Friday, June 16, 2017

ಇದೊಂಥರಾ ಹಲ್ಲಿದ್ದಾಗ ಕಡಲೇ ಇಲ್ಲ ಎನ್ನುವ ಲೆಕ್ಕದಂತೆ...

ಹಿಂದೆಲ್ಲಾ ಸುಲಭವಾಗಿ ದೇವಕಾರು ತಲುಪುವ ಅವಕಾಶ ಇದ್ದಾಗ ಇಲ್ಲಿಗೆ ಕಾಲಿಡದಿದ್ದವರೇ ಹೆಚ್ಚು ಮತ್ತು ಹೀಗೊಂದು ದೇವ ಸದೃಸ್ಯ ಜಲಪಾತ ಇಲ್ಲಿದೆ ಎಂದು ಗೊತ್ತಾಗಿದ್ದೂ ಕೂಡಾ 1993 ರಲ್ಲಿ ಇದರ ಮೊದಲ ವಿಡಿಯೋ ಹೊರಹಾಕಿದಾಗಲೇ. ಆಗೆಲ್ಲಾ ಬೆಂಗಳೂರಿನಿಂದ ಸುಲಭವಾಗಿ ಕೆಲವು ತಂಡಗಳು ಸ್ವಯಂ ತಯಾರಿಯೊಂದಿಗೆ ಬಂದು ಹೋದವು ಎನ್ನುವುದನ್ನು ಹೊರತು ಪಡಿಸಿದರೆ, ಕಾಳಿಯ ಅಗಾಧ ಯೋಜನೆಗಳ ಭಾರಕ್ಕೆ ಸಿಲುಕಿ ಮತ್ತೀಗ ಕೈಗೆಟುಕದಂತೆ ಆಗಿ ಹೋಗಿದೆ ದೇವಕಾರು ಜಲಪಾತ. ಆದರೆ ವಜ್ರ ಜಲಪಾದ ಸಂದರ್ಶಿಸಿದವರು ಮತ್ತೊಮ್ಮೆ ಬೇರೆ ಜಲಪಾತಕ್ಕೆ ಹಂಬಲಿಸಲಾರರು.

ರಸ್ತೆ ಪಯಣ, ಚಾರಣ, ನದಿ ದಂಡೆಯ ನಡಿಗೆ, ದೋಣಿ ಪಯಣ ಹೀಗೆ ಎಲ್ಲ ರೀತಿಯ ಸಂಚಾರಿ ವ್ಯವಸ್ಥೆಯ ಅಗತ್ಯವನ್ನು ಬೇಡುವ ವಜ್ರ ಜಲಪಾತ ಸಧ್ಯ ಮುಕ್ಕಾಲು ಭಾಗ ನೀರಿನಿಂದಾವೃತವಾಗಿದ್ದರೆ ಉಳಿದೊಂದು ಭಾಗ ದಟ್ಟ ಕಾನನದ ಮಧ್ಯೆ ಜಲಪಾತದ ಶಿರೋಭಾಗಕ್ಕೆ ತಾಗಿಕೊಂಡಿದೆ. ಹಾಗಾಗಿ ಆ ರಸ್ತೆ ವ್ಯವಸ್ಥಿತವಾಗುವುದೇ ಇಲ್ಲ. ಏನಿದ್ದರೂ ಕೊಂಚ ಶ್ರಮ ಪಟ್ಟು ಇತ್ತಲಿಂದಲೇ ಪಯಣಿಸಬೇಕು. ಅದಕ್ಕಾಗಿ ಯೋಜನೆ ರೂಪಿಸುವುದೇ ಆದಲ್ಲಿ ಒಂದಿಡಿ ದಿನ ನಿಮ್ಮ ಕೈಯ್ಯಲಿರಲೇಬೇಕು. ಬೆಳಿಗ್ಗೆ ಒಂಬತ್ತರೊಳಗೆ ಹತ್ತಿರದ ಮುಖ್ಯ ಸಂಪರ್ಕ ಕೇಂದ್ರ ಕದ್ರಾ ತಲುಪಿಕೊಂಡರೆ ಸಂಜೆಯ ಹೊತ್ತಿಗೆ ವಾಪಸ್ಸು ಇಲ್ಲಿಗೆ ತಲುಪಬಹುದಷ್ಟೆ.

ಜಲಪಾತಗಳ ಜಿಲ್ಲೆ ಉ.ಕ.ವನ್ನು ದೂರದೂರದಿಂದ ಸಂದಶಿ9ಸುವವರು ಅದೇ ಮಾಗೋಡು, ಉಂಚಳ್ಳಿ, ಕೆಪ್ಪ ಜೋಗ, ಭೈರಿಮನೆ, ಗವಿಗುಂಡಿ, ವಿಭೂತಿ, ಅಣಶಿ, ಶಿವಗಂಗೆ ಹೀಗೆ ಸಿದ್ಧ ಮಾದರಿಯ ರಸ್ತೆಯಲ್ಲಿ ಚಲಿಸಿ, ವಾಹನ ನಿಲ್ಲಿಸಿ ಒಂದಿಷ್ಟು ಮೋಜು ಮಸ್ತಿ ನಡೆಸಿ, ಡಿಜಿಟಲ್ ಕೆಮೆರಾ ಬಂದಿದ್ದಕ್ಕೆ ಈಗೀಗ ಎಲ್ಲಾ ಫೆÇೀಟೊಗ್ರಫರ್‍ಗಳೆ.. ಅಲ್ಲಲ್ಲಿ ನಿಂತು ಕುಂತು ಕ್ಲಿಕ್ಕಿಸಿ ನಡೆದುಬಿಡುತ್ತಾರೆ. ಆದರೆ ದಾರಿಯ ಸಮಸ್ಯೆಯಿಂದ ಸುಲಭಕ್ಕೆ ಲಭ್ಯವಾಗದ ದೇವಕಾರಿನ ವಜ್ರ ಜಲಪಾತ ಸೌಂದರ್ಯದ ಖನಿಯಾಗಿದ್ದರೂ ವರ್ಷದುದ್ದಕ್ಕೂ ತಲುಪುವವರ ಸಂಖ್ಯೆ ಗಣಿನೀಯವಾಗಿ ಕಡಿಮೆಯೇ.

ಹೌದು ದೇವಕಾರು ಮೊದಲಿಗೆ ಅಷ್ಟಾಗಿ ಹೆಸರು ಮಾಡದಿದ್ದರೂ, ಜನ ಸಂಪರ್ಕಕ್ಕೆ ಬಾರದೇ ಉಳಿದು ಹೋಗಿದ್ದರೂ ಸ್ಥಳೀಯವಾಗಿ "ವಜ್ರ" ಜಲಪಾತ ಎಂದು ಸದ್ದಿಲ್ಲದೇ ಹರಿಯುತ್ತಲೇ ಇದೆ ಕಾಡ ಬೆಳದಿಂಗಳಿನಂತೆ. ಆದರೆ ಕದ್ರಾ ಜಲ ವಿದ್ಯುತ್ ಯೋಜನೆಯಡಿಯಲ್ಲಿ ಹಿನ್ನೀರ ವಿಸ್ತಾರ ನೂರಾರು ಎಕರೆ ಕಾಳಿ ನದಿಯ ಹಿಂಭಾಗ ವಿಸ್ತಾರಗೊಂಡಾಗ ದೇವಕಾರಿನ ನೇರ ಸಂಪರ್ಕ ಸಂಪೂರ್ಣವಾಗಿ ಮುಚ್ಚಿಹೋಯಿತು.

ಅಗಾಧ ಎತ್ತರ ಮತ್ತು ರಭಸಕ್ಕೆ ಕಿವಿಗಡಚಿಕ್ಕುವಂತೆ ಶಬ್ದಿಸುತ್ತಾ ಬೀಳುವ ಜಲಪಾತ ಇವತ್ತಿಗೂ ಜಿಲ್ಲೆಯ ವಿಸ್ಮಯ. ಮಳೆಗಾಲದ ಆರಂಭದಿಂದ ಡಿಸೆಂಬರ್‍ವರೆಗೆ ತುಂಬು ಅಗಲದಲ್ಲಿ ಸುರಿಯುವ ದೇವಕಾರು ಜಲಪಾತ ಮೇ ತಿಂಗಳಲ್ಲೂ ಕೂಡ ಖುಷಿ ಕೊಡುವಷ್ಟು ನೀರನ್ನು ಉಳಿಸಿಕೊಂಡು ಹರಿಯುತ್ತಿರುತ್ತದೆ. ಆದರೆ ಸುಲಭಕ್ಕೆ ಈಡಾಗದ ದಾರಿಯ ಸೌಲಭ್ಯದಿಂದಾಗಿ ಮತ್ತು ಸ್ಥಳೀಯವಾಗಿ ಸೌಲಭ್ಯಗಳ ಕೊರತೆಯಿಂದಾಗಿ ಆಸಕ್ತಿ ಇದ್ದರೂ ಇದನ್ನು ತಲುಪುವುದು ಸುಲಭವಾಗುತ್ತಿಲ್ಲ.

ನಾವು ಒಮ್ಮೆ ಕಾಳಿ ನದಿಯ ಹಿನ್ನೀರಿನಲ್ಲಿ ಆಚೆಯ ದಡ ಸೇರಿದರೆ ನಂತರದಲ್ಲಿ ನದಿಯ ಹರಿವಿನ ತಿರುವುಗಳ, ಅಂಚಿನ ಕಾಲು ದಾರಿ ಉಂಟು ಎಂದರೆ ಉಂಟು ಇಲ್ಲ ಎಂದರೆ ಇಲ್ಲಗಳ ನಡುವಿನ ಅಗಾಧ ಕಾಡು ಬೆಳೆಗಳ ನಡುವೆ ಸೊಪ್ಪು ಸದೆ ಸವರುತ್ತಾ ಚಾರಣಕ್ಕಿಳಿದರೆ ಬರೋಬ್ಬರಿ ಎರಡು ಗಂಟೆ ಕಾಡು ದಾರಿ, ದಟ್ಟ ಹಸಿರಿನ ಗದ್ದೆಯ ಅಂಚು, ತೀವ್ರ ಕಡಿದಾದ ಪರ್ವತದ ಮೈ, ನೀರಿನ ಬಂಡೆಗಳ ಒಳಾವರಣದ ಅಗಾಧತೆ, ಮಧ್ಯದಲ್ಲೊಮ್ಮೆ ಎದ್ದುನಿಂತ ಅರ್ಧ ಕೊರಕಲು ಶಿಲಾಬಂಡೆಯ ವೈವಿಧ್ಯಮಯ ಅನುಭವಗಳಿಗೆ ಈಡಾಗುತ್ತಾ ಕಾಳಿನದಿಯ ಪಾತ್ರದಲ್ಲಿ ಎಡತಿರುವನ್ನು ತೆಗೆದುಕೊಳ್ಳುತ್ತಿದ್ದಂತೆ ಕೀ.ಮೀ. ಮೊದಲೆ ಗೋಚರವಾಗುತ್ತದೆ ಅಷ್ಟು ಎತ್ತರದಿಂದ ಧರೆಗುರುಳುತ್ತಿರುವ ದೇವಕಾರು ಜಲಪಾತ.

ಸಾಕಷ್ಟು ಹರಿಯುವ ನೀರಿನ ಸೌಲಭ್ಯವನ್ನು ಹೊರತು ಪಡಿಸಿದರೆ ಎನೆಂದರೆ ಏನೂ ಲಭ್ಯವಾಗದ ದೇವಕಾರಿಗೆ ಹೋಗುವಾಗ ಸಾಕಷ್ಟು ಆಹಾರ ಪದಾರ್ಥಗಳ ಸಂಗ್ರಹ ಒಯ್ಯುವುದು ಅವಶ್ಯ. ಜೊತೆಗೆ ಕೇವಲ ದೇವಕಾರಲ್ಲ ಅದರ ನದಿ ಪಾತ್ರ ಹೊರತು ಪಡಿಸಿ ಈಚೆಯ ದಂಡೆಗೆ ಬಂದ ನಂತರವೂ ರಸ್ತೆಯ ವಿನ: ಎನೂ ಸಿಕ್ಕುವುದಿಲ್ಲ. ಆದ್ದರಿಂದ ಸಂಪೂರ್ಣ ಆಹಾರ ವಯಸ್ಥೆ ಮತ್ತು ಅಗತ್ಯದ ವಸ್ತುಗಳು ಏನೇ ಬೇಕಿದ್ದರೂ ಎಲ್ಲಾ ಒಯ್ದುಕೊಳ್ಳುವುದೇ ಹೊರತಾಗಿ ಎಲ್ಲೂ ಸಹಾಯ ಅಥವಾ ಪೂರೈಕೆಯನ್ನು ನಿರಿಕ್ಷೀಸುವಂತಿಲ್ಲ. ನದಿ ನೀರು ಕುಡಿಯಲು ಅಭ್ಯಂತರ ಇಲ್ಲದಿದ್ದರೆ ಸರಿ. ಇಲ್ಲ ಸಾಕಷ್ಟು ನೀರನ್ನೂ ಬೆನ್ನಿಗೆ ಏರಿಸಿಕೊಳ್ಳುವುದು ಅಗತ್ಯ. ತೀರ ಮೂವತ್ತು ಕಿ.ಮೀ. ದೂರದ ಕದ್ರಾ ಕೂಡಾ ಚಿಕ್ಕ ಊರಿನ ಕೇಂದ್ರ. ಅಲ್ಲೂ ನಮ್ಮ ನಿರಿಕ್ಷೇಯನ್ನು ಮುಟ್ಟುವ ಅಹಾರ ಪದಾರ್ಥ ಸಾದ್ಯವಿಲ್ಲ. ಹಾಗಾಗಿ ಪೂರ್ವ ತಯಾರಿ ಅವಶ್ಯ.

ಆದರೆ ಯಾವಾಗಲೂ ಗೊತ್ತಿರುವ ಅಲ್ಲಲ್ಲಿನ ಜಲಪಾತ, ಝರಿ, ತೊರೆ ಸುತ್ತುವುದಕ್ಕಿಂತಲ್ಲೂ ವಿಭಿನ್ನ ಅನುಭವ ಮತ್ತು ಅಧ್ಬುತ ಯಾನ ಮಾಡಿಸುವ ದೇವಕಾರು ಒಮ್ಮೆಯಾದರೂ ನೋಡಲೇ ಬೇಕಾದ ನೈಜ ದೃಶ್ಯ ವೈವಿಧ್ಯ. ಆದರೆ ದೋಣಿ ದಾಟುವ, ನದಿಯ ಪಾತ್ರದಲ್ಲಿ ಚಲಿಸುವಾಗ ನೀರಿಕ್ಷಿಸುವ ಅಗಾಧ ಸುರಕ್ಷತೆಯ ಸವಾಲುಗಳು ದೇವಕಾರನ್ನು ಈಗಲೂ ಜನ ಮಾನಸದಿಂದ ದೂರವೇ ಉಳಿಸಿವೆ.



(ತಲುಪುವುದು ಹೇಗೆ..?)

ವಜ್ರ ಜಲಪಾತವಿರುವ ದೇವಕಾರಿಗೆ, ಕದ್ರಾದ ಒಳ ಮಾರ್ಗವಾದ ಕೊಡಸಳ್ಳಿಯ ರಸ್ತೆಯಲ್ಲಿ ಮೂವತ್ತು ಕಿ.ಮೀ. ಚಲಿಸಿದರೆ ತಾಗುವ ಹಿನ್ನಿರ ದಾರಿಯ ಮೇಲೆ ದೋಣಿಯಲ್ಲಿ ಸಾಗಿ ನದಿಯನ್ನು ದಾಟಬೇಕು. ದೋಣಿ ಒಂದು ಸಲಕ್ಕೆ ನಾಲ್ಕೈದು ಜನರನ್ನು ಮಾತ್ರ ಒಯ್ಯುವ ಸಾಮಥ್ರ್ಯದಿದ್ದು ಹೆಚ್ಚು ಜನರ ತಂಡವಿದ್ದರೆ ಅದು ವಾಪಸ್ಸು ಬರುವವರೆಗೂ ಕಾಯಬೇಕು. ದೋಣಿಯಿಂದ ಆ ಭಾಗದಲ್ಲಿ ಇಳಿದ ನಂತರ ಸುಮಾರು ಎರಡು ಗಂಟೆ ನಡಿಗೆ ಕಡ್ಡಾಯ ಕಾಡು ಮತ್ತು ಗದ್ದೆಯ ಬದುವಿನ ಕಾಲುದಾರಿಯಲ್ಲಿ.

ಕದ್ರಾ ಹುಬ್ಬಳ್ಳಿಯಿಂದ 140 ಕಿ.ಮೀ. ಕಾರವಾರದಿಂದ 35 ಕಿ.ಮೀ. ದೂರವಿದ್ದು ಎರಡೂ ಕಡೆಯಿಂದ ತಲುಪಬಹುದಾಗಿದೆ. ಇಲ್ಲಿಗೆ ಬಂದು ಫಾರೆಸ್ಟ್‍ರ ಬಳಿಯಲ್ಲಿ ಮೊದಲೇ ಪ್ರವೇಶ ಪತ್ರ ಪಡೆದರೆ ಮಾತ್ರ ಕೊಡಸಳ್ಳಿ ಮಾರ್ಗಕ್ಕೆ ನಮ್ಮ ಖಾಸಗಿ ವಾಹನಕ್ಕೆ ಪ್ರವೇಶಾವಕಾಶ ದಕ್ಕುತ್ತದೆ. ಅಲ್ಲಿಂದ ಕೊಡಸಳ್ಳಿ ಹಿನ್ನೀರ ದಂಡೆಯಲಿ ಮೊದಲೇ ದೇವಕಾರಿನ ಮೂಲದರನ್ನು ಸಂಪರ್ಕಿಸಿ ದೋಣಿಯ ಮೂಲಕ ಆಚೆ ದಂಡೆ ತಲುಪಿ ಚಾರಣ ಮಾಡಿದರೆ ದೇವಕಾರಿನಲ್ಲಿ ದೇವ ಸದೃಶ್ಯ ಜಲಪಾತ ಸವಿಯಬಹುದಾಗಿದೆ. ) 

No comments:

Post a Comment