ಅಲ್ಲಿ ಹುಳು ತಿಂದರೆ
ಇಲ್ಲಿ ಕೂಳು..!
(ಶಿವಾಲಿಕಾ ಪರ್ವತ ಸಮೂಹದಲ್ಲಿ ಏರುತ್ತಾ ಸಾಗಿ ಸೇರಬೇಕಾದ ಕುಠಿ ಊರಿಗೆ ಈ ಹೆಸರು ಲಭ್ಯವಾದದ್ದು ಪಾಂಡವರನ್ನು ಕೌರವರಿಂದ ರಕ್ಷಿಸಲು ಕುಂತಿ ಹಸ್ತಿನಾಪುರದಿಂದ ಇಲ್ಲಿಗೆ ಬಂದು ನೆಲೆಸಿದ್ದಕ್ಕಾಗಿ. ಊರಿನ ಸೌಂದರ್ಯಕ್ಕೆ ಶಿಖರ ಪ್ರಾಯವಾಗಿ ಸುತ್ತುವರಿದ ಕಲ್ಲಿನ ಶಿಥಿಲ ಕೋಟೆ ಹಸಿರಿನ ಕ್ಯಾನ್ವಾಸ್ ಮೇಲೆ ಪ್ರಕೃತಿ ಬರೆದ ಚಿತ್ರದಂತೆ ಕಾಣುತ್ತದೆ.)
ಅಲ್ಲಿ ಜೀವನಕ್ಕೆ, ಜೀವಕ್ಕೆ ಭರಿಸಲಾಗದ ಚಳಿಯ ಹೊರತು ಇನ್ನೇನೂ ಇಲ್ಲ. ಉಪ್ಪನ್ನು ಹೊತ್ತುಕೊಂಡು ಹೋಗುವುದಕ್ಕೂ ಅನಾಮತ್ತು ವಾರಕಾಲ ಮೇಲ್ಮುಖವಾಗಿ ನಡೆಯಬೇಕಾಗುತ್ತದೆ. ಯಾವ ಪರ್ವತ ಯಾವ ಕಡೆಯಲ್ಲಿ ದಿಕ್ಕು ಬದಲಿಸುತ್ತದೋ, ಯಾವ ನದಿಯ ಪಾತ್ರ ಯಾವ ಕಡೆಗೆ ತಿರುಗುತ್ತದೋ ಎನ್ನುವುದ ಊಹಿಸಲಾಗದಷ್ಟು ಅನಿಶ್ಚಿತತೆ ಆ ದಾರಿಯಲ್ಲಿದೆ. ಅಂತಹದರಲ್ಲಿ ಕ್ರಮಿಸಿ ಮನೆಗೆ ಸಾಮಾನು ಸೇರಿದ0ತೆ ಸರ್ವಸ್ವವನ್ನೂ ಒದಗಿಸಿಕೊಂಡು, ಮದುವೆ, ಬಸರು, ಬಾಣಂತನ, ಆಗೀಗ ಕಾಡುವ ಕಾಯಿಲೆ ಇತ್ಯಾದಿಗಳೊಂದಿಗೂ ಏಗುತ್ತಾ, ಆದರೂ ಅರಪಾವಿನಷ್ಟು ಬೇಸರಿಸದೆ ಅಲ್ಲೇ ಬದುಕು, ಬೆವರು, ಅನ್ನ ಎಲ್ಲವನ್ನೂ ಕಂಡುಕೊಂಡು ಜನಜೀವನವನ್ನು ನಡೆಸುತ್ತಿರುವ ಜನರಿಗೆ ತಮ್ಮ ಊರೆಂದರೆ ಅಷ್ಟೇ..!ಅದರಷ್ಟು ಸ್ವರ್ಗ ಸದೃಶ್ಯ ಇನ್ನೊಂದಿಲ್ಲ..
ಶಿಲ್ಲಿ, ಪಲ್ತು, ಸಜ್ಜೆ ಸೇರಿದ0ತೆ ಹಲವು ಧವಸ ಧಾನ್ಯಗಳು, ಜಿಂಕರ್, ಜೀನ್, ತಂಪಾಲ್ಕುಗಳ ಅಹಾರ ಕಣಜ, ಜಗತ್ತಿನಲ್ಲೆಲ್ಲೂ ಇಲ್ಲದ ಶಿಲ್ಲಿಕುರ ಎಂಬ ತಿಂಡಿ, ಫೈನ್, ಆಕ್ರೋಟ್ ಮರಗಳ ಕಾಡಿನ ಮೇಲ್ಭಾಗಕ್ಕೆ ಸ್ವರ್ಗ ಸಮಾನ ದಾರಿ ಕ್ರಮಿಸಿ, ಭೋಜಪತ್ರಗಳ ಕಾಡಿನ ಧೂಪದ ವಾಸನೆಯಲ್ಲಿ ಚಲಿಸಿ, ಭಾರತದ ಕೊಟ್ಟ ಕೊನೆಯ ಅತ್ಯಂತ ಎತ್ತರದ, ಹದಿನೈದು ಸಾವಿರ ಅಡಿ ಎತ್ತರದಲ್ಲಿರುವ "ಪ್ರಾಣಿಗಳಿಗೆ ಪ್ರವೇಶವಿಲ್ಲ"ಎಂಬ ಊರೇ ಕುಠಿ. ಇಲ್ಲಿಗೆ ಹೊರಗಿನಿಂದ ಬರುವ ಕಚ್ಛರ ಮತ್ತು ಸ್ವತ: ಊರಿನ ಕುದುರೆ, ಕತ್ತೆಗಳಿಗೂ ಊರ ಹೊರಗೇ ತಂಗುದಾಣ.
ಇತ್ತ ಕುದುರೆ, ಅತ್ತ ಕತ್ತೆಯೂ ಅಲ್ಲದ ಕಚ್ಛರ ಎಂಬ ಕುಕತ್ತೆಯನ್ನು ಸಾಮಾನು, ಇತರೆ ಸಾರಿಗೆಯನ್ನಾಗಿ ಬಳಸಿಕೊಳ್ಳುವ, ಕೆಳಗಿಳಿದರೆ ಹಿಂದಿರುಗಲು ಹತ್ತು ದಿನ ಬೇಡುವ ಊರಿನ ವೈಶಿಷ್ಠ್ಯವೆಂದರೆ ಮನೆಗಳ ಕಲಾವಂತಿಕೆ. 140 ಜನಸಂಖ್ಯೆ ಕುಠಿಯ ಪ್ರಮುಖ ಅಂಶ ಸಮಬಾಳು ಸಮಪಾಲು. ಎತ್ತರದ ಪರ್ವತ ಪ್ರದೇಶದ ಕೊರಕಲಿನ ಕುರುಚಲು ಕಾಡಿನ ಬುಡ ಅಗೆದು ಹುಳುಗಳನ್ನು ಹುಡುಕಲು ಒಟ್ಟಾಗಿ ತೆರಳುತ್ತಾರೆ. ಈ ಪರ್ವತದಲ್ಲಿ ಲಭ್ಯವಿರುವ ಹುಳುಗಳು ವರ್ಷಕ್ಕೆ ಎಳೆಂಟು ಲಕ್ಷ ರೂಪಾಯಿ ದುಡಿದುಕೊಡುತ್ತವೆ. ಚಿನ್ನಕ್ಕಿಂತಲೂ ದುಬಾರಿ.
ಅದಕ್ಕಾಗಿ ಹಿಮಕರಗುತ್ತಿದ್ದಂತೆ ಹುಳು ಆರಿಸುವ ಕೆಲಸ ಶುರು. ಹುಡುಗರು, ಗಂಡಸರು ಇದಕ್ಕಾಗಿ ವಾರಗಟ್ಟಲೇ ಬೆಟ್ಟವೇರುತ್ತಾರೆ ಪುನ: ಹಿಮ ಮುಚ್ಚಿಕೊಳ್ಳುವವರೆಗೂ. ಸಾಮಾನು, ಆಹಾರ ಪೂರೈಕೆ ಇನ್ನೊಂದು ತಂಡದ ಕೆಲಸ. ಸಾಮೂಹಿಕ ಕಾರ್ಯದಲ್ಲಿ ಬರುವ ಹಣದಲ್ಲಿ ಸಮಾನ ಪಾಲು ಊರಿಗೆಲ್ಲಾ. ವರ್ಷದ ಪ್ರಮುಖ ಉತ್ಪಾದನೆಯ ಕೆಲಸ ಸಾಂಗವಾಗುತ್ತದೆ. ಮುಂದಿನ ಋತುಮಾನದವರೆಗೆ ಹುಳುವಿನ ಸಹಜ ನೈಜ ಬೆಳವಣಿಗೆಗೆ ಅನುಕೂಲವಾಗುವ0ತಹ ವಾತಾವರಣ ಕಲ್ಪಿಸಿ ಬೆಟ್ಟ ಇಳಿಯುವ ಇವರ ಜೀವನಶೈಲಿ ತುಂಬ ಉಚ್ಛಸ್ಥರದಲ್ಲಿದೆ. ವರ್ಷದಲ್ಲಿ ನಾಲ್ಕು ಬಾರಿ ಹುಳುಗಳ ಬೇಟೆ. ಅದರ ಮಾರುಕಟ್ಟೆ ಕುದುರಿಸಲು ಟಿಬೆಟ್ಟಿಗೆ ಕುದುರೆ ಏರಿ ದೌಡು. ಅಲ್ಲಿಂದ ಚೀನಾ ತಲುಪುತ್ತದೆ.
ಉಳಿದ ಸಮಯದಲ್ಲಿ ತಂತಮ್ಮ ವೈಯಕ್ತಿಕ ಸಂಪಾದನೆಗಾಗಿ ಪ್ರವಾಸಿಗರನ್ನು ಕುದುರೆ ಮೂಲಕ ಕೈಲಾಸ-ಮಾನಸ ಸರೋವರ, ಅನ್ನಪೂರ್ಣೆ ಜೊತೆಗೆ ಹಿಂಬಾಲಕರಾಗಿ ಹುಡುಗರು ಜೂನ್ನಿಂದ ಸಪ್ಟೆಂಬರ್ವರೆಗೆ ದುಡಿಯುತ್ತಾ ಚಿಕ್ಕಚಿಕ್ಕ ಜಾಗದಲ್ಲಿ ಕೃಷಿ ಮಾಡುವ ಜೋಗ್ಕಾಂಗ್ರಿಗೆ ದುಡಿಮೆಯೇ ಮೂಲಮಂತ್ರ, ಸಮರಸವೇ ಜೀವಾಳ. ಸ್ತ್ರೀಯರು ಮನೆಯಲ್ಲಿ ಕಾರ್ಪೆಟ್ಟುಗಳನ್ನು ಹೆಣೆದು ಅದಾಯ ಜೊತೆಗೆ ಮನೆವಾರ್ತೆ. ಇವರು ವೈದ್ಯ ವಿಜ್ಞಾನಕ್ಕೂ ಸವಾಲು. ಸ್ಥಳೀಯವಾಗೇ ಕೈ ಕಾಲು ಮುರಿತದ ಅನಾಹುತಗಳಿಗೂ ಔಷಧಿಗಳಿವೆ. ಅದಕ್ಕಿಂತ ದೊಡ್ಡರೋಗ ಬಾಧಿಸಿಲ್ಲ. ಏಡ್ಸ್, ಕ್ಯಾನ್ಸರ್ ಗೊತ್ತೇ ಇಲ್ಲ. ಬಸಿರು, ಬಾಣಂತಿಯರು ಮಕ್ಕಳು ತೀರಿದ್ದು, ವೈಫಲ್ಯ ಎಂಬ ದಾಖಲೆಗಳಿಲ್ಲ.
ದೆಹಲಿಯಿಂದ ಸಾವಿರ ಕಿ.ಮೀ. ದೂರದ ಕೊನೆಯ ವಾಹನ ಸೌಕರ್ಯದ ಊರು ದಾರ್ಚುಲ. ಅದರಾಚೆಗೆ ಕುಠಿ ತಲುಪಲು ಅನಾಮತ್ತು 113 ಕಿ.ಮಿ. ಕಾಲ್ನಡಿಗೆ. ದಾರ್ಚುಲಾದಿಂದ ಕಾಲ್ನಡಿಗೆಯಲ್ಲಿ ಸಾಗಿದ ನನ್ನ ಪಯಣ.. ಸಿರ್ಖಾ, ಗಾಲ, ಬುಧಿ ಮತ್ತು ಗುಂಜಿ ಹಳ್ಳಿಗಳ ಮೇಲೆ ನಿರಂತರ. ಉತ್ತರಾಖಂಡದಲ್ಲಾದ ಜಲಪ್ರಳಯದಲ್ಲಿ ತವಾಘಾಟವರೆಗಿನ ರಸ್ತೆ ಮಟಾಶ್. ಅಲ್ಲಿಂದ ನಾರಾಯಣ ಆಶ್ರಮದ ದುರ್ಗಮ ದಾರಿ. ಕಾಲ್ದಾರಿಯಲ್ಲಿ ಏರುತ್ತಾ 18 ಕಿ.ಮೀ ಗಾಲದ ಮೂಲಕ ಲಖನಪುರ ತಲುಪಿದಾಗ ಮೈಯೆಲ್ಲ ಕಿತ್ತು ಬರುವ ಬೆವರು. ದಾರಿಮೇಲೆ ಅನ್ನಪೂರ್ಣ, ಮಹಾದೇವ ಮತ್ತು ಶೇಷನಾಗ್ನಂತಹ ಪರ್ವತಾಗ್ರಹಗಳನ್ನು ಬಳಸಿಕೊಂಡು ನಾಲ್ಕೂವರೆ ಸಾವಿರ ಅಡಿ ಮೇಲಕ್ಕೇರಿದರೆ ಲಭ್ಯವಾಗುವ ಅಗಾಧ ಭೋಜಪತ್ರ ವೃಕ್ಷ ಮರಗಳ "ಶಿಯಾಲೇಕ್"ಎನ್ನುವ ಅವಿಸ್ಮರಣೀಯ ಪ್ರದೇಶ. ಮಧ್ಯದಲ್ಲಿ ಚಾರಣಿಗರ ತಂಗುದಾಣ ಲಾಮಾರಿ. ಜೋಲಿಂಗ್ಕಾಂಗ್ ಪರ್ವತ ಪ್ರದೇಶಕ್ಕೆ ಸೇರಿದ ಬುಡಕಟ್ಟು ಜನಾಂಗ ಜೋಗ್ಕಾಂಗ್. ಕೈಲಾಸ ಪರ್ವತದ ಅಲೆದಾಟದಲ್ಲಿ ಸಿಕ್ಕಿದ್ದು ಈ ಕುಠಿ..
ಕಾರಣ
ನಾನೇ ಅಲೆಮಾರಿ.
ಇಲ್ಲಿ ಕೂಳು..!
(ಶಿವಾಲಿಕಾ ಪರ್ವತ ಸಮೂಹದಲ್ಲಿ ಏರುತ್ತಾ ಸಾಗಿ ಸೇರಬೇಕಾದ ಕುಠಿ ಊರಿಗೆ ಈ ಹೆಸರು ಲಭ್ಯವಾದದ್ದು ಪಾಂಡವರನ್ನು ಕೌರವರಿಂದ ರಕ್ಷಿಸಲು ಕುಂತಿ ಹಸ್ತಿನಾಪುರದಿಂದ ಇಲ್ಲಿಗೆ ಬಂದು ನೆಲೆಸಿದ್ದಕ್ಕಾಗಿ. ಊರಿನ ಸೌಂದರ್ಯಕ್ಕೆ ಶಿಖರ ಪ್ರಾಯವಾಗಿ ಸುತ್ತುವರಿದ ಕಲ್ಲಿನ ಶಿಥಿಲ ಕೋಟೆ ಹಸಿರಿನ ಕ್ಯಾನ್ವಾಸ್ ಮೇಲೆ ಪ್ರಕೃತಿ ಬರೆದ ಚಿತ್ರದಂತೆ ಕಾಣುತ್ತದೆ.)
ಅಲ್ಲಿ ಜೀವನಕ್ಕೆ, ಜೀವಕ್ಕೆ ಭರಿಸಲಾಗದ ಚಳಿಯ ಹೊರತು ಇನ್ನೇನೂ ಇಲ್ಲ. ಉಪ್ಪನ್ನು ಹೊತ್ತುಕೊಂಡು ಹೋಗುವುದಕ್ಕೂ ಅನಾಮತ್ತು ವಾರಕಾಲ ಮೇಲ್ಮುಖವಾಗಿ ನಡೆಯಬೇಕಾಗುತ್ತದೆ. ಯಾವ ಪರ್ವತ ಯಾವ ಕಡೆಯಲ್ಲಿ ದಿಕ್ಕು ಬದಲಿಸುತ್ತದೋ, ಯಾವ ನದಿಯ ಪಾತ್ರ ಯಾವ ಕಡೆಗೆ ತಿರುಗುತ್ತದೋ ಎನ್ನುವುದ ಊಹಿಸಲಾಗದಷ್ಟು ಅನಿಶ್ಚಿತತೆ ಆ ದಾರಿಯಲ್ಲಿದೆ. ಅಂತಹದರಲ್ಲಿ ಕ್ರಮಿಸಿ ಮನೆಗೆ ಸಾಮಾನು ಸೇರಿದ0ತೆ ಸರ್ವಸ್ವವನ್ನೂ ಒದಗಿಸಿಕೊಂಡು, ಮದುವೆ, ಬಸರು, ಬಾಣಂತನ, ಆಗೀಗ ಕಾಡುವ ಕಾಯಿಲೆ ಇತ್ಯಾದಿಗಳೊಂದಿಗೂ ಏಗುತ್ತಾ, ಆದರೂ ಅರಪಾವಿನಷ್ಟು ಬೇಸರಿಸದೆ ಅಲ್ಲೇ ಬದುಕು, ಬೆವರು, ಅನ್ನ ಎಲ್ಲವನ್ನೂ ಕಂಡುಕೊಂಡು ಜನಜೀವನವನ್ನು ನಡೆಸುತ್ತಿರುವ ಜನರಿಗೆ ತಮ್ಮ ಊರೆಂದರೆ ಅಷ್ಟೇ..!ಅದರಷ್ಟು ಸ್ವರ್ಗ ಸದೃಶ್ಯ ಇನ್ನೊಂದಿಲ್ಲ..
ಶಿಲ್ಲಿ, ಪಲ್ತು, ಸಜ್ಜೆ ಸೇರಿದ0ತೆ ಹಲವು ಧವಸ ಧಾನ್ಯಗಳು, ಜಿಂಕರ್, ಜೀನ್, ತಂಪಾಲ್ಕುಗಳ ಅಹಾರ ಕಣಜ, ಜಗತ್ತಿನಲ್ಲೆಲ್ಲೂ ಇಲ್ಲದ ಶಿಲ್ಲಿಕುರ ಎಂಬ ತಿಂಡಿ, ಫೈನ್, ಆಕ್ರೋಟ್ ಮರಗಳ ಕಾಡಿನ ಮೇಲ್ಭಾಗಕ್ಕೆ ಸ್ವರ್ಗ ಸಮಾನ ದಾರಿ ಕ್ರಮಿಸಿ, ಭೋಜಪತ್ರಗಳ ಕಾಡಿನ ಧೂಪದ ವಾಸನೆಯಲ್ಲಿ ಚಲಿಸಿ, ಭಾರತದ ಕೊಟ್ಟ ಕೊನೆಯ ಅತ್ಯಂತ ಎತ್ತರದ, ಹದಿನೈದು ಸಾವಿರ ಅಡಿ ಎತ್ತರದಲ್ಲಿರುವ "ಪ್ರಾಣಿಗಳಿಗೆ ಪ್ರವೇಶವಿಲ್ಲ"ಎಂಬ ಊರೇ ಕುಠಿ. ಇಲ್ಲಿಗೆ ಹೊರಗಿನಿಂದ ಬರುವ ಕಚ್ಛರ ಮತ್ತು ಸ್ವತ: ಊರಿನ ಕುದುರೆ, ಕತ್ತೆಗಳಿಗೂ ಊರ ಹೊರಗೇ ತಂಗುದಾಣ.
ಇತ್ತ ಕುದುರೆ, ಅತ್ತ ಕತ್ತೆಯೂ ಅಲ್ಲದ ಕಚ್ಛರ ಎಂಬ ಕುಕತ್ತೆಯನ್ನು ಸಾಮಾನು, ಇತರೆ ಸಾರಿಗೆಯನ್ನಾಗಿ ಬಳಸಿಕೊಳ್ಳುವ, ಕೆಳಗಿಳಿದರೆ ಹಿಂದಿರುಗಲು ಹತ್ತು ದಿನ ಬೇಡುವ ಊರಿನ ವೈಶಿಷ್ಠ್ಯವೆಂದರೆ ಮನೆಗಳ ಕಲಾವಂತಿಕೆ. 140 ಜನಸಂಖ್ಯೆ ಕುಠಿಯ ಪ್ರಮುಖ ಅಂಶ ಸಮಬಾಳು ಸಮಪಾಲು. ಎತ್ತರದ ಪರ್ವತ ಪ್ರದೇಶದ ಕೊರಕಲಿನ ಕುರುಚಲು ಕಾಡಿನ ಬುಡ ಅಗೆದು ಹುಳುಗಳನ್ನು ಹುಡುಕಲು ಒಟ್ಟಾಗಿ ತೆರಳುತ್ತಾರೆ. ಈ ಪರ್ವತದಲ್ಲಿ ಲಭ್ಯವಿರುವ ಹುಳುಗಳು ವರ್ಷಕ್ಕೆ ಎಳೆಂಟು ಲಕ್ಷ ರೂಪಾಯಿ ದುಡಿದುಕೊಡುತ್ತವೆ. ಚಿನ್ನಕ್ಕಿಂತಲೂ ದುಬಾರಿ.
ಅದಕ್ಕಾಗಿ ಹಿಮಕರಗುತ್ತಿದ್ದಂತೆ ಹುಳು ಆರಿಸುವ ಕೆಲಸ ಶುರು. ಹುಡುಗರು, ಗಂಡಸರು ಇದಕ್ಕಾಗಿ ವಾರಗಟ್ಟಲೇ ಬೆಟ್ಟವೇರುತ್ತಾರೆ ಪುನ: ಹಿಮ ಮುಚ್ಚಿಕೊಳ್ಳುವವರೆಗೂ. ಸಾಮಾನು, ಆಹಾರ ಪೂರೈಕೆ ಇನ್ನೊಂದು ತಂಡದ ಕೆಲಸ. ಸಾಮೂಹಿಕ ಕಾರ್ಯದಲ್ಲಿ ಬರುವ ಹಣದಲ್ಲಿ ಸಮಾನ ಪಾಲು ಊರಿಗೆಲ್ಲಾ. ವರ್ಷದ ಪ್ರಮುಖ ಉತ್ಪಾದನೆಯ ಕೆಲಸ ಸಾಂಗವಾಗುತ್ತದೆ. ಮುಂದಿನ ಋತುಮಾನದವರೆಗೆ ಹುಳುವಿನ ಸಹಜ ನೈಜ ಬೆಳವಣಿಗೆಗೆ ಅನುಕೂಲವಾಗುವ0ತಹ ವಾತಾವರಣ ಕಲ್ಪಿಸಿ ಬೆಟ್ಟ ಇಳಿಯುವ ಇವರ ಜೀವನಶೈಲಿ ತುಂಬ ಉಚ್ಛಸ್ಥರದಲ್ಲಿದೆ. ವರ್ಷದಲ್ಲಿ ನಾಲ್ಕು ಬಾರಿ ಹುಳುಗಳ ಬೇಟೆ. ಅದರ ಮಾರುಕಟ್ಟೆ ಕುದುರಿಸಲು ಟಿಬೆಟ್ಟಿಗೆ ಕುದುರೆ ಏರಿ ದೌಡು. ಅಲ್ಲಿಂದ ಚೀನಾ ತಲುಪುತ್ತದೆ.
ಉಳಿದ ಸಮಯದಲ್ಲಿ ತಂತಮ್ಮ ವೈಯಕ್ತಿಕ ಸಂಪಾದನೆಗಾಗಿ ಪ್ರವಾಸಿಗರನ್ನು ಕುದುರೆ ಮೂಲಕ ಕೈಲಾಸ-ಮಾನಸ ಸರೋವರ, ಅನ್ನಪೂರ್ಣೆ ಜೊತೆಗೆ ಹಿಂಬಾಲಕರಾಗಿ ಹುಡುಗರು ಜೂನ್ನಿಂದ ಸಪ್ಟೆಂಬರ್ವರೆಗೆ ದುಡಿಯುತ್ತಾ ಚಿಕ್ಕಚಿಕ್ಕ ಜಾಗದಲ್ಲಿ ಕೃಷಿ ಮಾಡುವ ಜೋಗ್ಕಾಂಗ್ರಿಗೆ ದುಡಿಮೆಯೇ ಮೂಲಮಂತ್ರ, ಸಮರಸವೇ ಜೀವಾಳ. ಸ್ತ್ರೀಯರು ಮನೆಯಲ್ಲಿ ಕಾರ್ಪೆಟ್ಟುಗಳನ್ನು ಹೆಣೆದು ಅದಾಯ ಜೊತೆಗೆ ಮನೆವಾರ್ತೆ. ಇವರು ವೈದ್ಯ ವಿಜ್ಞಾನಕ್ಕೂ ಸವಾಲು. ಸ್ಥಳೀಯವಾಗೇ ಕೈ ಕಾಲು ಮುರಿತದ ಅನಾಹುತಗಳಿಗೂ ಔಷಧಿಗಳಿವೆ. ಅದಕ್ಕಿಂತ ದೊಡ್ಡರೋಗ ಬಾಧಿಸಿಲ್ಲ. ಏಡ್ಸ್, ಕ್ಯಾನ್ಸರ್ ಗೊತ್ತೇ ಇಲ್ಲ. ಬಸಿರು, ಬಾಣಂತಿಯರು ಮಕ್ಕಳು ತೀರಿದ್ದು, ವೈಫಲ್ಯ ಎಂಬ ದಾಖಲೆಗಳಿಲ್ಲ.
ದೆಹಲಿಯಿಂದ ಸಾವಿರ ಕಿ.ಮೀ. ದೂರದ ಕೊನೆಯ ವಾಹನ ಸೌಕರ್ಯದ ಊರು ದಾರ್ಚುಲ. ಅದರಾಚೆಗೆ ಕುಠಿ ತಲುಪಲು ಅನಾಮತ್ತು 113 ಕಿ.ಮಿ. ಕಾಲ್ನಡಿಗೆ. ದಾರ್ಚುಲಾದಿಂದ ಕಾಲ್ನಡಿಗೆಯಲ್ಲಿ ಸಾಗಿದ ನನ್ನ ಪಯಣ.. ಸಿರ್ಖಾ, ಗಾಲ, ಬುಧಿ ಮತ್ತು ಗುಂಜಿ ಹಳ್ಳಿಗಳ ಮೇಲೆ ನಿರಂತರ. ಉತ್ತರಾಖಂಡದಲ್ಲಾದ ಜಲಪ್ರಳಯದಲ್ಲಿ ತವಾಘಾಟವರೆಗಿನ ರಸ್ತೆ ಮಟಾಶ್. ಅಲ್ಲಿಂದ ನಾರಾಯಣ ಆಶ್ರಮದ ದುರ್ಗಮ ದಾರಿ. ಕಾಲ್ದಾರಿಯಲ್ಲಿ ಏರುತ್ತಾ 18 ಕಿ.ಮೀ ಗಾಲದ ಮೂಲಕ ಲಖನಪುರ ತಲುಪಿದಾಗ ಮೈಯೆಲ್ಲ ಕಿತ್ತು ಬರುವ ಬೆವರು. ದಾರಿಮೇಲೆ ಅನ್ನಪೂರ್ಣ, ಮಹಾದೇವ ಮತ್ತು ಶೇಷನಾಗ್ನಂತಹ ಪರ್ವತಾಗ್ರಹಗಳನ್ನು ಬಳಸಿಕೊಂಡು ನಾಲ್ಕೂವರೆ ಸಾವಿರ ಅಡಿ ಮೇಲಕ್ಕೇರಿದರೆ ಲಭ್ಯವಾಗುವ ಅಗಾಧ ಭೋಜಪತ್ರ ವೃಕ್ಷ ಮರಗಳ "ಶಿಯಾಲೇಕ್"ಎನ್ನುವ ಅವಿಸ್ಮರಣೀಯ ಪ್ರದೇಶ. ಮಧ್ಯದಲ್ಲಿ ಚಾರಣಿಗರ ತಂಗುದಾಣ ಲಾಮಾರಿ. ಜೋಲಿಂಗ್ಕಾಂಗ್ ಪರ್ವತ ಪ್ರದೇಶಕ್ಕೆ ಸೇರಿದ ಬುಡಕಟ್ಟು ಜನಾಂಗ ಜೋಗ್ಕಾಂಗ್. ಕೈಲಾಸ ಪರ್ವತದ ಅಲೆದಾಟದಲ್ಲಿ ಸಿಕ್ಕಿದ್ದು ಈ ಕುಠಿ..
ಕಾರಣ
ನಾನೇ ಅಲೆಮಾರಿ.