರನ್ನು ನಿಯಮಿಸಿ ಅವನನ್ನು ಚೆನ್ನಾಗಿ ಬೆಳೆಸೋಣಅಲ್ಲಿಗೆ ಮಗು ಒಳ್ಳೆಯದೇ ಆಗುತ್ತದೆಕುರುವಂಶದರಾಜಕುಮಾರನಿಗಾಗಿ ಕಳೆದ ನಾಲ್ಕಾರು ವರ್ಷಗಳಿಂದ ಪಟ್ಟ ಕಷ್ಟ ಅಷ್ಟಿಷ್ಟಲ್ಲವಲ್ಲಈಗ ತಾನಾಗೇ ಗಂಡು ಮಗುವಾಗುತ್ತಿದ್ದರೆ ಕೇವಲ ಭವಿಷ್ಯವಾಣಿ ನಂಬಿ ಅದನ್ನು ತ್ಯಜಿಸುವುದೇ...ಆಗುತ್ತಿರುವ ಪ್ರಕೃತಿ ಆಕಸ್ಮಿಕಗಳಿಗೆನಿಸರ್ಗ ನಿಯಮದಂತೆಬದಲಾಗುತ್ತಿರುವ ಪ್ರಾಕೃತಿಕ ವೈಪರೀತ್ಯಗಳಿಗೆ ಭೂಮಿಯ ಸಹಜ ವರ್ತನೆಯ ಕಾರಣವನ್ನು ಏನೂ ಗೊತ್ತಿಲ್ಲದೆ ಭೂಮಿಗಿಳಿಯುತ್ತಿರುವ ಹಸುಕೂಸಿನ ತಲೆಗೆ ಹೊರಿಸುವುದೇಕೆ..ಕೊಂಚ ಹಿಂದಿನ ಕಾಲಾವಧಿಯತ್ತ ಮನಸ್ಸು ಹರಿಸಿ ದೊಡ್ಡಪ್ಪಏನಾಯಿತು ಯಾದವರ ವಂಶದಲ್ಲಿ...ಭೂಮಂಡಲವೇ ಸಾಕ್ಷಿ ಅದಕ್ಕೆಅಗತ್ಯ ಇತ್ತೋ ಇಲ್ಲವೋ ಆಗಿನ ಪ್ರಸಂಗದಲ್ಲಿ ಅನಗತ್ಯವಾಗಿ ಕಂಸನನ್ನು ಖಳನನ್ನಾಗಿಸಿದ್ದು ಸುಳ್ಳೆ...ಸರಿಯಾಗಿ ಅವನ ಪಾಲನೆಯನ್ನು ಮಾಡದ್ದು ಯಾರ ತಪ್ಪು..?
ಅಷ್ಟಕ್ಕೂ ಇತಿಹಾಸದಲ್ಲಿ ಕಂಸನ ದುರಾಡಳಿತ ಮತ್ತು ಕೆಟ್ಟ ನಡವಳಿಕೆಗಳಿಗೆ ಕಾರಣರು ಯಾರು..ಆಗ ಅವನು ಹುಟ್ಟಿದಾಗ ಅವನನ್ನು ತ್ಯಜಿಸುವ ಮಾತುಗಳು ಬಂದವುಕಂಸನ ಕಾರಣದಿಂದ ವಿನಾಶವೇ ಪ್ರಾಪ್ತಿಯಾಗಲಿದೆ ಎಂದು ತಾನೆ ಅವನನ್ನುನೀರಿನಲ್ಲಿ ತೇಲಿಬಿಟ್ಟಿದ್ದುಹಾಗೆ ಹುಟ್ಟುತ್ತಲೇ ಮನೆಯಿಂದ ಹೊರ ತಳ್ಳಿದ್ದರಿಂದಾಗೇಅವನಲ್ಲಿ ರಾಜ ಕುಟುಂಬದ ಸಂಸ್ಕಾರ ಬೆಳೆಯಲಿಲ್ಲದುರ್ಬುದ್ಧಿಯವನಾಗಿ ಬೆಳೆದಿರಬಹುದು ಸಂಗದೋಷದಿಂದಇದಕ್ಕೆಲ್ಲಾ ಯಾರು ಹೊಣೆ..ಅರಮನೆಯಲ್ಲೆ ಇದ್ದುಸರಿಯಾದ ವಿದ್ಯಾರ್ಜನೆ ನಡೆದಿದ್ದರೆ ಕಂಸನೇಕೆ ಸ್ವತತಂದೆಯನ್ನು ಬಂಧಿಸುವ ಕೆಲಸಕ್ಕೆ ಕೈ ಹಾಕುತ್ತಿದ್ದಹೇಗೋ ಒಂದು ರೀತಿಯಲ್ಲಿನಮ್ಮ ಕುಟುಂಬಕ್ಕೆಕುಲಕ್ಕೆ ಮಕ್ಕಳಾಗದ ಕರ್ಮವನ್ನು ಕಳೆಯಲು ಹುಟ್ಟಿರುವ  ಕುಲ ಪುತ್ರನನ್ನು ಹೇಗೆತ್ಯಜಿಸಬಹುದು..ಈಗ ನಾನು ತ್ಯಜಿಸಿದರೂ ಮುಂದೊಂದು ದಿನ ತನ್ನ ಪೂರ್ವ ಇತಿಹಾಸವನ್ನುತಾನು ಕುರುಕುಲದ ಮೂಲ ವಂಶಜ ತನ್ನನ್ನು ಅನ್ಯಾಯವಾಗಿ ಬೀದಿ ಪಾಲು ಮಾಡಿದರು ಎಂದು ಇವನು ಅರಿತರೆ..ಹಾಗೆ ಅರಿತವನು ರಾಜ್ಯದ ಆಸೆಗೆಪ್ರತೀಕಾರಕ್ಕೆ ನಮ್ಮನ್ನೆಲ್ಲಾ ಎದುರಿಸಿ ನಿಲ್ಲಲಾರ ಎಂದು ಏನು ಖಾತರಿ..?
ಆಗ ನನಗೂಉಗ್ರಸೇನನ ಗತಿಯಾಗುವುದರಲ್ಲಿ ಸಂಶಯವೇ ಇಲ್ಲಅದಕ್ಕಿಂತ ಜೊತೆಯಲ್ಲಿದ್ದೇ ಮಗು ಬೆಳೆಯಲಿಕನಿಷ್ಠ ಕುರುವಂಶದ ಸಂಸ್ಕಾರವನ್ನಾದರೂ ನೋಡುತ್ತಾ ಬೆಳೆದು ಬುದ್ಧಿವಂತನೂಸತ್ಕರ್ಮಿಯೂ ಆಗಬಹುದುಆದ್ದರಿಂದ ಜ್ಯೋತಿಷ್ಯಏನೆ ಹೇಳಲಿಅವರಲ್ಲಿ ಅದಕ್ಕೊಂದು ಪರಿಹಾರ ಕೂಡಾ ಇದ್ದೇ ಇರುತ್ತದೆಜೊತೆಗೆ ರಾಜಪ್ರಾಂಗಣದಲ್ಲಿಅರಸು ಮನೆತನದ ಒಡನಾಡಿಯಾಗಿ ಬೆಳೆಯುವ ಮಗು ದಾರಿ ತಪ್ಪೀತೆ..ಹಾಗಾಗಿ ಬೆಳೆಯುವಾಗಲೇ ಅದರ ಭವಿಷ್ಯವನ್ನು  ಅರಮನೆಯಸರ್ವರೂ ವ್ಯವಸ್ಥಿತವಾಗಿಧನಾತ್ಮಕವಾಗಿ ನಿರ್ಧರಿಸಲಿಹಾಗಾಗಿ ಈಗ ಇನ್ಯಾವುದೋ ಜ್ಯೋತಿಷಪುರಾಣದ ಕಥಾನಕ ಬಲಗಳ ಬೆಂಬಲವನ್ನು ನೀವು ಸೂಚಿಸಿದರೂ ಮಗುವನ್ನು ತ್ಯಜಿಸುವ ಮಾತೇ ಇಲ್ಲ.." ಅವನ ಮಾತಿಗೆ ಉಳಿದವರು ಮರುನುಡಿಯಲಿಲ್ಲ.
ಉಗ್ರಸೇನನ ಉದಾಹರಣೆಯನ್ನು ಧೃತರಾಷ್ಟ್ರ ನುಡಿಯುತ್ತಿದ್ದರೆ ಅದಕೊಂದು ಸಕಾರಣ ನೀಡಲು ಯಾರಿಗೂ ಸಾಧ್ಯವಾಗಲಿಲ್ಲಪಕ್ಕದಲ್ಲೇ ನಿಂತಿದ್ದ ವಿದುರ ಅವನ ಭುಜ ತಟ್ಟಿ ಹೊರನಡೆದಎಷ್ಟೋ ಹೊತ್ತಿನವರೆಗೂ ಅವನೊಂದಿಗೆ ನಿಂತಿದ್ದವನು ಶಕುನಿಮಾತ್ರನಿಧಾನಕ್ಕೆ ಅವನ ಮಡಿಲಿನಿಂದ ಮಗುವನ್ನು ಎತ್ತಿಕೊಂಡು,
ಭಾವಾಮಗುವನ್ನು ತಂಗಿಯ ಬಳಿಗೆ ಕೊಟ್ಟು ಬರುತ್ತೇನೆಅಂದ ಹಾಗೆ ನೀವೇನೂ ಚಿಂತಿಸಬೇಡಿಅದಕ್ಯಾವ ಕೆಟ್ಟ ದೃಷ್ಟಿಯೂ ತಾಕದಂತೆ ನಾನು ನಿಂತು ನೋಡಿಕೊಳ್ಳುತ್ತೇನೆಹಸ್ತಿನಾವತಿಯ ಭವಿಷ್ಯತ್ತಿನ ಮಹಾರಾಜನನ್ನು ಸರ್ವ ರೀತಿಯಲ್ಲೂಸನ್ನದ್ಧವಾಗಿಸಿ ಬೆಳೆಸೋಣಇದು ನನ್ನ ಮಾತು ಮಹಾರಾಜನೀವು ಬೇಸರಿಸದಿರಿಇನ್ನು ಮೇಲೆ ನನ್ನೆಲ್ಲಾ ಸಮಯವೂ ಇವನಿಗೆ ಮುಡಿಪು ಇದಕ್ಕೆ ನಿಮ್ಮ ಬೆಂಬಲವಿದ್ದರೆ ಸಾಕು... ಭಾವ. " ಎಂದ ತೀರ ನಯವಾಗಿ ಹೊತ್ತಿಗೆ ಅಂತಹದ್ದೊಂದುಮಾತೂಅನುನಯವಾದ ಬೆಂಬಲವೂ ಅವನಿಗೂ ಬೇಕಿತ್ತುಕೂಡಲೇ ನುಡಿದ ಧೃತರಾಷ್ಟ್ರ.
ಅಷ್ಟು ಸಾಕು ಶಕುನಿನಿನ್ನ ನಿಯತ್ತಿನ ಮೇಲೆ ನಮಗೆ ಸಂಶಯವಿಲ್ಲಈಗ ಮಾತೂ ಬೇರೆ ಕೊಟ್ಟಿದೀಯಅದು ನಿನ್ನದೇ ತಂಗಿಯ ಮಗುಕಣ್ಣಿಲ್ಲದ ನನಗಿಂತ ನೀನು ಅದರೊಂದಿಗೆ ಸದಾಕಾಲವೂ ಇದ್ದು ಬಿಟ್ಟರೆ ನನಗ್ಯಾವ ಚಿಂತೆಯೂ ಇಲ್ಲದ ನೆಮ್ಮದಿಎಲ್ಲ ರೀತಿಯಲ್ಲೂ ಅವನ ಬೆಳವಣಿಗೆಯನ್ನು ಉತ್ತಮವಾಗಿ ರೂಪಿಸುಯೋಚಿಸಬೇಡ ಶಕುನಿಹಸ್ತಿನಾವತಿ ನಿನ್ನ ಋಣ ಮರೆಯುವುದಿಲ್ಲಕಾರಣ ಅವನು ಕೇವಲ ನಿನ್ನ ತಂಗಿಯ ಮಗುವಲ್ಲಹಸ್ತಿನಾವತಿಯ ಭವಿಷ್ಯದ ರಾಜಕುಮಾರಯುವರಾಜ.. ಮಹಾ ಸಾಮ್ರಾಜ್ಯದ ಮಹಾರಾಜ.. ನೆನಪಿರಲಿ..." ಎಂದ.
ಇಂಥಾ ದೊಡ್ಡ ಮಾತೇಕೆ ಮಹಾರಾಜ ನಾನು ಅಷ್ಟು ಮಾಡದಿದ್ದರೆ ಹೇಗೆ..ಅದು ನನ್ನ ಕರ್ತವ್ಯ ಕೂಡಾಯೋಚಿಸಬೇಡಿಎಷ್ಟೆಂದರೂ ನಾನು ಅವನ ಸೋದರ ಮಾವಇನ್ನುಳಿದದ್ಡು ನನಗೆ ಬಿಡಿ.." ಎಂದು ನಡೆದುಹೋದಅವನ ಪಕ್ಕೆಯಲ್ಲಿದ್ದದಾಳಗಳು ಕದಲುತ್ತಾ ಕಿಣಿ ಕಿಣಿ ನಾದ ಹೊರಡಿಸಿದ್ದು ಕೇಳಿಸಿತುಹೀಗೆ ಏನೂ ಅರಿಯದ ಕಂದವೊಂದು ಹುಟ್ಟುತ್ತಲೇ ಹಲವು ದಿಶೆಯಲ್ಲಿ ಚರ್ಚೆಗೆ ಸಿಕ್ಕು ತನ್ನ ಭವಿಷ್ಯವನ್ನು ನಿರ್ದೇಶಿಸಲು ಇನ್ಯಾರಾದೋ ಕೈಗೆ ದಂಡವಾಗಿಯೂಇನ್ನಾರದೋ ದೂರದದುರಾಲೋಚನೆಗೆ ಸಮಿತ್ತುವಾಗತೊಡಗಿತ್ತು.
*   *    *
ಒಂದು ಕಡೆಯಲ್ಲಿ ಮೊದಲ ಮಗು ಬೆಳೆಯತೊಡಗಿದಂತೆ ಒಂದರ ಹಿಂದೆ ಒಟ್ಟಾರೆ ನೂರೊಂದು ಮಕ್ಕಳು ಜನಿಸಿದರುಅವರೊಂದಿಗೆ ದುಶ್ಯಿಲೆ ಎಂಬ ಹೆಣ್ಣು ಮಗುವು ಕೂಡಾ ಜನಿಸಿತ್ತುಅವರೆಲ್ಲಾ ಕೌರವರೆಂದು ಗುರುತಿಸಿಕೊಂಡಿದ್ದುರಾಜಕುಮಾರಿಯನ್ನು ತಂದು ಧೃತರಾಷ್ಟ್ರನಿಗೆ ಮದುವೆ ಮಾಡಿದ್ದು ಸಾರ್ಥಕ ಎನ್ನುವಂತೆ ಕಣ್ಣಿಲ್ಲದಿದ್ದರೂ ಅಷ್ಟೊಂದು ಮಕ್ಕಳನ್ನು ಮಾಡುವ ಮೂಲಕ ಕುರುವಂಶ ಬೆಳೆಯಲು ಅನುವಾಗುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸತೊಡಗಿದ್ದಅದನ್ನೆಲ್ಲನೋಡುತ್ತಿದ್ದ ಭೀಷ್ಮನಿಗೂ ಈಗ ಮತ್ತೆ ಪಾಂಡುವನ್ನು ಹಿಂದಕ್ಕೆ ಕರೆಸುವ ಯೋಚನೆ ಆರಂಭವಾಗಿತ್ತುಕಾರಣ ಅವನಿಗೂ ಅಲ್ಲಿ ನಿಯೋಗದಿಂದ ಮಕ್ಕಳಾಗಿವೆಅವನ ಪ್ರಕಾರ ಬಿತ್ತಿದ ಬೀಜ ಎಲ್ಲಿಯದೆ ಆದರೂ ಕ್ಷೇತ್ರ ತಮ್ಮದೇ ಆಗಿದ್ದರಿಂದಸಂಪೂರ್ಣಕುರು ಕುಲದ್ದೇ ಆಗುತ್ತದೆ ಎಂದು
ಕುಂತಿ ಪಾಂಡುವನ್ನು ನಿಪುತ್ರಕನನ್ನಾಗಿಸುವ ಬದಲಿಗೆ ನಿಯೋಗವಾದರೂ ಸೈ ಎಂದು ಅವನ ಮಾತಿನಂತೆ ತನಗಿಷ್ಟವಾದ ಬಲಿಷ್ಠ ಕುಲೀನ ಮತಸ್ಥರನ್ನು ಒಲಿಸಿಕೊಂಡು ಅವರೊಂದಿಗೆ ಏಕಾಂತದಲ್ಲಿ ಸಮಯೋಚಿತ ಸಮಯದಲ್ಲಿನ ಸಮಾಗಮದಿಂದನಿಯೋಗ ಆಚರಿಸಿಮೂವರು ಮಕ್ಕಳನ್ನು ಪಡೆದಿದ್ದರೆಪಾಂಡುವಿನ ಎರಡನೆ ಮಡದಿ ಮಾದ್ರಿಯೂ ಕೂಡಾ ಹಿಂದುಳಿಯದೆ ನಿಯೋಗಕ್ಕೆ ಸೈ ಎಂದು ಎರಡು ಮಕ್ಕಳನ್ನು ಪಡೆದಿದ್ದಾಳೆರಾಜ್ಯದ ಹಿತದೃಷ್ಠಿ ಮತ್ತು ಹಿತಾಸಕ್ತಿಗಳ ಒಲವಿನಿಂದರಾಜಮನೆತನದ ಸ್ತ್ರೀಯರು ಹೀಗೆ ನಿಯೋಗದ ಹೆಸರಿನಲ್ಲಿ ತಮ್ಮ ಮನಮೆಚ್ಚಿದ ಪರಪುರುಷರನ್ನು ಆಹ್ವಾನಿಸುವುದು ಹೊಸದೇನಲ್ಲಅದು ವಂಶಾಭಿವೃದ್ಧಿಯೂ ಆಗುತ್ತಿತ್ತು ಜೊತೆಗೆ ನಿಸರ್ಗ ಸಹಜ ಪ್ರೇಮಕಾಮಗಳ ಬೆಸುಗೆಯ ಒತ್ತಾಸೆಗೆ ಸ್ವಚ್ಛಂದಸಮಾಗಮಕ್ಕೆ ಅವಕಾಶವೂ ಆಗುತ್ತಿತ್ತುಅದರಲ್ಲಿ ಸಾಮಾಜಿಕವಾಗಿ ಯಾವ ತಪ್ಪೂ ಇಲ್ಲವಲ್ಲ.
ಹೇಗೋ ಒಟ್ಟಾರೆ ತಂತಮ್ಮ ಮನದಾಸೆಗಳು ಈಡೇರಲೇಬೇಕೆನ್ನುವುದು ರಾಜಮನೆತನದ ಸ್ತ್ರೀಯರ ಅಪೇಕ್ಷೆಅಭೀಪ್ಸೆಗಳಿಗೆ ಈಡಾಗದ ಪುರುಷರಾದರೂ ಯಾರಿದ್ದಾರೆ..ಅದೂ ಖುದ್ದಾಗಿ ಸ್ತ್ರೀಯೊಬ್ಬಳು ಆಹ್ವಾನಿಸಿದರೆ ಸ್ವಯಂ ಕುಲೀನ ಯಾಕೆಎಂಥಾ ಮೇಲ್ಸ್ತರದ ಗಂಡಸೂ ಕಚ್ಚೆ ಬಿಚ್ಚಿಕೊಂಡು ಬಂದುಬಿಡುತ್ತಾನೆ ಎನ್ನುವುದು ಭೂಮಿಯ ಹುಟ್ಟಿನೊಂದಿಗೆ ಬಂದ ಆಜೀವ ರಹಸ್ಯಇದರಲ್ಲಿ ಹೊಸದೇನೂ ಇಲ್ಲಅದು ಗಂಡಸರ ಜೀವವಾಹಿನಿಗಳಲ್ಲೇ ಅಡರಿರುವ ತಂತುಗಳ ಪ್ರತಾಪ ಅಷ್ಟೆಹಾಗಾಗಿಕಾಡಿನಲ್ಲಿದ್ದೇ ತಮ್ಮ ಸಂತತಿ ಮುರುಟದಂತೆಯೂತನ್ನ ಮನೆತನದ ಬಳ್ಳಿಗಳು ಚಿಗುರುವಂತೆಯೂ ನೋಡಿಕೊಳ್ಳಲು ಸುಲಭವಾಗಿ ನಿಯೋಗದ ಸಹಾಯ ಪಡೆದವಳು ಕುಂತಿಆದರೆ ಇಲ್ಲಿರುವ ನೂರೊಂದು ಕೌರವರಿಗಿಂತಲೂ ಕಾಡಿನಲ್ಲಿದ್ದಪಾಂಡುವಿನ ಮಕ್ಕಳು ಪಾಂಡವರು ಅತ್ಯಂತ ಪ್ರತಿಭಾಶಾಲಿಗಳೂಹೆಚ್ಚು ಮೇಧಾವಿಗಳೂ ಆಗಿ ಬೆಳೆಯುತ್ತಿದ್ದಾರಂತೆ ಎಂದು ಅರಮನೆಯ ಚಾರರು ಸುದ್ದಿ ಕೊಡುತ್ತಿದ್ದರೆ ಧೃತರಾಷ್ಟ್ರ ಒಳಗೊಳಗೆ ಕೊರಗುತ್ತಿದ್ದಅದಕ್ಕೆ ಕಾರಣವೂ ಇಲ್ಲದಿಲ್ಲ.
ಅಲ್ಲಿ ಅದ್ವಿತೀಯರಾದ ತಪಸ್ವಿಗಳುಅಪ್ರತಿಮ ಧನುರ್ವಿದ್ಯಾ ಪರಿಣಿತರು ಪಾಂಡುವಿನ ಮಕ್ಕಳಿಗೆ ತರ ತರಹದ ಕೌಶಲ್ಯವನ್ನು ಹೇಳಿಕೊಡುತ್ತಿದ್ದರೆಬೇರಾವ ಕೆಲಸವೂ ಸಮಯದ ಅಭಾವವೂ ಇರದ ಪಾಂಡುಪುತ್ರರು ಆಸಕ್ತಿಯಿಂದ ವಿದ್ಯೆಯನ್ನುಕಲಿಯತೊಡಗಿದ್ದರುಇತ್ತ ಅರಮನೆಯಲ್ಲೂ ಮಕ್ಕಳು ಒಬ್ಬರಿಗಿಂತಲೂ ಒಬ್ಬರು ಮೇಲಾಟ ನಡೆಸುತ್ತಿದ್ದರೆಅವರು ಯಾವ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಕೇಳಿಕೊಂಡು ವಿಚಾರಿಸಿಕೊಳ್ಳುವುದರಲ್ಲೇ ಧೃತರಾಷ್ಟ್ರ ಸುಸ್ತಾಗುತ್ತಿದ್ದದಿನವಿಡಿಅರಮನೆಯ ತುಂಬಾ ಅವರ ಕಲರವವೇ ರಿ೦ಗಣಿಸತೊಡಗಿತ್ತುಅದರಲ್ಲೂ ಮೊದಲ ಮಗ ದುರ್ಯೋಧನ ಎಲ್ಲ ಮಕ್ಕಳಿಗೂ ನಾಯಕನಂತೆ ತಂಡವನ್ನು ನಡೆಸತೊಡಗಿದ್ದ.
ಅದೇನೋ ಉಳಿದ ಸಣ್ಣವರಿಗೂ ಅವನ ಮಾತುಠೀವಿದೈಹಿಕ ಬಲಗತ್ತುಗಾಂಭೀರ್ಯಗಳು ಹಿಂಬಾಲಕರನ್ನಾಗುವಂತೆ ಪ್ರೇರೇಪಿಸುತ್ತಿದ್ದವುದೈಹಿಕವಾಗಿ ಹುಟ್ಟಾ ಬಲವೂಅಪೂರ್ವ ಬುದ್ಧಿ ಶಕ್ತಿಯೂ ಜೊತೆಗೆ ಎಲ್ಲದರಲ್ಲೂ ಗೆಲ್ಲಬೇಕೆನ್ನುವ ಅವನನಿರಂತರ ಛಲನೋಡುನೋಡುತ್ತಲೇ ಬಾಲ್ಯದಲ್ಲೇ ಅವನನ್ನು ನಾಯಕನ ಪಟ್ಟಕ್ಕೇರಿಸಿದ್ದವುಒಂದು ಕಾರ್ಯ ಅಥವಾ ಮನಸ್ಸಿಗೆ ಬೇಕು ಎನ್ನಿಸಿದ್ದನ್ನು ಪೂರೈಸಿಕೊಳ್ಳಲುಆಡಿದ ಮಾತಿಗೆ ಒಪ್ಪವಾಗಿ ನಿಂತು ಮುಗಿಸುವ ದಕ್ಷತೆಗೆ ಅವನ ಛಲಕ್ಕೆಅರಮನೆಯೇ ಬೆರಗಾಗುತ್ತಿತ್ತುಅವನಾದರೂ ಅಷ್ಟೆತನಗಿಂತ ಚಿಕ್ಕವರನ್ನು ಎಲ್ಲೂ ಎಂದೂ ಕೂದಲೂ ಕೊಂಕದಂತೆ ನೋಡಿಕೊಳ್ಳತೊಡಗಿದ್ದಎಲ್ಲರನ್ನೂ ಸೇರಿಸಿಕೊಂಡು ಎಲ್ಲೆ೦ದರಲ್ಲಿ ದಾಂಗುಡಿಯಿಡುತ್ತಿದ್ದಅರಮನೆ ತೋಟಕಾಡುಮೇಡುನದಿತೀರ ಮಕ್ಕಳ ಸೈನ್ಯದಲ್ಲಿ ಅಲುಗಾಡುತ್ತಿದ್ದವು.
ಅದಕ್ಕಿಂತಲೂ ಧೃತರಾಷ್ಟ್ರನನ್ನು ಧೃತಿಗೆಡಿಸಿದ್ದುಎಲ್ಲಿಯದರೂ ಇವತ್ತಲ್ಲ ನಾಳೆ ಪಾಂಡು ಬಂದು ಸಿಂಹಾಸನ ಕೇಳಿದರೆಅವನೊಂದಿಗೆ ಅವನ ಮಕ್ಕಳೂ ಬಂದು ಮುಂದಿನ ಅಧಿಕಾರವನ್ನು ಸಹಜವಾಗೇ ಪಡೆಯುತ್ತವಲ್ಲ ಎನ್ನುವುದುಕಾರಣತನಗಿಂತಲೂ ಮುಂಚೆ ಸಿಂಹಾಸನವನ್ನು ಏರಿದವನು ಪಾಂಡುಅಲ್ಲಿಗೆ ಇಷ್ಟೆಲ್ಲಾ ಕಷ್ಟಪಟ್ಟ ತಮ್ಮ ಪರಿಸ್ಥಿತಿ ದೇವರಿಗೇ ಪ್ರೀತಿಯಾವುದೇ ಕಾರಣಕ್ಕೂ ಸಿಂಹಾಸನ ಕೈ ಬಿಡಲೂಬಾರದು ಮತ್ತು ತನ್ನ ಮಗನ ಯುವ ರಾಜ್ಯಾಭಿಷೇಕ ನಿರಾಂತಕವಾಗಿಯೂಸಾಗಬೇಕುಆದರೆ ಇದೆಲ್ಲಾ ಸಾಧ್ಯವಾ..ಸ್ವತದೃತರಾಷ್ಟ್ರನಿಗೇ ಸಂಶಯವಿತ್ತುಕಾರಣ ಅವನೊಬ್ಬ ಸಿಂಹಾಸನ ಮತ್ತು ರಾಜಾಜ್ಞೆಗಳ ಮಧ್ಯೆ ಕಾಲೂರಿ ನಿಂತುಬಿಟ್ಟಿದ್ದಅವನ ಮಾತೇ ಸಧ್ಯಕ್ಕೆ ಅಖಂಡ ಭೂಮಂಡಲದುದ್ದಕ್ಕೂ ನಡೆಯುತ್ತಿತ್ತುಹಸ್ತಿನಾವತಿಯ ಮುಖ್ಯ ಬೆನ್ನೆಲುಬು ಅವನೇ ಆಗಿದ್ದಅವನನ್ನು ಒಪ್ಪಿಸುವುದು ಅಥವಾ ಅವನ ವಿರುದ್ಧ ಹೋಗುವುದು ಮಾತ್ರ ಸಾಧ್ಯವೇ ಇರಲಿಲ್ಲ.

No comments:

Post a Comment