Monday, November 21, 2016

ಹೊಣೆಗಾರಿಕೆ ಮರೆತಿರುವ ಮಾಧ್ಯಮಗಳು…!

– ಸಂತೋಷಕುಮಾರ ಮೆಹೆಂದಳೆ.
maxresdefault

(ಇವತ್ತು ಮನೆಯಲ್ಲೊಂದು ಮದುವೆ ನಡೆಯುತ್ತಿದೆ ಎಂದಾದರೆ ಅನಾಮತ್ತು ತಿಂಗಳಗಟ್ಟಲೆಯಿಂದ ತಯಾರಿ ಮಾಡಿಕೊಳ್ಳುವ ಯಜಮಾನ ಮತ್ತವನ ಕುಟುಂಬ ಕೊನೆಯ ಕ್ಷಣದಲ್ಲಿ ಎನೋ ಮರೆತು ಬಿಟ್ಟಿರುತ್ತದೆ. ಮಂಟಪದಲ್ಯಾರೊ ಅದಕ್ಕಾಗಿ ಓಡಾಡುತ್ತಾರೆ. ಕೊನೆಗೆಲ್ಲಾ ಸಾಂಗವಾಗುತ್ತದೆ. ಒಂದು ಟೂರ್ ಅಂತಾ ಹೊರಟವರು ಅಯ್ಯೋ ಅದನ್ನು ಮರೆತು ಬಂದೆನೆನ್ನುವುದೇ ಸಾಮಾನ್ಯ ಆಗಿರುವಾಗ ನೂರೂ ಚಿಲ್ರೆ ಕೋಟಿ ಜನರನ್ನು ಸಂಭಾಳಿಸುವ ನಾಯಕ ಭವಿಷ್ಯಕ್ಕಾಗಿ ಅನಿವಾರ್ಯವಾಗಿ ಧೃಢ ನಿರ್ಧಾರ ಕೈಗೊಂಡು ಅಲ್ಲಲ್ಲಿ ಕೊಂಚ ಕ್ಯೂ ನಿಲ್ಲಿಸಿದಾಗಲೂ ಅದು ಕಾಮನ್ ಮ್ಯಾನ್‍ಗೆ ಹಬ್ಬದಂತೆ ಅನ್ನಿಸುತ್ತಿದ್ದಾಗಲೂ, ಏನು ಪ್ರಕಟಿಸಬೇಕು ಪ್ರಕಟಿಸಬಾರದು ಎನ್ನುವ ಪರಿಜ್ಞಾನ ಮಾಧ್ಯಮಗಳಿಗಿರಲೇ ಬೇಕಿತ್ತು.. )
ಆ ರಾತ್ರಿ ದೇಶದ ಪ್ರಧಾನಿ ಇತಿಹಾಸವನ್ನೆ ನಿರ್ಮಿಸುವಂತಹ ಘೋಷಣೆ ಹೊರಡಿಸಿದರು. ಇನ್ಮುಂದೆ ಐನೂರು ಸಾವಿರ ನೋಟು ನಡೆಯುವುದಿಲ್ಲ. ಇದಕ್ಕೆ ಕಾರಣ ಇಂತಹದ್ದು ಇತ್ಯಾದಿ ಎಂದೆಲ್ಲಾ, ಒಂದು ದೇಶದ ಪ್ರಧಾನಿಯಾಗಿ ಹೇಳಬುಹುದಾದದ್ದನ್ನೆಲ್ಲಾ ಹೇಳಿ ಸಾವಿರ ವೊಲ್ಟ್ ಶಾಕ್ ಕೊಟ್ಟರು ನೋಡಿ. ಅವರು ಏನು ಮಾಡಿದರೂ ವಿರೋಧಿಸುವ ಎಬುಜೀಗಳಿಗೂ ಅದರ ಗಂಜಿದಾತರಿಗೂ ಅದನ್ನು ಅರಗಿಸಿಕೊಳ್ಳಲೇ ಒಂದಿನ ಬೇಕಾಯಿತು. ಜತೆಗೆ ಜನಸಾಮಾನ್ಯ ಮನುಷ್ಯ ಕೊಂಚ ಗಲಿಬಿಲಿಯಾಗಿ ಕೂತನಾದರೂ ಮರುದಿನದ ಹೊತ್ತಿಗೆ ಮೈ ಕೊಡವಿ ಎದ್ದು ನಿಂತಿದ್ದ ಕ್ಯೂನಲ್ಲಿ. ಕಾರಣ ಈ ದೇಶಕ್ಕೆ ಆರ್ಬುದದಂತೆ ಅಡರಿಕೊಂಡ ರಾಜಕಾರಣಿಗಳ ಕಡೆಗೊಂದು ಸ್ಪಷ್ಟ ಮತ್ತು ಪರಮ ನಿರ್ಲಜ್ಯಕಾರಕ ಅಸಹ್ಯತೆ ಅವನ ಮನದಲ್ಲಿತ್ತು. ಅದಕ್ಕಾಗೇ ಇಂತಹದ್ದೊಂದು ಕ್ಯೂ ಮತ್ತು ಇದ್ದಕ್ಕಿದ್ದಂತೆ ಕೈ ಮುರಿದ ಹಣಕಾಸಿನ ಸ್ಥಿತಿಯನ್ನೂ ಸಹಿಸಿಕೊಳ್ಳಲು ತಯರಾಗಿ ಬಿಟ್ಟಿದ್ದ ಈ ದೇಶದ ಜನಸಾಮಾನ್ಯ.
ವಾರದ ನಂತರವೂ ಅಂಥಾ ದೊಡ್ಡ ಮಟ್ಟದ ಯಾವ ತೊಂದರೆಯೂ ದೇಶದ ಯಾವ ಭಾಗದಲ್ಲೂ ಆಗಿಯೇ ಇಲ್ಲ. ಇವತ್ತಿಗೂ ಬೆಂಗಳೂರು, ಮೈಸೂರು, ಬೆಳಗಾಂವಿ, ಹುಬ್ಬಳ್ಳಿ ಹೀಗೆ ಜನ ಬಾಹುಳ್ಯ ಇರುವ ಪ್ರದೇಶದಲ್ಲಿ, ನಿಗದಿತ ಮಿತಿಗಿಂತ ಹೆಚ್ಚು ಹಣ ಜೋಬಲ್ಲಿ ಇಟ್ಟುಕೊಂಡು ಓಡಾಡುವ ಕಲ್ಚರ್ ಪ್ರದೇಶದಲ್ಲೇ ಸ್ವಲ್ಪ ಹುಂಯ್ಯೋ ಹುಂಯ್ಯೋ ಎನಿಸಿದ್ದು ಹೌದು. ಅದರೆ ಅದು ಅನಗತ್ಯದ ವೆಚ್ಚಕ್ಕಾಗಿ ಬೇಕಿರುವ ಹಣವಾಗಿತ್ತು. ಅವರೂ ಎರಡ್ಮೂರು ದಿನದಲ್ಲಿ ದಾರಿಗೆ ಬಂದರು. ಅವರಿಗೆ ತಮ್ಮ ಮಿತಿ ಮತ್ತು ಅಗತ್ಯತೆಯ ಅರಿವು ನಿಖರವಾಗಿ ಬಂದುಬಿಟ್ಟಿತ್ತು. ನನ್ನ ಸ್ನೇಹಿತೆಯೊಬ್ಬಳು “..ಎರಡು ಸಾವಿರ ಇಲ್ಲದೆ ಓಡಾಡುತ್ತಿರಲಿಲ್ಲ ಆದರೆ ಇವತ್ತಿನವರೆಗೂ ಮುನ್ನೂರೇ ರೂಪಾಯಿಯಲ್ಲಿ ಬದುಕಿದ್ದೇನೆ.. ಥ್ಯಾಂಕ್ಸ್ ಮೋದಿ ಜೀ…” ಎಂದು ಫೇಸ್‍ಬುಕ್, ವಾಟ್ಸ್ ಆಪ್ ಸ್ಟೇಟಸ್ಸು ಮಾಡಿಕೊಂಡು ಬೀಗಿದಳು. ಅರಿವಿದ್ದೋ ಇಲ್ಲದೆಯೋ ಮೋದಿ ಎಲ್ಲರಿಗೂ ಬದುಕಿನ ಮತ್ತು ಸಾಮಾನ್ಯ ಜನತೆಗಿರಬೇಕಾದ ಪಾಠ ಹೇಳಿಬಿಟ್ಟಿದ್ದರು. ಇದೆಲ್ಲಾ ಆಗುವ ಹೊತ್ತಿಗೆ ಮೂರ್ನಾಲ್ಕು ದಿನ ಅಂದರೆ ಮೊದಲ ಧಡಾಪಢಿಯ (ಫಸ್ಟ್ ಕ್ರ್ಯೂಷಿಯಲ್ ) ಸಮಯ ಕಳೆದೇ ಹೋಗಿತ್ತು.
ಸೈಕಲ್ ತುಳಿಯುವವ, ಆಟೊ ಡ್ರೈವರು, ಪೆಟ್ರೋಲ್ ಬಂಕ್‍ಹುಡುಗ, ಪೇಪರ್ ಬಾಯ್, ಹಾಲಿನ ನಾರಾಯ್ಣ, ಸರಕು ಸಾಗಾಟದ ಮಾದೇವ, ಮೋಟರ್ ಸೈಕಲ್ ಅಂಗಡಿ ಬಷೀರ್, ಹೂವಿನ ಸುಶೀಲಾ, ಟೀ ಸ್ಟಾಲ್ ಮಲೆಯಾಳಿ ನಾಯರ್ರು, ಬಸ್ ಸ್ಟ್ಯಾಂಡ್ ಅಂಗಡಿ ಪೀಟರು, ಟೈಲರ್ ಅಂಬಿಕಾ, ದಕ್ಷಿಣೆಯಿಂದಲೇ ಬದುಕು ತೆಗೆಯುವ ಭಟ್ಟರು, ಚಿಕನ್ ಅಂಗಡಿ ಲಿಂಗರಾಜು, ಜ್ಯೋತಿಷಿ ಹೆಗಡೆರು, ಬುಕ್‍ಶಾಪ್ ಸುಬ್ರಮಣ್ಯ, ನಾಟಕದ ನಂದಿನಿ ಕೊನೆಗೆ ತೀರ ರಸ್ತೆ ಬದೀಯ ಮದುವಣಗಿತ್ತಿಯರವರೆಗೂ, “…ಇದು ಕೊಂಚ ಕಷ್ಟವಾಗುತ್ತಿದೆ ಆದರೆ ಮೋದಿ ಸಖತ್ ಕೆಲಸ ಮಾಡಿದಾರೆ, ಹಿಂಗೆ ನಡೀಲಿ ಎಳೆಂಟು ದಿನದಲ್ಲಿ ಸರಿ ಹೋಯ್ತದೆ…” ಎಂದೇ ಹೊಂದಿಕೊಂಡುಬಿಟ್ಟರು. ಯಾರಲ್ಲೂ ಯಾಕಾದರೂ ಈ ಎಕಾನಾಮಿಕಲ್ ಸ್ಟ್ರೈಕ್ ಮಾಡಿದರಪ್ಪಾ, ನಮ್ಮಂತಹವರ ಬದುಕು ಇನ್ನೆಂಗೆ ಎನ್ನುವ ಇನ್ನಾವುದೇ ಬಾಧೆಗಳೇ ಇರಲಿಲ್ಲ. ಇದರ ಹೊರತಾಗಿ ಒಂದು ಹಂತದ ಮೇಲ್ಮಟ್ಟದ ಬದುಕಿನ ನಾಗರಿಕರಲ್ಲೂ ಒಂದಿಷ್ಟು ಕ್ಯೂ ನಿಲ್ಬೇಕಾಗ್ತಿದೆ ಎನ್ನುವ ಗೊಣಗಾಟ ಬಿಟ್ಟರೆ ಅಪೂಟು ತಾಸುಗಟ್ಟಲೆ ನಿಲ್ಲುವ ಪ್ರಮೇಯಕ್ಕೆ ತಮ್ಮನ್ನು ಸಲೀಸಾಗೇ ಒಡ್ಡಿಕೊಂಡು ಈ ಐತಿಹಾಸಿಕ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು.
ತೀರ ಎಲ್ಲಿ ತಾಗಬೇಕೋ ಅಲ್ಲಿಗೇ ತಾಗಿತ್ತು ಮೋದಿ ಬೀಸಿದ್ದ ಚಾಟಿ. ಯಾರ ಹತ್ತಿರವೂ ಹೇಳಿಕೊಳ್ಳಲಾಗದ, ಇದ್ದರೂ ಅದನ್ನು ಬಿಳಿಯಾಗಿಸದ ಸಂಕಟಕ್ಕೆ ಬಿದ್ದವರು ಮಾತ್ರ ತೀರ ದೊಡ್ಡ ಮಂದಿಯೇ ಎನ್ನುವುದರಲ್ಲಿ ಯಾರಲ್ಲೂ ಸಂಶಯವೇ ಉಳಿದಿರಲಿಲ್ಲ. ಅದಕ್ಕಾಗೆ ಜನ ಸಾಮಾನ್ಯ ಕಷ್ಟ ಪಡಲು ತಯಾರಾಗಿದ್ದ. ಕಾರಣ ತನ್ನ ರಕ್ತ ಬಸಿದ ಹಣ ಕಪ್ಪಾಗಿ ಎಂಥೆಂಥವರದ್ದೋ ತಿಜೋರಿ ಸೇರುತ್ತಿದ್ದುದು ಈ ದೇಶದ ಪ್ರತಿಯೊಬ್ಬನಿಗೂ ತೀರಿಸಿಕೊಳ್ಳಲಾಗದ ಸಂಕಟವಾಗಿ ಕಾಡಿದ್ದು ಸುಳ್ಳಲ್ಲ. ಆದರೆ ಅದರ ಕಡೆಗೆ ಬೆರಳು ಮಾಡುವ ಧೈರ್ಯವಾಗಲಿ, ಜೀರ್ಣಿಸಿಕೊಳ್ಳುವ ಶಕ್ತಿಯಾಗಲಿ ಇಲ್ಲದ ಮೀಡಿಯಂ ವರ್ಗ ತೆಪ್ಪಗಿತ್ತು. ಆದರೆ ಈ ಹಂತದಲ್ಲಿ ಮಾಧ್ಯಮಗಳಿಗೆ ಅಸಲು ಜೀವ ತುಂಬುವ ಮಧ್ಯಮ ವರ್ಗದ ಬೆನ್ನಿಗೆ ಮತ್ತು ಮೋದಿಯವರ ನಿರ್ಧಾರಕ್ಕೆ ಜೊತೆ ನಿಲ್ಲಬೇಕಿದ್ದ ಮಾಧ್ಯಮಗಳು ಯಾಕೆ ವಿರೋಧ ಪಕ್ಷದ ಕೆಲಸ ಮಾಡ್ತೀವೆ…?
ಸಾಮಾಜಿಕ ಕಾಳಜಿ ಮತ್ತು ದೇಶದ ಬಗೆಗಿನ ಕಿಂಚಿತ್ತಾದರೂ ಸಂವೇದನೆ ಎನ್ನುವುದನ್ನೇ ಮಾಧ್ಯಮಗಳಲ್ಲಿ ಕಳೆದು ಹೋಗಿದೆ ಎನ್ನಿಸುತ್ತಿಲ್ಲವೇ..? ಜನ ಸಾಮಾನ್ಯರು ಹೇಗೆಲ್ಲಾ ಸಮಸ್ಯೆಯನ್ನು ನಿಭಾಯಿಸಬಹುದು, ಎಲ್ಲೆಲ್ಲಿ ಹೇಗೆ ಬ್ಯಾಂಕ್‍ನವರು ಕೆಲಸ ನಿರ್ವಹಿಸಿ ಹಣ ವಹಿವಾಟು ನೇರ್ಪುಗೊಳಿಸುತ್ತಿದ್ದಾರೆ, ಹೇಗೆ ಮಾಡಿದರೆ ಜನ ಸಾಮಾನ್ಯರ ಮತ್ತು ಅಕೌಂಟು ಇಲ್ಲದವರ ಸಮಸ್ಯೆ ಸರಿಹೋಗುತ್ತದೆ, ಯಾವ್ಯಾವ ಜಾಗದಲ್ಲಿ ಏನು ನಡೆಯುತ್ತಿದೆ ಯಾಕೆ ಗೊಂದಲವಾಗುತ್ತಿದೆ ಅದಕ್ಕೆ ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿ, ವಿವರ ಹಾಗು ಅದಕ್ಕಾಗೆ ಸಿದ್ಧವಿದ್ದ ವಾಲಂಟೀಯರ್‍ಗಳ ಸೈನ್ಯವನ್ನೆ ಸಜ್ಜು ಮಾಡಿ ತಾವೂ ಈ ಅಭಿಯಾನದಲ್ಲಿ ಭಾಗವಹಿಸಿ ನಿರಂತರ ಮಾಹಿತಿ ಪ್ರಸರಣ ಮಾಡುತ್ತಾ ಅಧ್ಬುತ ಫಲಿತಾಂಶಕ್ಕೆ ಕಾರಣವಾಗಬಹುದಿತ್ತು ಮಾಧ್ಯಮಗಳು. ಹಾಗೆಯೇ ದೇಶವನ್ನು ಬದಲಿಸಲು ಸಂಕಲ್ಪ ತೊಟ್ಟ ಪ್ರಧಾನಿಯ ಬೆನ್ನಿಗೆ ನಿಲ್ಲಬೇಕಿತ್ತು. ಸೈದ್ಧಾಂತಿಕ ಸಂಘರ್ಷಗಳೇ ಇದ್ದರೂ ಯುದ್ಧ ಕಾಲದಲ್ಲಿ ಪ್ರತಿಯೊಬ್ಬನೂ ಕೈ ಸೇರಿಸಲೇಬೇಕೆನ್ನುವುದನ್ನು ಅರಿತುಕೊಳ್ಳಬೇಕಿತ್ತು.
ಆದರೆ ಅತಿ ರಂಜನೀಯ ಸುದ್ದಿಗಾಗಿ ಮೀಡಿಯಾಗಳು ಮಾಡುವ ಕರಾಳ ಮುಖ ದಿನವೂ ಜಾಹೀರಾಗತೊಡಗಿದೆ ನೋಡಿ. ಇವರೆಲ್ಲ ಬರೆಯುತ್ತಿರುವುದು ಮತ್ತು ಅತಿ ಹೆಚ್ಚು ಬಾರಿ ತೋರಿಸಿದ್ದು, ಈಗಲೂ ತೋರಿಸುತ್ತಿರುವುದು, ಜನ ಸರತಿ ಸಾಲಿನಲ್ಲಿ ಕಷ್ಟಪಡುತ್ತಿದ್ದಾರೆ, ದುಡ್ಡು ಸಿಗುತ್ತಿಲ್ಲ, ಜನರ ಪರಿಸ್ಥಿತಿ ಗಂಭೀರವಾಗಿದೆ, ಸರಕಾರ ಸರಿಯಾದ ತಯಾರಿ ಮಾಡಿಕೊಂಡಿಲ್ಲ, ರಾಜಕೀಯ ನಾಯಕನೊಬ್ಬ ಸರದಿ ಸಾಲಿನಲ್ಲಿ ನಿಂತು ಬೆವರೊರೆಸಿಕೊಳ್ಳುವ ಗಿಮಿಕ್ ಶೋ ದ ರಿಪೀಟ್ ಟೆಲಿಕಾಸ್ಟು, ಅಲ್ಲೆಲ್ಲೊ ವಯಸ್ಸಿನ ಮತ್ತು ಸಹಜ ಅಘಾತಕ್ಕೊಳಗಾಗಿ ಮತ್ತು ಕಾಕತಾಳೀಯ ಎಂಬಂತೆ ಸರದಿ ಸಾಲಿನಲ್ಲಿ ಕುಸಿದು ಬಿದ್ದು ಸತ್ತರೆ, ಅದಕ್ಕೂ ಈ ಸ್ಟ್ರೋಕೆ ಕಾರಣವಾಯಿತು ಎನ್ನುವುದನ್ನು ಮರು ಜೋಡಿಸುತ್ತಾ, (ಇವತ್ತು ಸಾವಿರಕ್ಕೂ ಮಿಗಿಲು ರೈತರು ಸತ್ತಿದ್ದಾರಲ್ಲ ಅದನ್ನೊಮ್ಮೆಯಾದರೂ ಸ್ಪೇಶಲ್ ಬುಲೆಟಿನ್ ಮಾಡಿದ್ದೀರಾ..?) ಎಲ್ಲೆಲ್ಲಿ ಜನರಿಗೆ ತೊಂದರೆ ಎನ್ನುವುದಕ್ಕೆ ಏನೇಲ್ಲಾ ಕಾರಣಗಳಿವೆ ಎನ್ನುವುದನ್ನು ಬಿಡದೆ ಪಟ್ಟಿ ಮಾಡಿ ಇದಕ್ಕಾಗೆ ಕ್ಯಾಮೆರಾದಲ್ಲಿ ಮುಖ ತೋರಿಸಲು ಕಾಯ್ದಿರುವ ಆಸೆಬುರಕ ಜನರ ಕೈಯ್ಯಲ್ಲಿ ಹಲುಬಿಸುತ್ತಾ, ಸರಾಸರಿ ಸಮಯವನ್ನೆಲ್ಲಾ ಇದೊಂದು ಸಾಮಾಜಿಕ ಪೀಡುಗಾಗುತ್ತಿದೆಯಾ ಎನ್ನುವಂತೆ ವರ್ತಿಸುತ್ತಿವೆಯಲ್ಲಾ, ಈ ಚಾನೆಲ್‍ಗಳವರೆಲ್ಲಾ ಈ ದೇಶದ ನಾಗರಿಕರಾ ಇಲ್ಲ ಪ್ರೋಗ್ರಾಂ ಮಾಡಲು ಕರೆಸಿದ ಪರದೇಶದ ಪ್ರಜೆಗಳಾ..?
ತೀರ ತಾವೇ ಪ್ರಪಂಚದ ಸರ್ವ ಮಾಹಿತಿಯ ಭಂಡಾರದ ಅಂತಿಮ ವಿಶ್ಲೇಷಕರು ಎಂದು ಚರ್ಚೆಯ ಮಧ್ಯೆ ಮಧ್ಯೆ ಊಳಿಡುತ್ತಾ ಕೂಡುವ ಚಾನೆಲ್ ಸುದ್ದಿ ಸಂಪಾದಕರುಗಳೇ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿಕೊಂಡಿರುವ ನನಗೇ, ಈ ಪರಿಸ್ಥಿತಿಯ ಕಾರಣ ಭವಿಷ್ಯತ್ತಿನಲ್ಲಿ ಗಣನೀಯವಾಗಿ ಬೆಲೆ ಇಳಿಕೆ ಸೇರಿದಂತೆ ದೇಶಾದ್ಯಂತದ ಆರ್ಥಿಕ ಪ್ರಗತಿ ದುಪ್ಪಟ್ಟಾಗುತ್ತದೆ ಎನ್ನುವ ಸಣ್ಣ ಅಂದಾಜು ದಕ್ಕುವಾಗ ಮೇಧಾವಿಗಳಿಗೆಲ್ಲಾ ಇದರ ಭವಿಷ್ಯದ ಅರಿವು ಖಂಡಿತಕ್ಕೂ ಸಿಕ್ಕಲೇಬೇಕಲ್ಲ. ಜತೆಗೆ ಸುಪ್ರಿಂಕೋರ್ಟು ಇಂತಹ ಬ್ಯಾನ್‍ಗಳಿಗೆಲ್ಲಾ ತಡೆಯಾಜ್ಞೆ ಸಾಧ್ಯವೇ ಇಲ್ಲ ಎನ್ನುವುದನ್ನೂ ಸುದ್ದಿ ಮಾಡದ ನೀವೆಲ್ಲಾ ಯಾವ ರೀತಿಯ ಸಮಾಜದ ಜನತೆಗೆ ಸುದ್ದಿ ಕೊಡಬಲ್ಲಿರಿ..? ಕನಿಷ್ಟ ಸುಪ್ರಿಂಕೋರ್ಟಿನ ಆದೇಶ ಮತ್ತು ಆಶಯವನ್ನಾದರೂ ರಿಪೀಟೆಡ್ಲಿ ತೋರಿಸಿ ಕಾನೂನಿನ ದೃಷ್ಟಿಯಲ್ಲೂ ಇದು ಸರಿಯಾದ ನಿರ್ಧರವೇ ಎನ್ನುವ ಧನಾತ್ಮಕ ಧೋರಣೆ ಬಿತ್ತರಿಸಿ ಸಾಲಿನಲ್ಲಿ ನಿಲ್ಲುತ್ತಿರುವವರ ಮತ್ತು ಕ್ರಮೇಣ ಸಹನೆ ಕಳೆದುಕೊಳ್ಳುವ ಸಿಡುಕರ ಮನಸ್ಸಿಗೆ ಮುದ ಒದಗಿಸಬಹುದಿತ್ತು. ಆದರೇನು ಅಂಥಾ ಯಾವ ಪ್ರಯತ್ನಗಳೂ ಮೀಡಿಯಾಗಳಿಂದ ಆಗುತ್ತಲೇ ಇಲ್ಲ. ನಟಿಯೊಬ್ಬಳ ರಂಕುಗಳಿಗೆ ದಿನವಿಡೀ ಸಮಯ ಕೊಡುವ ಚಾನೆಲ್ಲುಗಳು, ದೇಶದ ಏಳ್ಗೆಗಾಗಿ ದಿನದಲ್ಲಿ ನಾಲ್ಕಾರು ಗಂಟೆ ಧನಾತ್ಮಕ ಕಾರ್ಯಕ್ರಮ ಮಾಡಲು ಸಮಯ ಇರಲಿಲ್ಲವಾ..?
ಇತ್ತ ಪತ್ರಿಕೆಗಳೂ ನಂ.1 ಎನ್ನುವ ಪೈಪೋಟಿಗೆ ಬೀಳುತ್ತಿರುವುದನ್ನು ಹೊರತಾಗಿಸಿದರೆ ಯಾವ ರೀತಿಯಲ್ಲೂ ಧನಾತ್ಮಕ ವರದಿಯ ಮುಖಗಳು ಎದ್ದು ಕಾಣುತ್ತಲೇ ಇಲ್ಲ. ಅದರಲ್ಲೂ ಇವತ್ತು ಐದಾರು ಲಕ್ಷದ ಆಸುಪಾಸಿನಲ್ಲಿರುವ ಪ್ರಸಾರಕ್ಕೆ ಕನಿಷ್ಟ ಇಬ್ಬರಂತೆ ಹಿಡಿದರೂ ಹತ್ತು ಲಕ್ಷ ಓದುಗರಿರುತ್ತಾರೆ. ಹಾಗಿದ್ದಾಗ ದಿನವೂ “… ಬ್ಯಾಂಕಿನ ಮುಂದೆ ತಪ್ಪದ ಸಾಲು, ಖಾಲಿಯಾದ ಏ.ಟಿ.ಎಮ್., ಎಲ್ಲೊ ದೊರೆಯುತ್ತಿಲ್ಲ ಹಣ, ಜನ ಸಾಮಾನ್ಯರಿಗೆ ಬರೆ-ಧನಿಕರಿಗೆ ಹೊರೆ, ಸುಧಾರಣೆಯೊಲ್ಲದ ಆರ್ಥಿಕ ತುರ್ತು ಪರಿಸ್ಥಿತಿ, ಎನ್ನುವಂತಹ ಟ್ಯಾಗ್‍ಲೈನಿನ ಬರಹವನ್ನೇ ಪ್ರಕಟಿಸುತ್ತಿದ್ದರೆ, ಇದಕ್ಕೆ ಕಾಯ್ದು ಕೂತ ಪೇಸ್‍ಬುಕ್ಕಿನ ಪೇಡ್ ಗಿರಾಕಿಗಳು ಲಬಕ್ಕನೆ ಅದನ್ನು ಶೇರ್ ಮಾಡಿ ಅಯ್ಯಯ್ಯೊ ಹೀಗೆಗೆ ಪತ್ರಿಕೆಗಳೆಲ್ಲಾ ಬರ್ದಿದಾವೆ, ಜನ ಸಿಕ್ಕಾಪಟ್ಟೆ ಸಮಸ್ಯೆಯಲ್ಲಿದ್ದಾರೆ ನಿಮಗೂ ಹೌದೆನ್ನಿಸುವುದಾದರೆ ಶೇರ್, ಲೈಕ್ ಮಾಡಿ ಎನ್ನುತ್ತಾ ಹುಯಿಲಿಗೆ ಬೀಳುತ್ತಿದ್ದಾರೆ. ಅತ್ತ ಅವನ್ಯಾರೋ ಕೃತಕ ಸರದಿ ಸೃಷ್ಟಿಸಲು ಸೂಚನೆ ಕೊಡುತ್ತಿದ್ದುದನ್ನು ಫೇಸ್‍ಬುಕ್ಕಿನಲ್ಲಿ ನೇರವಾಗಿ ಬಯಲು ಮಾಡುತ್ತಿದ್ದರೂ ಅದನ್ನೆಲ್ಲಾ ಸುದ್ದಿಯಾಗಿಸಬೇಕೆನ್ನುವ ಯಾವ ತಪನೆಯೂ ಸುದ್ದಿ ಮನೆಯಲ್ಲಿ ಕಂಡು ಬರುತ್ತಲೇ ಇಲ್ಲ.
ಕೇವಲ ಡಿಪಾಸಿಟ್ ಮಾಡಿ, ಇರುವ ಹಣವನ್ನಷ್ಟೆ ಬಳಸಿಕೊಳ್ಳಿ, ಎರಡೂ ರೀತಿಯ ವ್ಯವಹಾರಕ್ಕೆ ಬ್ಯಾಂಕುಗಳೂ ಬೇರೆಬೇರೆ ಸರದಿ ಸಾಲು ನಿಲ್ಲಿಸಿ ವ್ಯವಹರಿಸಲಿ, ಹೇಗೆಲ್ಲಾ ಸುಲಭಕ್ಕೆ ಕಡಿಮೆ ಸಮಯದಲ್ಲಿ ಹಣ ಪಡೆಯಬಹುದು, ಬ್ಯಾಂಕೂ ಕೂಡಾ ಹೇಗೆ ಇದಕ್ಕೆ ಸುಲಭವಾಗಿ ಸಹಕರಿಸಬೇಕು, ಹೆಚ್ಚಿನ ಕೌಂಟರ್ ತೆಗೆಯಲು ಹೇಗೆ ನಾಗರಿಕರೂ ಸಹಕರಿಸಬೇಕು, ಹೀಗೆ ಹಲವು ರೀತಿಯಲ್ಲಿ ಜನರನ್ನೂ ಬ್ಯಾಂಕ್ ಸಿಬ್ಬಂದಿಯನ್ನೂ ಪುಸಲಾಯಿಸಬಹುದಿತ್ತು. ಸುಲಭವಾಗಿ ದಿನಗಳನ್ನು ದಾಟಿಸಬಹುದಿತ್ತು. ಆದರೆ ಇವತ್ತಿಗೂ ಎಲ್ಲಾ ಪತ್ರಿಕೆ ನ್ಯೂಸ್ ಚಾನೆಲ್‍ನ ಪ್ರಮುಖ ಸುದ್ದಿಗಳೇನಿವೆ ನೋಡಿ..? ಬರೀ ಸರತಿ ಸಾಲಿನ ಚಿತ್ರಗಳು ಬಿಟ್ಟರೆ ಚಿಲ್ಲರೆ ಅಭಾವ. ಏನು ಬರೀ ಸ್ಮಶಾನ ಭಾವಗಳೇ ನಿಮ್ಮ ಸುದ್ದಿಯಾಗಬೇಕೇ..?
ತೀರ ಬೆರಳೆಣಿಕೆಯ ನಗರ ಹೊರತು ಪಡಿಸಿದರೆ ಎಲ್ಲೂ ಅನಾಮತ್ತು ಎರಡ್ಮೂರು ಗಂಟೆ ಕ್ಯೂ ನಿಂತಿದ್ದ ಉದಾ ಇಲ್ಲವೇ ಇಲ್ಲ. ಅದರಲ್ಲೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಮಾತ್ರವೇನಾ ಕರ್ನಾಟಕ ಎನ್ನುವುದನ್ನು ವಾಹಿನಿಗಳು ಮೊದಲು ಪ್ರಶ್ನಿಸಿಕೊಳ್ಳಬೇಕು. ನೆನಪಿರಲಿ ಅದು ಮುದ್ರಣ ಮಾಧ್ಯಮವೋ, ಚಾನೆಲ್‍ನ ಪ್ರಸಾರವೋ ಎರಡೂ ಕಡೆಯಲ್ಲಿ ಸಂಪಾದಕನ ತೀರ್ಮಾನ ಅಂತಿಮವಾಗುತ್ತದಾದರೂ, ಸ್ವಂತದ ಅಭಿಪ್ರಾಯಕ್ಕೀಗ ಸಮಾಜಿಕ ಜಾಲಾತಾಣಗಳಿರುವಾಗ ಯಾವ ದೊಣೆನಾಯಕನ ಅಪ್ಪಣೆ ಜರೂರತ್ತು ಬೇಕಿಲ್ಲ. ಉತ್ತಮ ಬರಹವಾಗಿದ್ದರೆ ನೋಡುನೋಡುತ್ತಿದ್ದಂತೆ ನೂರಾರು ಜನ ಶೇರ್ ಮಾಡುತ್ತಾರೆ. ಯಾವನಿಗಿದೆ ಇವತ್ತು ಸಂಪಾದಕನ ಮುಲಾಜು..?
ಹಾಗೇಯೆ ಪ್ರತಿಯೊಬ್ಬ ಪರ – ವಿರೋಧ ಅಬ್ಬರದ ಚರ್ಚೆ ಜತೆಗೆ ಪೇಡ್ ಪುಟನಿರ್ವಾಹಕರ ಅಕ್ಷರ ಹಾದರತನವೂ ಇಂತಹ ಸಂದರ್ಭದಲ್ಲಿ ಬೇತ್ತಲಾಗುತ್ತಲೇ ಇರುತ್ತದೆ. ಇವತ್ತು ಪ್ರಧಾನಿ ಕಾರ್ಯಾಲಯ ಕೆಲಸ ಮಾಡುತ್ತಿದೆ ಮತ್ತದು ಈ ದೇಶದ ಪ್ರಗತಿಗೆ ಕಟಿಬದ್ಧವಾಗಿದೆ ಎನ್ನುವುದನ್ನು ಪಬ್ಲಿಕಾಗಿ ಮಾಡುತ್ತಿದ್ದರೂ ಅದು ಗಂಜಿ ಗಿರಾಕಿಗಳಿಗೆ ಪಥ್ಯವಾಗುವುದಿಲ್ಲ, ಅವರೆಂದಿಗೂ ಗಂಜಲದಲ್ಲಿ ಬಿದ್ದ ನೊಣಗಳಂತೆ ಪತರುಗುಟ್ಟುತ್ತಲೇ ಇರುತ್ತಾರೆ. ಅದರೆ ಇದನ್ನೆಲ್ಲಾ ತಹಬಂದಿಗೆ ತರಬಹುದಾಗಿದ್ದ ಮಾಧ್ಯಮಗಳಿಗೇನಾಗಿದೆ ಧಾಡಿ…? ಬರೀ ಟಿ.ಆರ್.ಪಿ. ಮಾತ್ರ ನಿಮ್ಮ ಉಸಿರಾ..? ನೆನಪಿರಲಿ. ಪುಟಗೋಸಿ ನೂರೈವತ್ತು ಕ್ಯಾಮೆರಾ ಪಾಯಿಂಟುಗಳು ಜನಾಭಿಪ್ರಾಯವನ್ನು ನಿರ್ಧರಿಸಲಾರವು. ಹಾಗಾಗೇ ಅಧ್ಬುತ ಪ್ರೋಗ್ರಾಂ ಆಗಬಹುದೆಂದು ಏಣಿಸಿದ ಕಾನ್ಸೆಪ್ಟುಗಳು ಅಷ್ಟೆ ಬೇಗ ಮಕಾಡೆ ಮಲಗಿದ ಉದಾ. ಗಳು ಎದುರಿಗಿವೆ.
ಏನೇ ಇರಲಿ. ಜನರು ಪತ್ರಿಕೆ ಮತ್ತು ಮಾಧ್ಯಮದಲ್ಲಿ ಬರುವುದನ್ನು ಸುಲಭಕ್ಕೆ ನಂಬುವ ಪರಿಸ್ಥಿತಿ ಇರುವಾಗ ಕನಿಷ್ಟ ಜರೂರತ್ತಿನ ಸಮಯದಲ್ಲಾದರೂ ಅತಿಮಾನುಷ, ಅತಿ ರಂಜನೀಯ ಸುದ್ದಿಗಳ ಹಸಿವು ಕಡಿಮೆ ಮಾಡಿಕೊಳ್ಳಿ. ಆಫ್ಟರ್‍ ಆಲ್ ನೀವೆಲ್ಲರೂ ಈ ದೇಶಕಾಯುವ ಅಥವಾ ನಿರ್ಧಾರ ರೂಪಿಸುವಂತಹ ಎರಡೂ ಆಯಕಟ್ಟಿನ ಜಾಗದಲ್ಲೂ ಇಲ್ಲ. ನೀವೇನಿದ್ದರೂ ಬರೀ ಚಿತ್ರಣ ಕೊಡುವ ಮಂದಿ. ಈಗಾಗಲೇ ಸಾರ್ವಜನಿಕರಿಗೆ ನಿಮ್ಮ ಹಣೆಬರಹ ಗೊತ್ತಾಗಿರುವಾಗ ಅದಕ್ಕೆಲ್ಲಾ ಅತ ತಲೆ ಕೆಡಿಸಿಕೊಳ್ಳಲಾರ. ಆದರೆ ಇದ್ದರೂ ಇರಬಹುದೇನೋ ನಮ್ಮ ಹುಡುಗ ಟಿ.ವಿ.ಲಿ ಹೇಳ್ತಿದಾನೆ ಎಂದು ನಂಬಿಕೂಡುವ ಇನ್ನೊಂದು ವರ್ಗವಿದೆಯಲ್ಲ ಅಂತವರ ನಂಬುಗೆಯ ಬುನಾದಿಯನ್ನೇ ಹಳ್ಳ ಹಿಡಿಸಿಬಿಡುತ್ತೀರಲ್ಲಾ ನಿಮಗೆಲ್ಲಾ ನಿಜಾಯಿತಿ ಮತ್ತು ಆತ್ಮಸಾಕ್ಷಿ ಎನ್ನುವ ಪದಗಳ ಅರ್ಥವನ್ನು ಇನ್ನೊಮ್ಮೆ ವಿವರಿಸಬೇಕಿದೆಯಾ..?
ಇದಕ್ಕೆಲ್ಲಾ ವಿವರಣೆ ಇದೆಯಾ..?
  • ಜನರು ಹಿಂದೆಯೂ ಆಧಾರ ಕಾರ್ಡಿಗೆ, ರೇಶನ್ನಿಗೆ, ಪಂಚಾಯತ್ ಸೌಲಭ್ಯಕ್ಕೆ, ಪಹಣಿ ಪತ್ರಕ್ಕೆ, ರೇಲ್ವೆ ಟಿಕೇಟ್ಟಿಗೆ (ತತ್ಕಾಲಗಾಗಿ ಬೆಳಿಗ್ಗೆ ಐದಕ್ಕೆ ಸರದಿ ಹಿಡಿಯುವವರೂ ಇವತ್ತಿಗೂ ಇದ್ದಾರೆ) ಹೀಗೆ ಸತತವಾಗಿ ಬದುಕಿನಲ್ಲಿ ಆಗಾಗ ಸರದಿ ಕಾಯುತ್ತಲೇ ಇದ್ದಾರೆ. ನೆನಪಿರಲಿ ವೈದ್ಯರೊಬ್ಬರ ಭೇಟಿಗೆ ದಿನವೂ ಕನಿಷ್ಟ ನಾಲ್ಕೈದು ಗಂಟೆಯೂ ಕಾಯಬೇಕಾಗುತ್ತದೆ. ಮುಂದೂ ಕಾಯುತ್ತಾರೆ ಇದರಲ್ಲಿ ಡೌಟೇ ಇಲ್ಲ. ಆದರೆ ಇದಕ್ಕೆ ಮಾತ್ರ ಯಾಕೆ ಈ ಹುಯಿಲು..? ಅದೂ ಯಾವ ವರ್ಗದಲ್ಲೂ ಅಸಮಾಧಾನ ಎನ್ನುವುದು ಕಂಡುಬಾರದಿದ್ದಾಗಲೂ.?
  • ಪ್ರಧಾನಿ ನೋಟ್ ಬ್ಯಾನ್ ಎನ್ನುತ್ತಿದ್ದಂತೆ ಪತ್ರಕರ್ತನೊಬ್ಬ ನಿಮ್ಮ ನೋಟೆಲ್ಲ ಬರೀ ಪೇಪರು ಎನ್ನುತ್ತಾನೆ. ಅದರರ್ಥ ಅದರ ಬೆಲೆ ಕಳೆದು ಹೋಯಿತು ಎಂದೇ..? 50 ದಿನ ಕಾಲಾವಕಾಶ ಇದ್ದರೂ ನಾಳೆನೆ ಬದಲಾವಣೆ ಬೇಕೆನ್ನುವಂತೆ ಪಬ್ಲಿಕ್ಕನ್ನು ರೊಚ್ಚಿಗೆಬ್ಬಿಸಿದ್ದೇ ಇಂತಹ ಸುದ್ದಿಗಳು.
  • ಸರತಿ ಸಾಲಿನಲ್ಲಿ ನಿಂತು ಸತ್ತದ್ದೇ ದೊಡ್ಡ ಸುದ್ದಿ ಮಾಡಿದ ಮಾಧ್ಯಮಗಳು, ನಂತರದಲ್ಲಿ ಅದಾಗಿದ್ದು ಸಹಜ ಸಾವು ಎನ್ನುವ ಫ್ಯಾಕ್ಟ್ ನ್ನು ಬಿತ್ತರಿಸುವುದೇ ಇಲ್ಲವಲ್ಲ. ಏನಾಗಿದೆ ನಿಮಗೆ ಧಾಡಿ..? ಪಿಂಕ್ ನೋಟಿನ ಕಲರ್ರು ತುಟಿಗೆ ಸಖತ್ತಾಗಿದೆ ಎನ್ನುವುದೇ ಪ್ರಮುಖ ಸುದ್ದಿಯಾ ಅಥವಾ ನೋಟು ಒರಿಜಿನಲ್, ಅದರಲ್ಲಿ ಮೋದಿ ಆಪ್ ಮೂಲಕ ಒರಿಜಿನಾಲಿಟಿ ನೋಡಬಹುದು ಎನ್ನುವುದನ್ನು ಪ್ರಮುಖ ಸರಕಾಗಿಸಬೇಕಾ..?
ಈ ಬ್ಯಾನ್ ಮೂಲಕ ದೊಡ್ಡ ಮಟ್ಟದ ಭ್ರಷ್ಟಚಾರ ತಡೆಯಲಾಗುತ್ತಿದೆ ಇದಕ್ಕಾಗಿ ನಾವು ಏನು ಮಾಡಬೇಕು..? ದೇಶದ ಕೊನೆಯ ವ್ಯಕ್ತಿಯವರೆಗೂ ಇದರ ಪ್ರಕ್ರಿಯೆ ಹೇಗೆ ತಲುಪಬೇಕು ಮತ್ತು ಇದನ್ನು ಸರಿದೂಗಿಸಲು ಬ್ಯಾಂಕು ಹೇಗೆ ತಕ್ಷಣಕ್ಕೆ ಚುರುಕಾಗಿ ಕೆಲಸ ನಿರ್ವಹಿಸದರೆ ಇನ್ನೂ ಅನುಕೂಲವಾದೀತು ಎನ್ನುವುದನ್ನು ಚಿಂತಿಸಿ ತರ್ಕಿಸಿ ಜನರ ಬಳಿಗೆ ಮಾಹಿತಿ ಕೊಡಬೇಕಿದ್ದವರೆಲ್ಲರೂ, ಇಲ್ಲ ಇದನ್ನು ಮೊದಲೇ ಹೇಳಿ ಮಾಡಬೇಕಿತ್ತು, ಈ ನಿರ್ಧಾರ ಹಿಂಪಡೆಯಬೇಕಿತ್ತು, ನೋಟು ಬ್ಯಾನ್ ಮಾಡುವುದನ್ನು ಕೂಡಲೇ ಹಿಂದಕ್ಕೆ ಪಡೆಯದಿದ್ದರೆ ನಾವು ಹೋರಾಟ ಮಾಡುತ್ತೇವೆ…. ಇವುಗಳೂ ಸುದ್ದಿಗಳೇನ್ರಿ..? ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿ ಇಷ್ಟು ಋಣಾತ್ಮಕ ಧೋರಣೆ ಅನುಸರಿಸಿದರೆ ಪ್ರಜಾ ಪ್ರಭುತ್ವಕ್ಕೆ ಧಕ್ಕೆಯಾಗುವುದು ಅತ್ಲಾಗೆ ಇರಲಿ, ನಾಲ್ಕನೆಯ ಅಂಗದ ಸ್ಥಾನವನ್ನೂ ಕಳೆದುಕೊಳ್ಳಬೇಕಾದೀತು ಎಚ್ಚರ.


Thursday, November 17, 2016


ಸ್ಟ್ರೋಕ್‍ಗಳನ್ನು 
ಬೇಡವೆನ್ನುವುದೂ ಭಯೋತ್ಪಾದನೆಯೇ...!

 (ಇದ್ದಕ್ಕಿದ್ದಂತೆ ಆರ್ಥಿಕ ಸ್ಟ್ರೋಕ್‍ನ ಸಿಕ್ಸರ್ ಭಾರಿಸಿದ ಪ್ರಧಾನಿಯ ಹೊಡೆತಕ್ಕೆ ಅಕ್ಷರಶ: ಕಪ್ಪುಹಣದ ಧಣಿಗಳು ಅಲ್ಲಾಡಿಹೋಗಿದ್ದಾರೆ. ಪ್ರಧಾನಿ ಅದ್ಯಾವ ಮಟ್ಟದಲ್ಲಿ ಆಪತ್ತು ಎದಿರು ಹಾಕಿಕೊಂಡಿದ್ದಾರೆಂದರೆ ಅವರ ಶತ್ರುಗಳ ಸಂಖ್ಯೆ ಒಂದೇ ನಿಮಿಷದಲ್ಲಿ ಸಾವಿರ ಪಟ್ಟು ಹೆಚ್ಚಿದ್ದು ಸುಳ್ಳಲ್ಲ. ಆದರೆ ಈ ದೇಶ ಒಮ್ಮೆ ತೀರ ನಿಶ್ಚಿಂತೆಯಿಂದ ನಿದ್ರಿಸುವಂತಹ, ನಮಗೊಬ್ಬ ನಾಯಕನಿದ್ದಾನೆ ಎನ್ನಿಸುವಂತಹ ಕೋಟ್ಯಾಂತರ ಭಾರತೀಯರ ಬೆಂಬಲವನ್ನೂ ಒಂದೇ ಒಂದು ಕವರ್‍ಡ್ರೈವ್‍ನಿಂದ ಗಿಟ್ಟಿಸಿಬಿಟ್ಟಿದ್ದಾರೆ ಮತ್ತು ಈ ವಿಷಯವೇ ಇವತ್ತು ಕಳೆದುಕೊಂಡ ಕಪ್ಪುಹಣಕ್ಕಿಂತಲೂ ಮಿಗಿಲಾಗಿ ಮರ್ಮಾಘಾತವನ್ನುಂಟು ಮಾಡಿದ್ದು ಎದುರಾಳಿಗಳಿಗೆ. ಒಂದು ಸರ್ಜಿಕಲ್ ಸ್ಟ್ರೈಕೇ ಇನ್ನೂ ಜೀರ್ಣವಾಗಿರಲಿಲ್ಲ. ಅಡ್ಡೇಟಿನ ಮೇಲೆ ಗುದ್ದೇಟು ಎನ್ನುವಂತೆ ಮೋದಿ ಇದನ್ನೂ ಬಾರಿಸಿ ಬಿಟ್ಟಿದ್ದಾರೆ, ಎಂದಿನಂತೆ ಎಬುಜೀಗಳು ಪಿಸಣಾರಿತನದಿಂದ ಮುಲಮುಲ ಎನ್ನತೊಡಗಿದ್ದಾರೆ ಕ್ಷೀಣವಾಗಿ..)  
ಒಂದು ಸಣ್ಣ ಕ್ಯಾಲ್ಕುಲೇಶನ್ನು. ಅನಾಮತ್ತು ಎಪ್ಪತ್ತು ವರ್ಷ ಆಗೊಗಿದೆ. ಯಾಕೆ ಇನ್ನು ಭಾರತಕ್ಕಾಗಲಿ ಪಾಕಿಸ್ತಾನಕ್ಕಾಗಲಿ ಕಾಶ್ಮೀರ ವಿಷಯವನ್ನು ಬಗೆಹರಿಸಲೇ ಆಗುತ್ತಿಲ್ಲ. ಎಷ್ಟೆ ಬಡಿದಾಡಿದರೂ ಭಾರತವಂತೂ ಅದನ್ನು ಬಿಟ್ಟುಕೊಡಲಾರದು. ಎಷ್ಟೇ ಮೇಲೆ ಬಿದ್ದು ಯುದ್ಧ ಮಾಡಿದರೂ ಪಾಕಿಸ್ತಾನಕ್ಕೆ ಕಾಶ್ಮೀರ ವಿಷಯದಲ್ಲಿ ಒದೆ ತಿನ್ನುವುದೂ ತಪ್ಪುತ್ತಿಲ್ಲ. ಹೋಗಲಿ ಸಾವಿರ ವರ್ಷದ ಯುದ್ಧ ಮಾಡಿ ಗೆಲ್ಲುತ್ತೇನೆಂದು ಹೂಂಕರಿಸಿದ ಯಾವ ನಾಯಕನಿಗೂ ಕನಿಷ್ಟ ತನ್ನದೇ ಸೈನ್ಯವನ್ನೂ ಸಂಭಾಳಿಸುವ ಖದರ್ರೂ ಬಂದಿದ್ದೇ ಕಾಣುತ್ತಿಲ್ಲ. (ಜನರಲ್ ಯಾಹ್ಯಾ ಖಾನ್‍ನಿಂದ ಬೆನಜೀರ್ ಭುಟ್ಟೊವರೆಗೂ ಒಬ್ಬರೂ ಸರಿಯಾಗಿ ಅವರ ಅಧಿಕಾರಾವಧಿಯನ್ನೇ ಮುಗಿಸಲಾಗಲಿಲ್ಲ. ಇದ್ದ ನೆಲದಲ್ಲೇ ನೇಣು, ರಾಜಕೀಯ ಕೊಲೆಗಳಿಗೆ ಬಲಿಯಾಗಿ ಹೋದರಲ್ಲ. ಇನ್ನು ಸಾವಿರ ವರ್ಷದ ಯುದ್ಧವೆಲ್ಲಿಂದ ಬರ್ಬೇಕು..?) ನೇರ ಯುದ್ಧದಲ್ಲಿ ಗೆಲ್ಲಲಾಗುವುದೇ ಇಲ್ಲ ಪರೋಕ್ಷ ಯುದ್ಧದಲ್ಲಂತೂ ಮೋದಿಯಂತಹ ದೈತ್ಯ ಕೆಲಸಗಾರ ಪ್ರಧಾನಿಯಾದ ಮೇಲೆ ಸಾಧ್ಯವೇ ಇಲ್ಲ ಎನ್ನುವಂತಹ ವಾತಾವರಣ ನಿರ್ಮಿಸಿಬಿಟ್ಟಿದ್ದಾರೆ. ಇಂತಹ ಕಾರಣಗಳಿಗಾಗೇ ಇವತ್ತು ಕಾಶ್ಮೀರ ಬಗೆಹರಿಯುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದರೆ, ಅಲ್ಲಿನ ಆರ್ಥಿಕತೆಯನ್ನು ಪಾಕಿಸ್ತಾನ ಬುಡಮೇಲು ಮಾಡಿದ ರೀತಿಯಿದೆಯಲ್ಲ ಅದ್ಯಾವ ಪರಿಯಲ್ಲಿ ಕಣಿವೆ ರಾಜ್ಯವನ್ನು ಜೀರ್ಣಗೊಳಿಸಿತ್ತೆಂದರೆ ಮೋದಿ ಹೀಗೊಂದು ಆರ್ಥಿಕ ಸ್ಟ್ರೈಕ್ ಘೋಷಿಸದೆ ಕಾಶ್ಮೀರದ ಅನಧೀಕೃತ ಆರ್ಥಿಕತೆಯ ಬೆನ್ನೆಲುಬು ಮುರಿಯುವುದು ಸಾಧ್ಯವೇ ಇರಲಿಲ್ಲ.
(ಅಂದ ಹಾಗೆ ಜಾಗತಿಕವಾಗಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವುದು ಯಾವ ವಿದೇಶಿ ನಾಯಕನಿಗೂ ಬೇಕಿಲ್ಲ ಮತ್ತು ಅಂತರಾಷ್ಟ್ರೀಯ ರಾಜಕೀಯ ಚದುರಂಗದ ದಾಳವಾಗಿ ಇದು ಬಳಕೆಯಾಗುತ್ತಿದೆ. ಅದಕ್ಕಾಗೇ ಒಂದು ನಿರ್ಣಾಯಕ ಹಂತವನ್ನು ಸೃಷ್ಟಿಸಲು ಸಾಧ್ಯವಾಗುತ್ತಲೇ ಇಲ್ಲ ಹೊರತಾಗಿ ಭಾರತೀಯ ಮುಸ್ಲಿಂರಿಗಾಗಲಿ, ಪಾಕಿಗಳಿಗಾಗಲಿ ತೀರ ಎದೆಯೊಡೆದುಕೊಂಡು ಯುದ್ಧ, ಮತ್ತೊಂದು ಎಂದು ನಿಲ್ಲುವ ಹರಕತ್ತೇ ಇಲ್ಲ. ಆದರೆ ನಿಯಂತ್ರಣದ ದಂಡ ಇರುವುದೇ ಬೇರೆ ದೇಶಗಳ ಕೈಯ್ಯಲ್ಲಿ. ಅವರು ಪಾಕಿಸ್ತಾನವನ್ನು ತಮ್ಮಿಚ್ಛೆಯಂತೆ ಛೂ ಬಿಡುತ್ತಿದ್ದರೆ ಅದನ್ನು ಕೊಟ್ಟುಕೂತಿದ್ದು ಯಾರೆಂದು ಮತ್ತೆ ಹೇಳಬೇಕಿಲ್ಲ. ಈ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ. )
ಅದರಲ್ಲೂ ಮೊದಲೇ ಪ್ರಕ್ಷಬ್ಧ ಪರಿಸ್ಥಿಯ ಲಾಭ ಎತ್ತುವುದರಲ್ಲಿ ನಿಸ್ಸಿಮವಾಗಿರುವವರನ್ನು ಹೀಗೆ ಅಧೀಕೃತವಾಗೇ ಹೊಡೆಯುವ ನಿಖರ ಔಚಿತ್ಯ ಕೈಗೊಳ್ಳಲೇಬೇಕಿತ್ತು. ಕಾರಣ ಕಾಶ್ಮೀರದಾದ್ಯಂತ ಲಭ್ಯವಿರುವ ಖೋಟಾ ನೋಟು ಮತ್ತು ಕಪ್ಪು ಹಣದ ಚಲಾವಣೆಯ ಸಂಖ್ಯೆ ನೂರಕ್ಕೆ, ನೂರಾ ಒಂಭತ್ತು ದಾಟಿತ್ತು ಎನ್ನುತ್ತದೆ ಸಮೀಕ್ಷೆ. ಅದರೊಂದಿಗೆ ಎದುರಿಗೇ ಇರುವ ಉ.ಪ್ರ. ಚುನಾವಣೆಯಲ್ಲಿ ಹರಿದು ಬರಲಿದ್ದ ಕಪ್ಪುಹಣದ ಮೊತ್ತವೇ ಮೂವತ್ತು ಸಾವಿರ ಕೋಟಿ ಮೀರಲಿತ್ತು. ಏನಾಗಬೇಡ ಒಂದು ದೇಶದ ಆರ್ಥಿಕತೆ. ಮೋದಿಯವರನ್ನು ಹೊರತು ಪಡಿಸಿದರೆ ಇನ್ನೊಬ್ಬೆ ಒಬ್ಬ ಮೀಟರು ಇರುವ ಪ್ರಧಾನಿ ಭವಿಷ್ಯತ್ತಿನಲ್ಲಿ ಬರುವ ಬಗ್ಗೆನೆ ನನಗೆ ಸಂಶಯವಿದೆ. 
ಅದಕ್ಕೆ ಸರಿಯಾಗಿ ಇದ್ದಕ್ಕಿದ್ದಂತೆ ಆರ್ಥಿಕ ವ್ಯವಸ್ಥೆಯ ಮೇಲೂ ಸುಪರ್‍ಸ್ಟ್ರೋಕ್ ಹೊಡೆದು ಒಂದೇ ಆರ್ಡರ್‍ನಲ್ಲಿ ಸಂಪೂರ್ಣ ಭೂಗತ ಲೋಕ ಮತ್ತು ಶತ್ರುರಾಷ್ಟ್ರಗಳು ಸುಲಭವಾಗಿ ಭಾರತವನ್ನು ಅಸ್ಥೀರಗೊಳಿಸುವ ಯೋಜನೆ ರೂಪಿಸಿದ್ದುವಲ್ಲ ಅದನ್ನು ಯಾವ ಹಂತದಲ್ಲೂ ಮರುಬಳಕೆಗೂ, ಇನ್ಯಾವ ರೀತಿಯಲ್ಲೂ ಉಪಯೋಗಕ್ಕೆ ಬಾರದಂತೆ ಬರಬಾದು ಮಾಡಿಬಿಟ್ಟಿದ್ದಾರೆ. ಇನ್ನೆಲ್ಲಿಂದ ಎದ್ದು ಕೂರಬೇಕು ಖೋಟಾ ನೋಟಿನ ಜಾಲ. ಒಂದು ಗೊತ್ತಿರಲಿ. ಭಾರತದೊಳಕ್ಕೆ ಬರುತ್ತಿದ್ದ ಖೋಟಾ ನೋಟಿನ ಜಾಲದ ವ್ಯವಸ್ಥೆ ಇಲ್ಲೊಂದು ಪ್ರಬಲ ಸಮಾನಾಂತರ ಆರ್ಥಿಕತೆಯನ್ನೇ (ಬ್ಲಾಕ್ ಎಕಾನಮಿ) ಹುಟ್ಟು ಹಾಕಿತ್ತು. ಅದ್ಯಾವ ರೀತಿಯಲ್ಲಿ ಬೆಳೆದು ನಿಂತಿತ್ತೆಂದರೆ ಯಾವ ಮುಲಾಜೂ ಇಲ್ಲದೆ ದಾಳಿ ಮಾಡಿದರೂ ನಿಯಂತ್ರಣ ಅಸಾಧ್ಯವೇ ಎನ್ನುವ ಹಂತವನ್ನು ತಲುಪಿಬಿಟ್ಟಿತ್ತು. ಹಾಗಾಗೇ ದೇಶಿಯವಾಗೂ ಮತ್ತು ಅಂತರಾಷ್ಟ್ರೀಯವಾಗೂ ಭಾರತವನ್ನು ಪ್ರಬಲಗೊಳಿಸುವ ಉದ್ದೇಶದಿಂದ ಮೋದಿ ಮೂರೂವರೆ ತಿಂಗಳಿಂದ ರಹಸ್ಯವಾಗಿ ಕಾರ್ಯಾಚರಣೆಗಿಳಿದಿದ್ದ ಯೋಜನೆಯನ್ನು ಅನಾಮತ್ತಾಗಿ ಜಾರಿಗೆ ತಂದರು. 
ಇದರಿಂದಾಗಿ ಸರಾಸರಿ ತಿಂಗಳಿಗೆ ಭಾರತದಲ್ಲಿದ್ದ ಎಜೆಂಟರಿಗೆ ಸಲ್ಲಿಕೆಯಾದ ನಂತರವೂ ಉಳಿಯುತ್ತಿದ್ದ ಐನೂರು ಕೋಟಿಯಷ್ಟು ಪಾಕಿಸ್ತಾನದ ಮಂತ್ಲಿ ಆಮದನಿಗೆ ಬ್ರೆಕ್ ಬಿದ್ದಿದೆ. ಅಲ್ಲಿಂದ ಬರುತ್ತಿದ್ದ ಖೋಟಾ ನೋಟು ಹಾವಳಿ ಯಾವ ರೀತಿಯಲ್ಲೂ ನಿಲ್ಲಿಸಲಾಗುತ್ತಲೇ ಇಲ್ಲ. ಆವತ್ತು ಸಿಕ್ಕಿಬಿದ್ದ ಹ್ಯಾಡ್ಲಿ ಮತ್ತು ಬಾಂಗ್ಲಾದಿಂದ ಆಮುದಾದ ವಸ್ತುವಿನಲ್ಲಿದ್ದ ಕಪ್ಪು ಹಣ ಮತ್ತು ಪ್ರತಿಬಾರಿ ಭಯೋತ್ಪಾದಕರ ಜೋಬಿನಲ್ಲಿರುತ್ತಿದ್ದ ಕಂತೆಗಟ್ಟಲೇ ಹಣಗಳೂ, ತೀರ ಅಸಲಿಯನ್ನೇ ಹೋಲುವ ಖೋಟಾನೋಟು ಪಾಕಿಸ್ತಾನದ ಉತ್ಪನ್ನವೇ ಆಗಿರುತ್ತಿತ್ತು ಎನ್ನುವುದನ್ನು ಬೇರೆ ಹೇಳಬೇಕಿಲ್ಲ. 
ಪ್ರತಿ ರಾಜ್ಯದಲ್ಲೂ ಬೇರೆಬೇರೆ ರೀತಿಯ ಕಮೀಶನ್ ಮೂಲಕ ಒಳನುಸುಳುತ್ತಿದ್ದ ಕಪ್ಪು ಹಣದ ಖೋಟಾನೋಟು ಉತ್ತರ ಭಾರತದಲ್ಲಿ ಅದರಲ್ಲೂ ಶಿಕ್ಷಣ ವ್ಯವಸ್ಥೆ ಇವತ್ತಿಗೂ ಮೇಲಕ್ಕೆತ್ತಲಾಗದ ಸ್ಥಿತಿಯಲಿದ್ದ ಏರಿಯಾಗಳಲ್ಲಿ ಸುಲಭವಾಗಿ ಸಂಚಲನಕ್ಕೆ ಕಾರಣವಾಗುತ್ತಿತ್ತು. ಅಲ್ಲೆಲ್ಲಾ ದಶಕಗಳಿಂದಲೂ ಖೋಟಾನೋಟು ತೀರ ಸಾಮಾನ್ಯ ಎನ್ನುವ ರೀತಿಯಲ್ಲೂ ಬಳಕೆಯಾಗುತ್ತಲೇ ಇತ್ತು. ಇದರಿಂದಾಗಿ ಹೆಚ್ಚಾಗಿ ಉತ್ತರಪ್ರದೇಶ, ಬಿಹಾರ್, ಒಡಿಸ್ಸ ಮತ್ತು ಪಶ್ಚಿಮ ಬಂಗಾಲದಲ್ಲಿ(ಇದಂತೂ ಕಮ್ಮಿನಿಷ್ಟೆಯವರ ಕೈಯ್ಯಲ್ಲಿ ಅದ್ಯಾವ ಮಟಕ್ಕೆ ಹಡಾಲೆದ್ದು ಹೋಗಿದೆಯೆಂದರೆ ವೈಭವೋಪೇತ ದಿನಗಳನ್ನು ಕಾಣಲು ಮೂರು ದಶಕಗಳೇ ಬೇಕೇನೊ) ತೀವ್ರ ಎನ್ನುವ ಪರಿಣಾಮಕ್ಕೆ ಭಾರತೀಯ ಆರ್ಥಿಕತೆಗೆ ತುತ್ತಾಗುತ್ತಲೇ ಇತ್ತು. ಕೊನೆಕೊನೆಗೆ ಎಷ್ಟೆಂದರೆ ಪ್ರತಿ ನೂರರ ಒಂದು ಕಟ್ಟಿನಲ್ಲಿ ಸಲೀಸಾಗಿ ಹತ್ತು ಖೋಟಾ ನೋಟುಗಳು ನುಸುಳುವಷ್ಟು ಪ್ರಬಲವಾಗಿ ಇಂತಹ ವ್ಯವಹಾರದ ಮೇಲೆ ಪಾಕಿಸ್ತಾನದ ಆರ್ಥಿಕ ಭಯೋತ್ಪಾದನೆ ತನ್ನ ಹಿಡಿತ ಸಾಧಿಸಿತ್ತು. ಅದರಲ್ಲೂ ಪ್ರತಿರಾಜ್ಯಗಳಿಗೂ ಒಂದೊಂದು ಬೆಲೆಯನ್ನು ನಿಗದಿಪಡಿಸಲಾಗಿತ್ತು. 
ಬಿಹಾರದಲ್ಲಿ ಒಂದು ಲಕ್ಷಕ್ಕೆ ಎಪ್ಪತ್ತು ಸಾವಿರ ಮತ್ತು ಉತ್ತರಪ್ರದೇಶದ ಕೆಲಭಾಗದಲ್ಲಿ ಅರವತ್ತು ಸಾವಿರ ಹಾಗು ಓಡಿಸ್ಸಾದಲ್ಲಿ ಎಂಭತ್ತು ಮತ್ತು ದಿಲ್ಲಿ ಆಸುಪಾಸಿನಲ್ಲಿ ತೊಂಭತ್ತಕ್ಕೆ ಒಂದು ಲಕ್ಷ ಖೋಟಾನೋಟು ಬಿಕರಿಯಾಗುತ್ತಿತ್ತು. ಅಂದರೆ ಒಂದು ಲಕ್ಷ ಪಾಕಿಸ್ತಾನದ ಭಾರತೀಯ ಕರೆನ್ಸಿ ಬದಲಿಗೆ, ಮೇಲ್ಕಾಣಿಸಿದ ಮೊತ್ತದ ಅಸಲಿ ನೋಟುಗಳು ಬದಲಾಗುತ್ತಿದ್ದವು. ಇದರಲ್ಲೂ ಎರಡು ರೀತಿಯ ಫಾಯಿದೆ ಇತ್ತು. ಒಂದು ಇಲ್ಲಿನ ಕಪ್ಪು ಹಣದ ಚಲಾವಣೆ  ಸುಲಭ ಸಾಧ್ಯವಾಗುತ್ತಿತ್ತು ಮತ್ತು ಅಸಲಿಗೆ ಖೋಟಾನೋಟನ್ನು ನೀಡುವ ಮೂಲಕ ಅಸಲಿನ ಹಣವನ್ನೇ ಕಪ್ಪು ಹಣವನ್ನಾಗಿ ಪರಿವರ್ತಿಸಿ ಸಂಗ್ರಹಿಸುವ ಮೂಲಕ ಅಗಾಧ ವೈಪರಿತ್ಯವನ್ನು ಭಾರತೀಯ ಅರ್ಥ ವ್ಯವಸ್ಥೆಯ ಮೇಲೆ ಹೇರಲಾಗುತ್ತಿತ್ತು. 
ಇದಕ್ಕೆಲ್ಲಾ ಬೆಂಬಲವಾಗಿ ನಿಲ್ಲುತ್ತಿದ್ದುದು ಪಾಕಿಸ್ತಾನದ ಪರಮ ನಿರ್ಲಜ್ಯ ಪಾತಕಿ ದಾವುದ್ ಮತ್ತವನ ಸಹಚರರು. ಅವನ ಎಜೆಂಟರ ಮೂಲಕ ಮತ್ತು ಇತರ ದೇಶಗಳ ಹವಲಾ ನೆಟ್‍ವರ್ಕ ಮೂಲಕ ಭಾರತದೊಳಕ್ಕೆ ಬರುತ್ತಿದ್ದ ಕಪ್ಪು ಹಣ ಮತ್ತು ಖೋಟಾನೋಟುಗಳು ಎಗ್ಗಿಲ್ಲದೆ ಸರಿದಾಡುತ್ತಿದ್ದುದರಿಂದಲೇ ಆರ್ಥ ವ್ಯವಸ್ಥೆಯಲ್ಲಿ ನಮ್ಮ ಸೂಚ್ಯಂಕ ಯಾವತ್ತೂ ಮೇಲಕ್ಕೆ ಹೋಗುತ್ತಲೇ ಇರಲಿಲ್ಲ ಮತ್ತು ಈ ಸಮಸ್ಯೆ ಮೋದಿಯಂತಹ ಪ್ರಧಾನಿಯೊಬ್ಬರು ಕೈಗೆತ್ತಿಕೊಳ್ಳದಿದ್ದರೆ ಎಷ್ಟೇ ದಶಕಗಳು ಕಳೆದರೂ ಬದಲಾಗುತ್ತಿರಲಿಲ್ಲ. 
ಆದಾಗ್ಯೂ ಸಹಜ ಮತ್ತು ಕೆಳಹಂತದ ಜನರಿಗೆ ಇದರ ಬಿಸಿ ತಟ್ಟಿರಲಿಲ್ಲವಾದರೂ, ಇದ್ದಕ್ಕಿಂತ ಆರ್ಥಿಕ ಶಕ್ತಿ ಮತ್ತು ಸಾಮಾಜಿಕ ಬದುಕಿನ ಮೇಲೆ ಪರಿಣಾಮ ಬೀರುತ್ತಿದ್ದ ಬೆಲೆ ಏರಿಕೆಯ ಅಂದಾಜೇ ನಮ್ಮಲ್ಲಿ ಜನ ಸಾಮಾನ್ಯನಿಗೆ ಸಿಕ್ಕುತ್ತಿರಲಿಲ್ಲ. ಎಲ್ಲೆಲ್ಲೂ ಭತ್ತವಿದೆ ಆದರೆ ಅಕ್ಕಿ ಮಾತ್ರ ಅನಾಮತ್ತಾಗಿ ಐವತ್ತರ ಆಸುಪಾಸಿಗಿದೆ. ಲೆಕ್ಕದ ಹೊರಗೆ ಗೋಧಿ ಬೆಳೆಯುತ್ತಿದ್ದೇವೆ ಆದರೆ ರೇಟು ಮಾತ್ರ ಕೆಳಗಿಳಿಯುತ್ತಿಲ್ಲ, ಯಾವಾಗ ಯಾವ ರೀತಿಯಲ್ಲಿ ಲೆಕ್ಕಿಸಿದರೂ ಮಾರುಕಟ್ಟೆ ಯಾಕೆ ಪಲ್ಲಟಗೊಳ್ಳುತ್ತಿದೆ ಎನ್ನುವ ಲಾಜಿಕ್ಕೆ ಬುಡಮೇಲಾಗುತ್ತಿತ್ತು. ಇದಕ್ಕೂ ಹುಯಿಲು ಎಬ್ಬಿಸುವ ಬುದ್ಧಿಜೀವಿಗಳ ಬಗ್ಗೆ ಬರೆಯ ಹೊರಟರೆ ಅವರಿಗೂ ಇದೆಲ್ಲಾ ಗೊತ್ತಿಲ್ಲದ್ದೇನೂ ಅಲ್ಲ. ಆದರೂ ಗಂಜಿ ಕುಡಿದು ಆಶ್ರಯ ಪಡೆದಿದ್ದಾರಾದ್ದರಿಂದ ಅವರು ಇದನ್ನು ವಿರೋಧಿಸಲೇಬೇಕು. ಹಾಗೆ ವಿರೋಧಿಸಿ ಇದ್ದಬದ್ದ ಮಾನ್ಯ ಮರ್ಯಾದೆಯನ್ನೂ ಸಾಂಸ್ಕೃತಿಕ ವಲಯದಾಚೆಗೂ ಹರಾಜು ಹಾಕಿಕೊಂಡುಬಿಟ್ಟಿದ್ದಾರೆ. ಅದಕ್ಕೆ ಸರಿಯಾಗಿ
" ಅಯ್ಯೋ.. ಬಡವರ ಗತಿಯೇನು..? " 
" ಹೀಗೆ ಇದ್ದಕ್ಕಿದ್ದಂತೆ ನೋಟುಗಳನ್ನು ಕಿತ್ತುಕೊಂಡರೆ ಬಡ ಭಾರತೀಯ ಬದುಕುವುದು ಹೇಗೆ..? "
" ಮೊದಲು ಎರಡು ಸಾವಿರ ನೋಟಿನಲ್ಲಿ ಚಿಪ್ ಇರುತ್ತದೆಂದರು ಈಗ ನೋಡಿದರೆ ಇರುವುದಿಲ್ಲವಂತೆ ಅಂದರೆ ಭ್ರಷ್ಟಾಚಾರ ಸಾವಿರದ ಬದಲಿಗೆ ಎರಡು ಸಾವಿರದ ನೋಟಿನಲ್ಲಿ ಚಲಾವಣೆಗೆ ಬರಲಿದೆ. ಇದರಿಂದ ಬಿ.ಜೆ.ಪಿ. ಯವರಿಗೇ ಡಬ್ಬಲ್ ಧಮಾಕ" 
ಎಂಬಿತ್ಯಾದಿ ಬಾಯಿ ತುರಿಕೆ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರು ಒಂದು ಕಡೆಯಾದರೆ, ಮೋದಿ ಮತ್ತು ಕೇಂದ್ರ ಸರಕಾರವನ್ನು ಹಣಿಯಲೆಂದೇ ಸಮಾಜಿಕ ಜಾಲ ತಾಣ ನಿರ್ವಹಿಸಲು ಕೂತಿರುವ ಕೆಲವು ಬರಗೆಟ್ಟ ಹೆಂಗಸರು, " ಇದರಿಂದ ಭಾರತೀಯ ಬಡವರಿಗೆ ಯಾವ ಉಪಯೋಗವೂ ಇಲ್ಲ.. " ಎಂದು ಹುಯಿಲಿಡತೊಡಗಿದ್ದರು. ಕಾರಣವಿಷ್ಟೆ ಇವರಿಗೆಲ್ಲಾ ಸಲ್ಲುತ್ತಿದ್ದುದೇ ಇಂಥಾ ಕಪ್ಪುಹಣದ ರೂಪದಲ್ಲಿದ್ದ ಸಾವಿರ ಮುಖ ಬೆಲೆಯ ನೋಟುಗಳು ಮತ್ತು ಅಂತಹ ಹರಾಮಿ ದುಡ್ಡಿನಿಂದಲೇ ಬದುಕು, ಬರಹ ಕಟ್ಟಿಕೊಂಡು ಸರಸ್ವತಿಗೂ ದ್ರೋಹ ಬಗೆಯುತ್ತಾ, ಸಾಮಾಜಿಕ ಜಾಲತಾಣದಲ್ಲಿ ಕಂಡವರ ಮನೆಗಳ ಮಧ್ಯೆ ಮನಸ್ತಾಪಕ್ಕೂ ಕಾರಣವಾಗುತ್ತಿದ್ದರು.
 ಈಗ ಇಷ್ಟು ಸಲೀಸಾಗಿ ಅದಿನ್ಯಾವನು ಇವರನ್ನೆಲ್ಲಾ ಪುಗಸಟ್ಟೆ ಸಾಕುತ್ತಾನೆ. ಅದರಲ್ಲೂ ಬೆಂಗಳೂರಿನ ಬದುಕಿಗೆ ಗಾಡಿ, ಮಕ್ಕಳ ಫೀಸು, ಬಾಡಿಗೆ ಮನೆ ಮತ್ತು ಇನ್ನಿತರ ಶೃಂಗಾರ ಸಾಧನಗಳ ಖರ್ಚಿಗೆ ಕನಿಷ್ಟ ಮೂವತ್ತು ಸಾವಿರಗಳಾದರೂ ಬೇಕು. ಅಂದಹದ್ದನ್ನೆಲ್ಲಾ ಇವತ್ತು ನೌಕರಿ, ಚಾಕರಿ ಮತ್ತೊಂದು ಮದಲೊಂದು ಏನೂ ಇಲ್ಲದೆ ಮನೆಯಲ್ಲಿ ಇದ್ದೇ, ಬರೀ ಸಾಮಾಜಿಕ ಜಾಲತಾಣದಲ್ಲಿ ಸಮಾಜ ದ್ರೋಹಿ, ದೇಶದ್ರೋಹಿ ಚಿಂತನೆ ಬಿತ್ತುತ್ತಾ ಬದುಕುತ್ತಿರುವವರಿಗೆ ಸುಲಭವಾಗಿ ಸಂಪಾದನೆ ಹೇಗೆ ಸಾಧ್ಯ ಎನ್ನುವ ಅಧ್ಬುತ ಲಾಜಿಕ್ಕನ್ನೆಲ್ಲಾ ನಾನಿಲ್ಲಿ ವಿವರಿಸಬೇಕಿಲ್ಲ. ಏನಿದ್ದರೂ ಪಾಶ್ಚಾತ್ಯ ದೇಶದಗಳ ದುಡ್ಡು ದುಗ್ಗಾಣಿ ಮೇಲೆ ಬದುಕುತ್ತಿದೆ ಇಂಥವರ ಮನೆ ಮನಸ್ಸು ಎರಡೂ. ಹಾಗಾದರೆ ಇಲ್ಲಿರುವ ಬಡಭಾರತೀಯನ ಪರಿಸ್ಥಿತಿ..? ಅದಕ್ಕಾಗೇ ಇಂತಹದ್ದೊಂದು ದಿಟ್ಟ ನಿರ್ಧಾರ ಕೈಗೊಳ್ಳಬೇಕಾಯಿತು ಪ್ರಧಾನಿ. ಆದರೆ ಇಲ್ಲಿ ನೋಡಿ. ಇಂತಹದ್ದೊಂದು ಬೆಳವಣಿಗೆಯ ಮೂಲಕ ಎಲ್ಲಾ ಕಪ್ಪು ಹಣದ ಬಾಗಿಲನ್ನು ಶಟರ್ ಸಮೇತ ಎಳೆದು ಕಟ್ಟಿಹಾಕಿದ್ದರೆ, ವಿಲವಿಲ ಎನ್ನುತ್ತಿರುವ ದ್ರೋಹಿಗಳ ಪಡೆ ಇದನ್ನೂ ಮೊದಲೇ ಹೇಳಿ ಮಾಡಬೇಕಿತ್ತು ಎನ್ನುತ್ತಿದೆ. ಅಲ್ಲಿಗೆ ಇಂಥವರದ್ದೆಲ್ಲಾ ಮರ್ಮ ಏನು ಎನ್ನುವುದು ಗೊತ್ತಾಯಿತಲ್ಲ. 
ಒಂದು ನೆನಪಿರಲಿ, ಪಾಕಿಸ್ತಾನ ನೇರ ಯುದ್ಧಕೆ ಸಿಕ್ಕದೆ ಬರೀದೆ ಕಳ್ಳಾಟ ಆಡುತ್ತಿದ್ದುದರಿಂದ ಅದನ್ನು ಅವರದೇ ಸರಹದ್ದಿಗೆ ನುಗ್ಗಿ ಬಡಿದು ಬಂದದ್ದಾಯಿತು. ಇತ್ತ ಒಳಗೊಳಗೇ ದೇಶದ ಸುರಕ್ಷತೆಗೆ ಆತಂಕ ಮತ್ತು ಭದ್ರತೆಗೆ ಸಮಸ್ಯೆ ಎರಡನ್ನೂ ಒಡ್ಡುತ್ತಿದ್ದ ಸಿಮಿ ಉಗ್ರರನ್ನು ಹೊಡೆದು ಮಲಗಿಸಲಾಯಿತು (ಇನ್ನೇನು ಅವರೆಲ್ಲಾ ಉಗ್ರರೇ ಎಂದು ಗೊತ್ತಾದ ಮೇಲೂ ಅವರನ್ನು ಬಿಸಿನೀರು, ಮುದ್ದೆ, ಚಾಕಣ ಕೊಟ್ಟು ಸಾಕಬೇಕಿತ್ತೇ..?) ಇದೀಗ ಅದೆಲ್ಲದರೆ ತಾಯಿ ಬೇರಿನಂತಿದ್ದ ಕಪ್ಪುಹಣದ ಶಕ್ತಿಯನ್ನು, ಆರ್ಥಿಕ ತುರ್ತುಪರಿಸ್ಥಿತಿಯ ಮೂಲಕ ಸದೆ ಬಡೆಯಲಾಗುತ್ತಿದೆ. ಆದರೆ ಇದರ ಇನ್ನೊಂದು ಮಗ್ಗುಲಿಗೆ ನಿಂತು ನೋಡಿದರೆ ಇದನ್ನು ವಿರೋಧಿಸುತ್ತಾ ವಿತಂಡವಾದ ಮಾಡುತ್ತಿರುವವರು, ಪರೋಕ್ಷವಾಗಿ ಭಯೋತ್ಪಾದನೆಯ ಬೆಂಬಲಿಗರೇ ಆಗುತ್ತಾರಲ್ಲವೇ..? 
ಕಾರಣ ಇವತ್ತು ಇಂಥಾ ಆರ್ಥಿಕ ನೀತಿಯನ್ನು ವಿರೋಧಿಸುವವರು, ಮೆತ್ತಗೆ ಸಿಮಿ ಉಗ್ರರನ್ನು ಎನ್‍ಕೌಂಟರ್ ಮಾಡಬಾರದಿತ್ತು ಎನ್ನುವವರಿಗೂ, ಅತ್ತ ಬುರ್ಹಾನ ವಾನಿಯನ್ನು ಹಿರೋ ಮಾಡುವವರಿಗೂ ಕೊನೆಗೆ ಅಫ್ಜಲ್ ಗುರುವನ್ನು ಹುತಾತ್ಮರನಾಗಿಸುವವರಿಗೂ ಏನಾದರೂ ವ್ಯತ್ಯಾಸ ಇದೆಯಾ ಎಂದರೆ ನೈಯಾ ಪೈಸೆಯಷ್ಟೂ ಫರಕ್ಕು ಕಾಣಿಸುತ್ತಿಲ್ಲ. ಕಾರಣ ನೇರವಾಗಿ ಅತ್ತ ಸೈನಿಕರು ಮತ್ತು ಪ್ರಧಾನಿಯ ಬಳಗ ಇದೆಲ್ಲದರ ವಿರುದ್ಧ ಹೊಡೆದಾಡುತ್ತಾ ಜೀವ ಪಣಕ್ಕಿಡುತ್ತಿದ್ದರೆ, ಒಳಾಗೊಳಗೆ ಅವರನ್ಯಾಕೆ ಬಡಿದ್ರಿ, ದುಡ್ಯಾಕೆ ಕ್ಯಾನ್ಸಲ್ ಮಾಡಿದ್ರಿ ಎನ್ನುವ ಪಿಸಣಾರಿ ಹೆಂಗಸರ/ಎಬುಜೀಗಳ ಮಾತುಗಳು ಬದುಕಿನ ಆಸಕ್ತಿ ಕಳೆದುಕೊಂಡ ರಸಹೀನ ಪ್ರಲಾಪದಂತೆ ಅನ್ನಿಸುತ್ತದೆ ನನಗೆ. ಕಾರಣ ಬದುಕಲು, ಖುಷಿಪಡಲು ಎರಡಕ್ಕೂ ಇಂಥವರ ಬಳಿ ಕಾರಣಗಳಿರುವುದಿಲ್ಲ. ಏನಿದ್ದರೂ ಬರೀ ಬೇರೆಯವರ ಯಶಸ್ಸಿನ ಮೇಲೆ ನಂಜುಕಾರಿ ಬದುಕುವುದೇ ಧ್ಯೇಯವಾಗಿರುವಾಗ ಅಭಿವೃದ್ಧಿಯ ನಡೆ ಇವರ ಕಣ್ಣಿಗೆ ಧನಾತ್ಮಕವಾಗಿ ಕಾಣಿಸುವುದಾದರೂ ಹೇಗೆ...? 
ಪ್ಲೀಸ್...ಪ್ಲೀಸ್... ಬದುಕಲು ಕಲಿಯಿರಿ ಇನ್ನಾದರೂ ನಿಯತ್ತಾಗಿ, ನೈತಿಕವಾಗಿ. 





Monday, November 7, 2016

ಯಾರಿಗೂ ಬೇಡವಾದ ಪಾತಕಿ..ದಾವೂದ್

( ಮೈಗಿಷ್ಟು ಪುಕ್ಕಟ್ಟೆ ಅನ್ನ, ತಂತಮ್ಮ ಮೋಜು ಮಸ್ತಿಯ ಚಟಕ್ಕಿಷ್ಟು ಯಾರದ್ದೋ ತಲೆ ಒಡೆದ ದುಡ್ಡು ಅದಕ್ಕೆ ಸರಿಯಾಗಿ ಮೆರೆಯೋದಕ್ಕೆ, ಪಾಪಿಲೋಕದ ಕಡುಗತ್ತಲೆಯ ಸಾಮ್ರಾಜ್ಯ. ಕೊನೆಗೆ ಇದೆಲ್ಲದರಿಂದ ತಲೆ ತಪ್ಪಿಸಿಕೊಂಡು ಬದುಕಿಕೊಳ್ಳಲು ತೀರ ಪರಮ ನಿರ್ಲಜ್ಯ ಪಾಕಿಸ್ತಾನ. ಇಷ್ಟನ್ನಿಟ್ಟುಕೊಂಡು ಕತ್ತಲ ಲೋಕವನ್ನು ಆಳುತ್ತೇನೆಂದು ಹೊರಟು ಬಿಡುವವರು ತಮ್ಮ ಕೊನೆಯ ಕಾಲಾವಧಿಯುದ್ದಕ್ಕೂ ಇದೆಲ್ಲಾ ಶಾಶ್ವತ ಎಂದೇ ತಿಳಿದಿರುತ್ತಾರೆ. ದುರದೃಷ್ಟ ಮತ್ತು ನೂರಾರು ಹೆಣ್ಣುಮಕ್ಕಳ ಶಾಪ ಅವರನ್ನು ಜೀವಂತ ನರಕಕ್ಕೆ ನೂಕುತ್ತದೆ ಎನ್ನುವುದಕ್ಕೆ ಅಷ್ಟೆ ಉದಾ.ಗಳು ನಮ್ಮ ಮುಂದಿವೆ. ಆದರೂ ಪಾತಕ ಲೋಕದ ಪಾತಕಿಗಳು ಬುದ್ಧಿ ಕಲಿತದ್ದೇ ಇಲ್ಲ. ಅದರಲ್ಲೂ ಪಾಕಿಸ್ತಾನದ ಕೊಚ್ಚೆಯಲ್ಲಿ ಹೊರಳುವ ಕ್ರಿಮಿಗಳಿಗೆ ಬುದ್ಧಿ ಮತ್ತು ವಿವೇಚನಾ ಶಕ್ತಿ ಬಿಟ್ಟು ಬೇರೆಲ್ಲ ಬೆಳೆಯುತ್ತದೆ. ಅದೇ ವಿನಾಶಕ್ಕೂ ಕಾರಣವಾಗುತ್ತದೆ. ಇಂಥ ಕೊಚ್ಚೆಯಂತಿರುವ ಕಥಾನಕದ ಕೊನೆಯ ತುಂಡು, ಅರೆಜೀವವಾಗಿರುವ ಪಾತಕಿ ತನಗೇ ತಾನೇ ಡಾನ್ ಎಂದು ಕರೆದುಕೊಂಡ ದಾವೂದ್ ಇಬ್ರಾಹಿಂ ಯಾವ ನೆಲಕ್ಕೆ ದ್ರೋಹ ಬಗೆದಿದ್ದನೋ ಅಲ್ಲಿವತ್ತು ಕಾಲೂರುವ ಬಗ್ಗೆ ಚಡಪಡಿಸುತ್ತಿದ್ದಾನೆ. ಆದರೆ ಊರಲು ಒಂದು ಕಾಲೇ ಉಳಿದಿಲ್ಲ. ಬದುಕಿನ ವಿಪರ್ಯಾಸ ಅಂದರೆ ಇದೇ ಅಲ್ಲವೇ..?)

ನಂ : 13. ಬ್ಲಾಕ್-4 ಕ್ಲಿಫ್ಟನ್, ಕರಾಚಿ, ಪಾಕಿಸ್ತಾನ. 
ಇದು ಅವನ ಮನೆಯ ಅಡ್ರೆಸ್ಸು. ಹಾಗಂತ ಅವನ ಭೂಗತ್ತ ಜಗತ್ತಿನ ಬೆಂಬಲಿತ ಪಡೆ ಮತ್ತು ಪಾಕಿಸ್ತಾನ ಸರಕಾರ ಜಗತ್ತಿನ ಎಲ್ಲರ ಕಿವಿಗೂ ಹೂವಿಡುತ್ತಾ ಬಂದಿದೆ. ಕೊನೆಗೆ ಕತ್ತೆ ಕಾಲೆತ್ತಿದರೂ ಅದನ್ನು ಬ್ರೇಕಿಂಗ್‍ನ್ಯೂಸ್ ಮಾಡುವ ನಾನ್ಸೆನ್ಸ್ ಚಾನೆಲ್‍ಗಳವರೂ ಅದನ್ನೇ ನಂಬಿ ಬರೆಯುತ್ತಾ ಬಂದಿದ್ದಾರೆ. ಯಾವನಾದರೂ ಅಂತರಾಷ್ಟ್ರೀಯ ಮಟ್ಟದ ಕುಖ್ಯಾತಿ ಮತ್ತದಕ್ಕಿಂತಲೂ ಹೆಚ್ಚು, ಸತ್ತು ಹೋಗುವ ಪ್ರಾಣಭಯ ಇರುವ ಪಾತಕಿ, ಪಕ್ಕದಲ್ಲಿ ಮೈ ಕಾಯುವ ಬಂಟರಿದ್ದರೆ ಮಾತ್ರ ಬದುಕು ಎಂಬ ವ್ಯವಸ್ಥೆ ಸೃಷ್ಟಿಸಿಕೊಂಡಿರುವವರು ತಮ್ಮ ಅಡ್ರೆಸು, ಫೆÇೀನ್ ನಂ, ಕೊರಿಯರ್ ಆಫೀಸಿಗೆ ಕೊಟ್ಟಂತೆ ಕೊಟ್ಟು ಕೂತಿರುವ ಮೂರ್ಖ ಉದಾ. ಯಾವ ಕಾಲದಲ್ಲೂ, ಯಾವ ದೇಶದಲ್ಲೂ ನಡೆದಿಲ್ಲ. ಪಾತಕ ಜಗತ್ತಿಗೇ ನಂ.ಒನ್ ಡಾನ್ ಎಂದು ಕರೆದುಕೊಂಡು ಅಕ್ಷರಶ: ಕೆಲವೊಮ್ಮೆ ಅಂತಹ ಛಾಪನ್ನೂ ಮೂಡಿಸಿರುವ ಪಾತಕಿ, ಕೊನೆಗಾಲದಲ್ಲಿ ತನ್ನನ್ನು ಯಾವ ಮುಸ್ಲಿಂ ದೇಶ ತನ್ನನ್ನು ರಕ್ಷಿಸುತ್ತದೆ ಎಂದು ನಂಬಿದ್ದನೋ, ಅಂತಹ ಪರಮ ನಿರ್ಲಜ್ಯ ಭಯೋತ್ಪಾದಕನಿಗೆ ಹಿಂದೂಸ್ತಾನದ ನೆಲದ ಅಸರೆ ಬೇಕಿದೆ. ನಂಬಿಸಿ ಕೈಬಿಡುವ ಪಾಕಿಸ್ತಾನದ ಹಣೆಬರಹ ಬಯಲಾಗಿದೆ.
ಬದುಕು ಕೊನೆಯ ಕ್ಷಣದಲ್ಲಿದೆ ಎಂದು ಪ್ರಾಣವನ್ನು ಅಂಗೈಯ್ಯಲ್ಲಿ ಹಿಡಿದು ಆತ ನಿಂತುಕೊಂಡಿದ್ದಾನೆ. ಆದರೆ ಯಾವ ಅಸ್ತ್ರಕ್ಕೂ ಬಗ್ಗದ ರೋಗಬಾಧಿತ ಜೀವಭಯ ಅವನನ್ನು ಇನ್ನಿಲ್ಲದಂತೆ ಹಣಿಯುತ್ತಿದೆ. ಇದು ಜಗತ್ತನ್ನೆ ಹೆದರಿಸಿ ಬದುಕುತ್ತೇನೆಂದು ಹೊರಟವನ ದಾರುಣ ಕಥೆ. ಅವನ ಇಂತಹ ಪಾತಕ ಬದುಕಿಗೆ ಹೆದರಿ ಬದುಕಿದವರೂ ತುಂಬ ಪ್ರಾಮಾಣಿಕರೇನಲ್ಲ. ಅಂಥವರನ್ನೇ ಹೆದರಿಸಿ ತನ್ನ ಹೆಸರನ್ನು ಭದ್ರಪಡಿಸಿಕೊಂಡಿದ್ದ ದಾವೂದ್‍ನಿಗಿಂತಲೂ ಮೊದಲೇ ಅವನ ಸಮಕಾಲೀನರು ಜಾಗ ಖಾಲಿ ಮಾಡಿದ್ದು, ಭ್ರಮೆಯಲ್ಲಿ ಬದುಕಿದ್ದ ದಾವೂದ್ ಇಬ್ರಾಹಿಂ ಎಂಬ ಪರಮ ಪಾತಕಿ ಮಾತ್ರ ಎಲ್ಲೂ ನೆಲೆ ಇಲ್ಲದಂತಾಗಿ ಭೂಮಿಗೆ ಭಾರವಾಗಿ ಬದುಕುತ್ತಿದ್ದಾನೆ. 
ಇದು ಅವನ ಕಂಪ್ಲೀಟ್ ಸ್ಟೋರಿ. 
1955. ಡಿಸೆಂಬರ್ 26 ರಲ್ಲಿ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಖೇಡದ ಕೊಂಕಣಿ ಮುಸ್ಲಿಂ ಮನೆತನದಲ್ಲಿ ಹುಟ್ಟಿದ ದಾವೂದ್, ಪೆÇೀಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ರಾಹಿಂ ಕಸ್ಕರ್ ಮಗ. ಅಲ್ಲಿಂದ ಮುಂಬೈನ ಡೊಂಗ್ರಿಯಲ್ಲಿ ತನ್ನ ನೆಲೆ ಕಂಡುಕೊಂಡ ಅದೂ ಹಾಜೀ ಮಸ್ತಾನ ಎಂಬ ಮಾಜಿ ಡಾನ್ ಒಬ್ಬನ ಕೆಳಗೆ ಅಕ್ಷರಶ: ಮಾಲು ಡೆಲಿವರಿಯ ಹುಡುಗನಾಗಿ. ಮೊದಮೊದಲು ರಾಬರಿ ಮತ್ತು ಕೆಲವು ಕೇಸುಗಳಲ್ಲಿ ಖಬರಿಯಾಗಿಯೂ ಕ್ರಿಮಿನಲ್ ಧಂದೆಯ ನೀರಿಗಿಳಿದವ ಆಗೀಗ ಜೈಲುಪಾಲಾಗುತ್ತಿದ್ದ. 
ದಾವೂದ್‍ನ ಕ್ರಿಮಿನಲ್ ಫೈಲು ಬೆಳೆಯತೊಡಗುತ್ತಿದ್ದಾಗಲೇ ಅವನ ನಡುವನ್ನು ಮುರಿದಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು. ಆದರೆ ಅವನ ತಲೆಯ ಮೇಲೆ ಹಾಜಿ ಮಸ್ತಾನನ ಕೈ ಸೇರಿದಂತೆ ಮಹಾರಾಷ್ಟ್ರದ ಕೆಲವು ಪ್ರಬಲ ರಾಜಕಾರಣಿಗಳ ಬೆಂಬಲ ಅವನನ್ನು ಮುಟ್ಟದಂತೆ ಮಾಡಿತ್ತು. 
ಅದರಲ್ಲೂ ಹಾಜಿ ಮಸ್ತಾನನ ಪ್ರಬಲ ವಿರೋಧಿಯಾಗಿದ್ದ ಪಠಾನ್ ಗ್ಯಾಂಗಿನೊಂದಿಗೆ ಯಾವಾಗ ಮುಖಾಮುಖಿ ಕದನಕ್ಕಿಳಿದನೋ ದಾವೂದ್ ಒಂದು ರೇಂಜಿಗೆ ಗುರುತಿಸಿಕೊಂಡುಬಿಟ್ಟ. ಅದಕ್ಕೆ ಕಾರಣ ದಾವೂದನ ಸಹೋದರ ಸಬೀರ್‍ನನ್ನು ಪಠಾಣ ಗ್ಯಾಂಗಿನ ಮಾನ್ಯಸುರ್ವೇ ಎಂಬ ಇನ್ನೊಬ್ಬ ಪಾತಕಿ ಕೊಂದು ಹಾಕಿದ್ದ. (ಇವನ ಕಥೆಯ ಮೇಲೆ ಜಾನ್ ಅಬ್ರಾಹಂ ಚಿತ್ರ ಮಾಡಿದ) ಈ ಒಂದು ಪ್ರಬಲ ಕಾರಣವನ್ನಿಟ್ಟುಕೊಂಡು ಮುಂಬೈ ಕಂಡು ಕೇಳರಿಯದ ರೀತಿಯ ಬೀದಿಕಾಳಗ ಸಂಘಟಿಸಿದ ದಾವೂದ್ ಅನಾಮತ್ತಾಗಿ ಪಠಾಣನ ಟೀಮನ್ನೆ ಕತ್ತರಿಸಿದ. ಕ್ರಮೇಣ ಹಾಜಿ ರಾಜಕೀಯಕ್ಕಿಳಿದರೆ ದಾವೂದ್ ತೀರ ಅಲ್ಪ ಕಾಲಾವಧಿಯಲ್ಲಿ ಅಪಹರಣ, ಹಪ್ತಾ ಇತ್ಯಾದಿ ಕಾರ್ಯಗಳಿಂದ ಹಣಗಳಿಸತೊಡಗಿದನಲ್ಲದೆ ದುಬೈಗೆ ಶಿಪ್ಟಾಗಿಬಿಟ್ಟು, ಅಲ್ಲಿಂದಲೇ ಮುಂಬೈ ಮೇಲೆ ಹಿಡಿತ ಸಾಧಿಸಿದ.
ಸ್ಮಗ್ಲಿಂಗ್ ಪ್ರಮುಖ ದಂಧೆಯಾಯಿತಲ್ಲದೆ ಸುಲಭವಾಗಿ ಅವನ ಕೆಲಸವನ್ನು ಒಂದು ಫೆÇೀನಿನ ಇಶಾರೆಯ ಮೇರೆಗೆ ಮಾಡಿಕೊಡಬಲ್ಲ ಸಮರ್ಥ ಹುಡುಗರ ತಂಡವನ್ನೇ ದಾವೂದ ಮುಂಬೈ ಸುತ್ತಮುತ್ತಲಲ್ಲಿ ಕಟ್ಟಿ ಬೆಳೆಸಿದ್ದ. ಬರೀ ಮಹಾರಾಷ್ಟ್ರವಲ್ಲದೆ ಇತರ ರಾಜ್ಯಗಳ ಭೂಗತದ ಲೋಕದ ಮೇಲೂ ಕೈಯಿಟ್ಟು, ಯಾವ ಭಾಗದಲ್ಲಿ ಬೇಕಾದರೂ ಸಂಘಟಿತ ಅಪರಾಧ (ಆರ್ಗನೈಸ್ಡ್ ಕ್ರೈಂ) ಎಸಗುವ ವರ್ತುಳ ನಿರ್ಮಿಸಿಕೊಂಡಿದ್ದ. ಅದಕ್ಕಾಗಿ ಡ್ರಗ್ಸ್ ಪೆಡ್ಲಿಂಗ್ ಮತ್ತು ನಿಷೇಧಿತ ಹತ್ಯಾರುಗಳ ಸ್ಮಗ್ಲಿಂಗ್ ಅವನ ಪ್ರಮುಖ ದಂಧೆಯಾಗಿತ್ತು. ಮಿಲಿಟರಿ, ಪೆÇೀಲಿಸ್ ಇಲಾಖೆಯಲ್ಲಿಲ್ಲದ, ವಿದೇಶಿ ರಿವಾಲ್ವರುಗಳು ಅವನ ಹುಡುಗರ ಬಳಿ ಲಭ್ಯವಾಗುತ್ತಿದ್ದವು. ಕ್ರಿಕೆಟ್ ಬೆಟ್ಟಿಂಗ್ ಮತ್ತು ಹವಾಲ ದಂಧೆಯ ಮೇಲೆ ಕ್ರಮೇಣ ಹಿಡಿತ ಮತ್ತದಕ್ಕೊಂದು ಅನಧೀಕೃತ ಕಾಪೆರ್Çೀರೇಟ್ ಬಿಸಿನೆಸ್ಸಿನ ಟಚ್ ಕೊಟ್ಟ ಖ್ಯಾತಿ ದಾವೂದ್‍ನದ್ದು. ಅಲ್ಲಿಗೆ ಹಿಂದಿ ಚಿತ್ರ ರಂಗದ ನಟನಟಿಯರನ್ನು ಮ್ಯಾನೇಜ್ ಮಾಡತೊಡಗಿದ ದಾವೂದ್ ನಂಬರ್ ಒನ್ ನಟನಟಿಯರ ಆಯ್ಕೆಯವರೆಗೂ ತನ್ನ ಹಿಡಿತ ಸಾಧಿಸಿದ.(ದಾವೂದನೊಂದಿಗೆ ಸಂಬಂಧ ಬೆಳೆಸಿದ್ದಕ್ಕಾಗಿ ಕ್ರಿಕೆಟ್ಟಿಗ ಜಾವೆದ್ ಮಿಯಾಂದಾದ್‍ಗೆ ಅಜೀವ ಪರ್ಯಂತ ಭಾರತಕ್ಕೆ ಕಾಲಿಡದಂತೆ ನಿಷೇಧ ಹೇರಿಸಿಕೊಂಡ.)
ಎಲ್ಲದಕ್ಕೂ ಇದ್ದ ಒಂದೇ ಒಂದು ಕಾರಣ ಪ್ರಾಣ ಭಯ. ಜೀವಕ್ಕೆ ಹೆದರಿದ ಪ್ರತಿಯೊಬ್ಬನೂ ಅವನ ಕೈಯ್ಯಲ್ಲಿ ಶೋಷಿಸಲ್ಪಟ್ಟರು, ತಿರುಗಿಬಿದ್ದವರಲ್ಲಿ ಹೆಚ್ಚಿನವರೆಲ್ಲಾ ಅವನ ಬಾಡಿಗೆ ಬಂಟರ ಕೈಯ್ಯಲ್ಲಿ ಕೊಲೆಯಾಗಿ ಹೋದರು. ಇದೆಲ್ಲದಕ್ಕೂ ಕೊನೆಯಲ್ಲಿ ಆತ ನೀಡಿದ ಹೆಸರು " ಡಿ-ಕಂಪೆನಿ ".
ಅಂದ ಹಾಗೆ ಮೊದಲಬಾರಿಗೆ ಅವನ ನಡುವನ್ನು ಮುರಿದ ಖ್ಯಾತಿ ಸಲ್ಲುತ್ತದೆ ದಯಾನಾಯಕ್‍ಗೆ. ಸಾಲುಸಾಲಾಗಿ ಅವನ ಬಾಡಿಗೆ ಬಂಟರ ಹೆಣ ಕೆಡುವುತ್ತಿದ್ದರೆ ಅತ್ತ ದಾವೂದ್ ಸಾಮ್ರಾಜ್ಯ ಮೊದಲ ಬಾರಿಗೆ ಅಲುಗಾಡಿತ್ತು. ವಿಪರ್ಯಾಸವೆಂದರೆ ಅದಕ್ಕಾಗೇ ದಯಾನಾಯಕ್ ವರ್ಷಾನುಗಟ್ಟಲೇ ಇಲಾಖೆಯಿಂದಲೇ ಎನ್‍ಕ್ವಯಿರಿ ಎದುರಿಸಬೇಕಾಗಿ ಬಂತು. ಬೇರೆಯವರಾಗಿದ್ದರೆ ಆತ್ಮಹತ್ಯೆ ಮಾಡಿಕೊಂಡುಬಿಡುತ್ತಿದ್ದರು. ಅವನು ದಯಾ ಆಗಿದ್ದಕ್ಕೆ ಬದುಕಿಕೊಂಡ. ದಾವೂದ್ ಇಷ್ಟೆ ಮಾಡಿಕೊಂಡಿದ್ದರೆ ಬದುಕಿಕೊಂಡೂ ಈಗಲೂ ಚೆನ್ನಾಗಿರುತ್ತಿದ್ದನೇನೊ.? ಆದರೆ ಯಾವಾಗ ಇದರಿಂದ ಸಂಪಾದಿಸಿದ ಹಣವನ್ನು ಅಲ್-ಖೈದಾ ಮೂಲಕ ಭಯೋತ್ಪಾದನೆಗೆ ನೀಡತೊಡಗಿದನೋ ಜಾಗತಿಕವಾಗಿ ಮೊಸ್ಟ್‍ವಾಂಟೆಡ್ ಲಿಸ್ಟ್‍ನಲ್ಲಿ ಸೇರಿಹೋದ. ಅದರಲ್ಲೂ 1993 ರ ಮುಂಬೈ ಸ್ಪೋಟಕದಲ್ಲಿ ಅವನ ಹಸ್ತಕಾಣಿಸಿತ್ತು. 2003 ರಲ್ಲಿ ಅಮೇರಿಕೆ ಅವನನ್ನು "ಗ್ಲೋಬಲ್ ಟೆರರಿಸ್ಟ್" ಎಂದು ಘೋಷಿಸಿತು. 
ಅಲ್ಲಿಯವರೆಗೂ ಬ್ಯಾಂಕಾಕ್, ದುಬೈ ಮತ್ತು ಆಗೀಗ ಇಂಡೊನೇಶಿಯಾದಲ್ಲೂ ಇರುತ್ತಿದ್ದ ದಾವೂದ್‍ನ ನೆರಳು ಯಾವಾಗ ಅಮೇರಿಕೆಯ 9/11 ರ ದಾಳಿಯಲ್ಲಿ ಕಾಣಿಸಿತೋ, ಶಾಶ್ವತವಾಗಿ ಪಾಪಿಗಳ ಲೋಕವಾದ ಪಾಕಿಸ್ತಾನ ಸೇರಿಕೊಂಡ. ಇಲ್ಲಿಯವರೆಗೂ ಪಾಪಿಸ್ತಾನ ಅವನನ್ನು ಜಗತ್ತಿನ ದಾಳಿಯ ಕಣ್ಗಳಿಂದ ರಕ್ಷಿಸುತ್ತಲೇ ಇದೆ. ಮೋದಿ ಮತ್ತು ಓಬಾಮ್ ಜಂಟಿಯಾಗಿ ಇವನ ಬೇಟೆಗೆ ಫೀಲ್ಡಿಗಿಳಿಯುತ್ತಿದ್ದಂತೆ 2014 ರ ಮಧ್ಯಭಾಗದಿಂದ ಅವನನ್ನು ಕರಾಚಿಯ ಬಂಗಲೆಯಿಂದ ನೇರ ಅಪಘಾನಿಸ್ತಾನ ಬಾರ್ಡರ್‍ಗೆ ಎತ್ತಂಗಡಿ ಮಾಡಲಾಯಿತು. ಅಲ್ಲಿ ಐ.ಎಸ್.ಐ. ಮತ್ತು ಪಾಕ್ ಮಿಲಿಟರಿಗಳ ಬಲವಾದ ನೆಲೆಯಿದ್ದು, ಯಾವ ಕಾರಣಕ್ಕೂ ದಾವೂದ್‍ನ ಮೇಲೆ ದಾಳಿ ಸಾಧ್ಯವಿಲ್ಲ ಎಂದು ನಂಬಲಾಗಿದೆ. ಇದಕ್ಕೆ ಪೂರಕವಾಗಿ ಅರಬ್ ಸರಕಾರ ಅವನ ಹದಿನೈದು ಸಾವಿರ ಕೋಟು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಮಾಡಿಕೊಂಡು ಬೀದಿಪಾಲಾಗಿಸಿದ್ದು ಅವನ ಅರ್ಧ ಶಕ್ತಿ ಅಲ್ಲೇ ಕುಸಿದು ಹೋಗಿದೆ. ಮೊದಲಿದ್ದ ನಂಬಿಗಸ್ಥ ತಂಡದ ಇಬ್ಬರು ಸದಸ್ಯರೂ ಈಗ ಅವನ ಬಳಿ ಇಲ್ಲ. 
ದಾವೂದ್‍ನಿಗೆ ಸುರಕ್ಷತೆಯ ವಿಷಯವಾಗಿ ಅಂಜಿಕೆ ಇಲ್ಲವೇ ಇಲ್ಲ. ಆದರೆ ಪಾಕಿಸ್ತಾನ ಉಪಾಯ ಪೂರ್ವಕವಾಗಿ ಅವನನ್ನು ಸಂಪೂರ್ಣವಾಗಿ ಮಾಫಿಯಾ ಮತ್ತು ಇನ್ನಿತರ ದಂಧೆಗಳಿಂದ ಹೊರಗಿಡುವುದರ ಮೂಲಕ ಕೊನೆಯ ಕಾಲದಲ್ಲಿ ಅನೀಸ್ ಇಬ್ರಾಹಿಂನ ಕೈಗೆ ಸರ್ವಾಧಿಕರ ಹಸ್ತಾಂತರಿಸುವ ತಂತ್ರ ಹೂಡಿದೆ. ಇದರಿಂದ ಅತನ ಕೈಯ್ಯಲ್ಲಿರುವ ನಿಯಂತ್ರಣ ತಪ್ಪಿಸುವುದರೊಂದಿಗೆ ಇವತ್ತಲ್ಲ ನಾಳೆ, ದಾವೂದ್ ಹೊರಜಗತ್ತಿನಲ್ಲಿ ಸಿಕ್ಕಿಬಿದ್ದರೂ ಅವನೊಬ್ಬ ರಿಯಲ್ ಎಸ್ಟೇಟ್ ದಂಧೆಗಾರ ಎಂದು ಬಿಂಬಿಸುವುದಕ್ಕೀಗ ಪಾಕಿಸ್ತಾನ ತಯಾರಾಗಿದೆ. ಹಾಗಾಗಿ ಅವನಿಗೆ ಮನೆಯಿಂದ ಹೊರಬರುವ ಅನುಮತಿಯನ್ನೂ ನಿರಾಕರಿಸಲಾಗಿದ್ದು, ಹೆಚ್ಚಿನಂಶ ಬದುಕಿನ ಭವ್ಯದಿನಗಳ ಕಾಲಾವಧಿ ಮುಗಿದು ಹೋಗಿದೆ. 
ಇದೆಲ್ಲದರೊಂದಿಗೆ ದಾವೂದ್ ಜೀವಂತವಾಗಿ ಭಾರತದ ಕೈಗೆ ಸಿಕ್ಕಿದ್ದೇ ಆದರೆ, ಭಾರತದ ಜೈಲುಗಳಲ್ಲಿ ಬೆಚ್ಚಗಿರುವ ಮಾಜಿ ಡಾನ್‍ಗಳಂತೆ ಇರಿಸುವ ಭರವಸೆಗೆ, ಪ್ರತ್ಯುಪಕಾರವಾಗಿ ಪಾಕಿಸ್ತಾನದ ಸಂಪೂರ್ಣ ಜಾತಕ ಬಿಚ್ಚಿಡುತ್ತಾನೆ. ಹಾಗಾದಲ್ಲಿ ಭಾರತಕ್ಕೆ ಅದಕ್ಕಿಂತ ದೊಡ್ಡ ಆಯುಧ ಬೇಕಾಗಲಿಕ್ಕಿಲ್ಲ. ಇದೇ ಅಮೇರಿಕೆಗೂ ಬೇಕಿದ್ದು ಅದಕ್ಕಾಗಿ ಅದು ಭಾರತವನ್ನು ಆಶ್ರಯಿಸದೆ ಬೇರೆ ದಾರಿ ಇಲ್ಲವಾಗಿದೆ. ತೀರ ತಲೆ ಮರೆಸಿಕೊಂಡು ಬದುಕುತ್ತಿರುವ ದಾವೂದ್ ಈಗ ಮೂಲ ಹೆಸರಿನಲ್ಲೂ ಇಲ್ಲದೆ ಇಸ್ಮಾಯಿಲ್ ಶೇಖ್ ಎನ್ನುವ ಮಾರುವೇಷದಲ್ಲಿದ್ದಾನೆ. ಸರ್ವ ರೀತಿಯ ದಾಖಲೆಗಳೂ ಈಗ ಅದೇ  ಹೆಸರಿನಲ್ಲಿ ನಮೂದಿಸಲಾಗುತ್ತಿದೆ.
ಆದರೆ ಲಿಯಾಖತ್ ಆಸ್ಪತ್ರೆ ಸೇರಿಸಿರುವ ಅವನಿಗೆ ಅಲ್ಲೀಗ ಗ್ಯಾಂಗ್ರಿನ್‍ಗೆ ಒಳಗಾಗಿ ಕತ್ತರಿಸಿರುವ ಕಾಲನ್ನು ಕಳೆದುಕೊಂಡು ಕೂತಿದ್ದಾನೆ ಎನ್ನಲಾಗುತ್ತಿದೆ. ಆದರೆ ಅದೇನೂ ಪರಿಹರಿಸಲಾಗದ ಸಮಸ್ಯೆಯೇನೂ ಅಲ್ಲ ಎಂದರೂ ಕಳೆದುಕೊಂಡ ಕಾಲಿನ ಜತೆಗೆ ಅಪೂಟ ಹೈ ಶುಗರ್ ಮತ್ತು ಕಳೆದುಹೋಗಿರುವ ದೇಹಶಕ್ತಿ ಮೊದಲಿನ ಹುಮ್ಮಸಿಲ್ಲದಿರುವುದು ಅವನ ಹಾರಾಟದ ಬದುಕನ್ನು ಹಣ್ಣಾಗಿಸಿವೆ. ಅದಕ್ಕಾಗೇ ಕೊನೆಯಲ್ಲಿ ಎಲ್ಲಿ ತನ್ನನ್ನು ತೀರ ಬೀದಿಪಾಲಾದಂತೆ ಯಾವ ಬೆಂಬಲವಿಲ್ಲದೆ ಬದುಕಬೇಕಾಗುತ್ತದೋ ಎಂದು ಭಾರತಕ್ಕೆ ಶರಣಾಗಿ, ಟ್ರೀಟ್‍ಮೆಂಟು ಮತ್ತು ನೆಮ್ಮದಿಯ ಕೊನೆಯ ದಿನಗಳಿಗಾಗಿ ಪ್ರಯತ್ನಿಸುತ್ತಿದ್ದಾನೆ. ಆದರೆ ಪಾಕಿಸ್ತಾನವನ್ನು ಯಾಮಾರಿಸಿ ತಲುಪುವ ಸಾಧ್ಯತೆ ತೀರ ಕಡಿಮೆ ಇದೆ. ಅವನನ್ನು ತೀವ್ರ ನಿಗಾವಹಿಸಿ ನೋಡಿಕೊಳ್ಳಲಾಗುತ್ತಿದ್ದ ದಾವೂದ್ ನಂತರ ಅವನ ಜಾಗಕ್ಕೆ ಅಗ್ರೇಸಿವ್ ಡಾನ್ ಎಂದೇ ಗುರುತಿಸಿಕೊಂಡಿರುವ "ಚೋಟಾಶಕೀಲ್" ಬರುವ ಸಾಧ್ಯತೆ ದಟ್ಟವಾಗಿದೆ.
ಮೊರೆಕ್ಕೊ, ಸ್ಪೇನ್, ಯುನೈಟೆಡ್ ಅರಬ್ ಎಮಿರೇಟಸ್, ಸಿಂಗಾಪುರ್, ಥೈಲಂಡ್, ಟರ್ಕಿ, ಭಾರತ, ಪಾಕಿಸ್ತಾನ ಮತ್ತು ಇಂಗ್ಲೆಂಡು ಸೇರಿದರೆ, ದಾವೂದ್‍ನ  ಸುಮಾರು ಮೂವತ್ತು ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಬೇನಾಮಿ ಹೆಸರಿನಲ್ಲಿ ಅವನು ಸಲಹುತ್ತಿದ್ದು ಸುಮಾರು ಮೂವತ್ತಕ್ಕೂ ಹೆಚ್ಚು ಬೇನಾಮಿ ಅಕೌಂಟುಗಳು ಮತ್ತು ಅಷ್ಟೆ ಸಂಖ್ಯೆಯ ಬ್ಯಾಂಕುಗಳಲ್ಲಿ ಅವನ ಹೂಡಿಕೆ ಪತ್ತೆಯಾಗಿದೆ. 
ಜಾಗತಿಕವಾಗಿ ಅವನ ಹಣಕಾಸಿನ ಮೂಲಗಳನ್ನು ಕತ್ತರಿಸಿರುವ ಮೋದಿ ಮತ್ತವರ ತಂಡ ಈಗ ಕೊನೆಯದಾಗಿ ಅವನನ್ನೇ ಬೇಟೆಯಾಡಲು ಐವತ್ತು ಜನರ ತಂಡವನ್ನೇ ಸಜ್ಜುಗೊಳಿಸಿದ್ದಾರೆ. ಅವನ ಜತೆಗೆ ಇಕ್ಬಾಲ ಮತ್ತು ರಿಯಾಜ್ ಭಟ್ಕಳ್ ಎನ್ನುವ ಕ್ರಿಮಿಗಳೂ ಕೂಡಾ ಅಲ್ಲೇ ಇದ್ದಾರೆ ಎನ್ನುತ್ತದೆ ಗುಪ್ತ ವರದಿ. ಇವರೆಲ್ಲರನ್ನೂ ಒಮ್ಮೆಗೆ ಹೆಡೆಮುರಿ ಕಟ್ಟಿಯಾರು ಎನ್ನುವ ಭಯ ದಟ್ಟವಾಗಿ ಹರಡಿದೆ.
ಅವನನ್ನು ರಕ್ಷಿಸುವ ತಂತ್ರದ ಅಂಗವಾಗಿ 8ನೇ ಮಹಡಿ, ಮೆಹ್ರಾನ್ ಸ್ಕೇಯರ್. ಪ್ಯಾರಾಡೈಸ್ ಹೌಸ್-3 ಮತ್ತು 6/ಏ ಕೌಬಾಯ್ ತಂಗ್ಝೀಮ್. ಫೇಸ್ -5 ಎಂಬೆಲ್ಲಾ ಖಚಿತ ಎನ್ನಿಸುವ ವಿಳಾಸಗಳನ್ನು ತೇಲಿ ಬೀಡಲಾಗಿದೆ. ಆದರೆ ಅವನು ಮಾತ್ರ ಅಪಘನ್ ಬಾರ್ಡರಿನಲ್ಲಿ ತೀರ ಐ.ಎಸ್.ಐ ಮತ್ತು ಮಿಲಿಟರಿ ಕಣ್ಗಾವಲಿನಲ್ಲಿ ಇದ್ದಾನೆ. ಅವನನ್ನು ಆರೈಕೆ ಮಾಡುತ್ತಿರುವ ವೈದ್ಯರೂ ಕೂಡಾ ಡಿಫೆನ್ಸ್ ಪಾಕಿಸ್ತಾನಕ್ಕೆ ಸೇರಿದವರಾಗಿದ್ದು ಬೇರೆ ಯಾವುದೇ ವೈದ್ಯಕೀಯ ಸೌಲಭ್ಯ ಖಾಸಗಿಯಾಗೂ ಪಡೆಯುವಂತಿಲ್ಲ. ಜಗತ್ತಿನ ಶ್ರೇಷ್ಠ ವೈದ್ಯರು ಕಾಲನ್ನು ಮರು ಸ್ಥಾಪಿಸುವ ಭರವಸೆ ನೀಡಿದ್ದರೂ ಅವನನ್ನು ದೈಹಿಕವಾಗೇ ಕುಂದಿಸಿಬಿಡುವ ಹುನ್ನಾರದಲ್ಲಿ ಪೂರ್ತಿ ಕಾಲನ್ನು ತೆಗೆದು ಹಾಕಲಾಗಿದೆ ಎನ್ನುತ್ತದೆ ಗುಪ್ತಚರ ವರದಿ. ಒಟ್ಟಾರೆ ಸತತವಾಗಿ ಅಂತರಾಷ್ಟ್ರೀಯ ಮಟ್ಟದ ಇಬ್ಬರೂ ಡಾನ್‍ಗಳು ಈಗಾಗಲೇ ಭಾರತದ ಜೈಲು ಸೇರಿರುವ ಕಾರಣ ಸ್ವತ: ಭಾರತಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾನೆ ಡಾವೂದ್. 
ಆದರೆ ಹಾಗೊಂದು ಅವಕಾಶ ಮಾಡಿಕೊಟ್ಟಿದ್ದೇ ಆದಲ್ಲಿ ಇನ್ನೊಬ್ಬ ಹುತಾತ್ಮನನ್ನು ನಾವೇ ಸೃಷ್ಟಿದಂತಾಗುತ್ತದಾ..? ಎನ್ನುವ ವರದಿ ಅಕ್ಷರಶ: ಚರ್ಚೆಯಲ್ಲಿದೆ. ಕಾರಣ ಅವನ ಹೆಸರಲ್ಲೇ ಪ್ರಾಣ ಬಿಡುವ, ನಂಬುಗೆಗೆ ಒಳಗಾಗಲು ಸಿದ್ಧವಿರುವ ಅತಿ ದೊಡ್ಡ ಪಡೆ ಈಗಲೂ ಕರಾವಳಿ ಸರಹದ್ದಿನಲ್ಲಿದ್ದೇ ಇದೆ. ಅದಕ್ಕಿಂತಲೂ ಘೋರ ಎಂದರೆ ಈ ದೇಶದಲ್ಲಿ, ಯಾವ ರೀತಿಯ ದೇಶದ್ರೋಹಕ್ಕೂ ಸಿದ್ಧವಾಗಿ ಬಿಡುವವರ ಮಧ್ಯೆ ಅವನನ್ನು ಮರುಸ್ಥಾಪಿಸುವ ಕೆಲಸಕ್ಕೆ ಮುಂದಾಗದಿದ್ದರೇನೆ ಒಳ್ಳೆಯದು. ಕಾರಣ ಮಾನವ ಹಕ್ಕು, ಅವನೂ ಮನುಶ್ಯ, ಬದುಕಲು ಒಂದು ಹಕ್ಕು ಎಂಬೆಲ್ಲ ವಿತಂಡವಾದಗಳನ್ನು ಹಿಡಿದುಕೊಂಡು ಲಗ್ಗೆ ಇಡುವ ಬುಜೀಗಳಿಗೆ ಯಾವ ಜನ, ಧರ್ಮ ಅಥವಾ ಸಿದ್ಧಂತವನ್ನು ಬೆಂಬಲಿಸಬೇಕು, ಬೆಂಬಲಿಸಬಾರದೆನ್ನುವ ಕನಿಷ್ಠ ಕಾಳಜಿಯೂ ಇಲ್ಲ. ದೇಶದ್ರೋಹಕ್ಕೆ ಬೆಂಬಲಿಸುವ ಎಲ್ಲಾ ಕರ್ಮಗಳು ಅವರ ಗುತ್ತಿಗೆಯಲ್ಲವೇ..? ಅವರಿಗೆ ದಾವೂದ್ ಆದರೇನು..? ಯಾವುದೇ ಧರ್ಮದ ಲಂಪಟ ಧರ್ಮಾಧಿಕಾರಿಯಾದರೇನು..? ಇದೆಲ್ಲವನ್ನೂ ತೂಗಿಸಿಕೊಂಡು ದೇಶ ಕಟ್ಟುವ ಸ್ವಯಂ ಸೇವಕರು ಇವತ್ತು ಇಂತಹದ್ದೇ ನೀಚರ ಕೈಯ್ಯಲ್ಲಿ ಸಾಲುಸಾಲಾಗಿ ಬೀದಿ ಬೀದಿಗಳಲ್ಲಿ ಕೊಲೆಯಾಗುತ್ತಿದ್ದರೆ, ಅದನ್ನು ಖಂಡಿಸುವ ಮಾತೂ ಇಲ್ಲದೇ ತೌಡು ತಿನ್ನುತ್ತಿದ್ದಾರೆ. ಅಂತಹದರಲ್ಲಿ ಆ ಪರಮ ಲಂಪಟ ದಾವೂದ್‍ನನ್ನು ಒಳಗೆ ಬಿಟ್ಟು ಕೊಳ್ಳಬೇಕೆ..? 

Wednesday, November 2, 2016

ಭವಿಷ್ಯತ್ತಿನಲ್ಲಿ ಯಾವ ಹಬ್ಬ ಕೈಬಿಡಲಿದೆಯೋ...?

( ನಾನು ನನ್ನ ಸಮಾಜ ಮತ್ತು ಧರ್ಮಾಧಾರಿತ ವೃತ್ತದಲ್ಲಿ ನನ್ನ ಹಿರಿಮೆಯನ್ನು ಸ್ಥಾಪಿಸಿಕೊಳ್ಳುವುದು ಹೇಗೆ..? ಇನ್ನೊಂದು ಧರ್ಮವನ್ನು ಮುಗಿಸಿ ಹಾಕುವುದರ ಮೂಲಕ. ಇದು ಸುಲಭದ ದಾರಿ ಮತ್ತು ಸರಿಯಾಗಿ ಇನ್ನೂರು ವರ್ಷಗಳ ಹಿಂದೆ ಟಿಪ್ಪು ಮಾಡಿದ್ದೂ ಅದೇ. ಅನಾಮತ್ತಾಗಿ ಲಕ್ಷಗಟ್ಟಲೇ ಹಿಂದೂಗಳನ್ನು ವರ್ಷವಧಿಯೊಳಗೆ ಮುಗಿಸಿ ಹಾಕಿ, ಕೊಡವರ ಒಂದು ತಲೆಮಾರನ್ನೇ ನಿರ್ನಾಮ ಮಾಡಿ, ಅದನ್ನು ಸಾಧನೆ ಎಂಬಂತೆ ಪತ್ರಗಳ ಮೂಲಕ ಪ್ರಚುರಪಡಿಸಿದ ಕೂಡಾ. ಆದರೆ ಇವತ್ತಿಗೂ ಅವನ ಭಜನೆ ಮಾಡುತ್ತಿರುವ ಭಟ್ಟಂಗಿಗಳಿಗೆ ತಾವೂ ಮುಂದೊಮ್ಮೆ ಇಂತಹದ್ದೇ ಪರಿಸ್ಥಿತಿಗೆ ಈಡಾಗಲಿದ್ದೇವೆ ಎನ್ನುವ ಅರಿವಾದರೂ ಬೇಡವಾ...? )  

ತೀರ ನಮ್ಮದೇ ನೆನಪಿನಲ್ಲುಳಿಯುವ ಕಾರ್ಯವನ್ನು ಕೈಗೊಳ್ಳುವ ಮಹನೀಯರಿಗಾಗಿ ಹತ್ತು ಹಲವು ರೀತಿಯಲ್ಲಿ ಅವರ ಸೇವೆಯನ್ನು ಸ್ಮರಿಸುವುದು ಸಹಜವೇ ಆಗಿರುವಾಗ ಟಿಪ್ಪುನಂತಹ ವ್ಯಕ್ತಿತ್ವವನ್ನು ಯಾವ ಕಾರಣಕ್ಕಾಗಿ ನಾವು ಹುತಾತ್ಮವಾಗಿಸಬೇಕು, ಜಯಂತಿ ಮಾಡಿ ಮೆರೆಸಬೇಕು ಎಂದು ಕೇಳಿ ನೋಡಿ. ಪ್ರಜ್ಞಾವಂತನಾದ ಒಬ್ಬೇ ಒಬ್ಬನೂ ಇದಕ್ಕೆ ಪ್ರತಿ ನುಡಿಯಲಾರ. ಅಕಸ್ಮಾತ್ ಎನಾದರೂ ಹೇಳಲೇಬೇಕು ಎಂದಿದ್ದರೆ ಆ ಚರ್ಚೆ ಬಿಟ್ಟುಬಿಡೊಣ ಎಂದಾನೆಯೇ ಹೊರತಾಗಿ ಟಿಪ್ಪುಗೊಂದು ಹಬ್ಬ ಮಾಡೊಣ ಎಂದು ಹೇಳಲಿಕ್ಕಿಲ್ಲ. ಅಕಸ್ಮಾತ ಹಾಗೆ ಹೇಳಿದ್ದೇ ಆದಲ್ಲಿ ಅವನಿಗೆ ನಮ್ಮ ಇತಿಹಾಸದ ಯುಕ್ತಾಯುಕ್ತ ಜ್ಞಾನವೇ ಇಲ್ಲ ಎನ್ನಬೇಕಾಗುತ್ತದೆ. ಕಾರಣ ಟಿಪ್ಪುವಿನ ಕುಕೃತ್ಯಗಳನ್ನು, ಅವನ ಇತಿಹಾಸವನ್ನು ಬರೀ ಸಂತ್ರಸ್ತ ಹಿಂದೂಗಳು ಬರೆಯಲಿಲ್ಲ. ಹಿಂದೂಗಳ ಹೊರತಾದ ಹೊರ ದೇಶದಲ್ಲದವರೂ ಬರೆದು ದಾಖಲಿಸಿಬಿಟ್ಟಿದ್ದಾರಲ್ಲಾ.., ಅಲ್ಲೆಲ್ಲೂ ಟಿಪ್ಪು ಒಬ್ಬ ಮಹಾರಾಜ ಅಥವಾ ನಿಜವಾದ ಸಮ್ರಾಜ್ಯದ ರಕ್ಷಕನಂತೆ ಕಾಣಿಸದೆ ಕೇವಲ ಮುಸ್ಲಿಂ ಧಾರ್ಮಿಕತೆಯ ಮೇಲೆ ನಂಬುಗೆ ಇರಿಸಿದ್ದ ಅತೃಪ್ತ ವ್ಯಕ್ತಿಯಾಗಿ ಗೋಚರಿಸುತ್ತಾನೆ.
 ಇತಿಹಾಸದ ಪುಟಗಳನ್ನು ನೋಡಿದಾಗ ಟಿಪ್ಪು ಯಾವ ರೀತಿಯಲ್ಲೂ ಹಿಂದೂಸ್ತಾನದ ನೆಲದಲ್ಲಿ ಸ್ಥಳೀಯರು ಮತ್ತು ಹಿಂದೂ ಸಂಸ್ಕೃತಿ ಅಥವಾ ಪ್ರಜೆಗಳಿಗಾಗಿ ದಾಖಲಿಸುವಂತಹ ಕೆಲಸವನ್ನೇ ಮಾಡಲಿಲ್ಲ ಎಂದರೆ ಅನಾಮತ್ತಾಗಿ ಎರಡು ದಶಕದ ಅವನ ಕಾಲಾವಧಿಯಲ್ಲಿ ಈ ನೆಲದ ಅಮಾಯಕ ಪ್ರಜೆಗಳು ಅದಿನ್ನೆಂಥಾ ಕಷ್ಟವನ್ನು ಅನುಭವಿಸಿದ್ದಾರೋ ಯೋಚಿಸಿ. ಕಾರಣ ಒಂದು ಆಳ್ವಿಕೆ ಅಥವಾ ಇಪ್ಪತ್ತು ವರ್ಷದ ಕಾಲಾವಧಿ ಎಂದರೆ ಅಜಮಾಸು ಒಂದು ತಲೆಮಾರು ಬದಲಾಗುವ ಅಮೂಲ್ಯ ಸಮಯವದು.
ಮೂಲತ: ಹೈದರಾಲಿಗೆ ಟಿಪ್ಪು ಹುಟ್ಟಿದ್ದೇ ದುರ್ಗದ ತಿಪ್ಪೇಸ್ವಾಮಿ ಎನ್ನುವ ಸ್ವಾಮಿಗಳ ಆಶಿರ್ವಾದದಿಂದ ಎಂದೇ ಅವನ ಇತಿಹಾಸ ಆರಂಭವಾಗುವಾಗ ಮುಂದೆ ಅಪಭ್ರಂಶವಾಗಿ ತಿಪ್ಪೇಸುಲ್ತಾನ ಎಂಬ ಹೆಸರು ಟಿಪ್ಪುಸುಲ್ತಾನ ಆಗಿದ್ದಿರಬಹುದು ಎನ್ನುವ ವಾದವನ್ನು ಅಂತರ್ಜಾಲದ ಪುಟವೊಂದು ಮುಂದಿಡುತ್ತದೆ. ಅದೆಲ್ಲಾ ಏನೇ ಇರಲಿ ರಾಜ್ಯಾಡಳಿತಕ್ಕೆ ಕೈ ಹಾಕಿದ ದಿನದಿಂದಲೂ ಟಿಪ್ಪು ಪರಮ ಹಿಂದೂ ದ್ವೇಷಿಯಾಗಿದ್ದ, ಕನ್ನಡ ಮತ್ತು ಕರ್ನಾಟಕದ ನೆಲಕ್ಕಾಗಿ ಏನನ್ನೂ ಮಾಡಲಿಲ್ಲ ಎನ್ನುವುದನ್ನು ಗಂಭೀರ ಇತಿಹಾಸಕಾರರು ದಾಖಲಿಸಿದ್ದಾರೆ. ಅದರಿಂದಾಗೇ ಕನ್ನಡದ ಬದಲಾಗಿ ಉರ್ದು ಮತ್ತು ಪಾರ್ಸಿ ಭಾಷೆಯ ಬಳಕೆಗೆ ಆತ ಆಜ್ಞೆ ಹೊರಡಿಸಿದರೆ, ಕನ್ನಡ ಅಸಂಖ್ಯಾತ ಸ್ಥಳಗಳ ಹೆಸರನ್ನು ಬದಲಿಸಿದ ಎನ್ನುತ್ತದೆ ಇತಿಹಾಸ. ಅದರಲ್ಲಿ ಪ್ರಮುಖವಾಗಿ ಕಣ್ಣಾನೂರು-ಕಸನೂರು, ಗುಟ್ಟಿ-ಫೈಜಾಬಾದ್, ಧಾರವಾಡ ಖುಷಿರ್ವಾಡ, ದಿಂಡಿಗಲ್ – ಖಲಿಕಾಬಾದ್, ರತ್ನಾಗಿರಿ-ಮುಸ್ಥಾಫಾಬಾದ್, ಮಂಗಳೂರು-ಜಲಾಲಾಬದ್, ಕಲ್ಲಿಕೋಟೆ ಇಸ್ಲಾಮಾ ಬಾದ್ ಆಗುತ್ತಾ ಕೊನೆಯಲ್ಲಿ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಿಸಿಕೊಳ್ಳುತ್ತಿರುವ ಮೈಸೂರು ನಝ್ಹಾರಾಬಾದ್. (ಈ ಹೆಸರಿನ ಏರಿಯಾ ಈಗಲೂ ಮೈಸೂರಿನಲ್ಲಿದೆ) ಆಗುವ ಮೂಲಕ ಕನ್ನಡದ ಹೆಸರು ಮತ್ತು ಇತಿಹಾಸವನ್ನು ಮೊದಲ ಹಂತದಲ್ಲೇ ಆತ ನಿರ್ಮಾಗೊಳಿಸಿದ್ದ. 
ವಿಚಿತ್ರವೆಂದರೆ ತುಂಬ ಚೆಂದದ ಹುಲಿಯ ಬಣ್ಣ ಮತ್ತು ಅದರ ಪಟ್ಟೆಗಳನ್ನು ಇಷ್ಟಪಡುತ್ತಿದ್ದ ಕಾರಣ ಟಿಪ್ಪು ತನ್ನ ಸೈನಿಕರಿಗೂ ಇತರ ಸಮವಸ್ತ್ರಗಳಿಗೂ ಹುಲಿಯ ಪಟ್ಟಿಗಳ ರೂಪವನ್ನು ಕೊಡಲು ಸೂಚಿಸಿದ್ದ. ಹಾಗಾಗಿ ಅವನ ಹುಲಿಯ ಪ್ರೇಮದಿಂದಾಗಿ ಅವನಿಗೆ ಶೇರ್–ಈ–ಮೈಸೂರು ಹೆಸರು ಮುಂದೆ ಮೈಸೂರು ಹುಲಿಯಾಯಿತೇ ವಿನ: ಬೇರಾವ ಕಾರಣಗಳೂ ಇತಿಹಾಸದಲ್ಲಿ ಕಂಡುಬರುವುದಿಲ್ಲ. ಸ್ವಂತ ಹುಲಿ ಕೊಂದದ್ದಂತೂ ಎಲ್ಲೂ ದಾಖಲಾಗಿಲ್ಲ.
ಮೇಲುಕೋಟೆಯಲ್ಲಿ ಅನಾಮತ್ತು 700 ಜನ ಅಯ್ಯಂಗಾರ್ ಬ್ರಾಹ್ಮಣ ಕುಟುಂಬವನ್ನು ನಿರ್ವಂಶ ಮಾಡಲು ಕಾರಣ ತನ್ನ ಸಾಮ್ರಾಜ್ಯ ಉಳಿಸಿಕೊಳ್ಳಲು. ಕಾರಣ ಮೈಸೂರು ಸಂಸ್ಥಾನಕ್ಕೆ ತೀರ ನಿಷ್ಠರಾಗಿದ್ದ ಇಲ್ಲಿನ ಅಯ್ಯಂಗಾರರು ನರಕ ಚತುರ್ದಶಿಯ ದಿನ ಹಬ್ಬದ ಸಡಗರದಲ್ಲಿದ್ದಾಗ ತನ್ನ ಕಿರಾತಕ ಪಡೆಯೊಂದಿಗೆ ಎರಗಿದ ಟಿಪ್ಪು ಒಂದೇ ರಾತ್ರಿಯಲ್ಲಿ ಅವರ ಮಾರಣಹೋಮ ನಡೆಸಿದರೆ ಕೈಗೆ ಸಿಕ್ಕ ಹೆಂಗಸರ ಮಾನಭಂಗ ಅದ್ಯಾವ ಮಟ್ಟಕ್ಕಾಗಿರಬೇಕು ಎಂದು ಬೇರೆ ವಿವರಿಸಬೇಕಿಲ್ಲ. ಆ ದಿನ ಊರಲಿದ್ದ ಎಲ್ಲಾ ಕಲ್ಯಾಣಿಗಳಲ್ಲೂ ಸಾಲುಸಾಲಾಗಿ ಹೆಂಗಸರ ಹೆಣಗಳು ತೇಲುತ್ತಿದ್ದವು ಎನ್ನುತದೆ ಇತಿಹಾಸ. ಆದರೆ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಮಾತಾಡಬಲ್ಲ ಪ್ರಾಮಾಣಿಕ ಇತಿಹಾಸ ತಜ್ಞರು ಮಾತ್ರ ಟಿಪ್ಪುವಿನ ಇತಿಹಾಸ ಕಾವಲು ಕಾಯುತ್ತಾ ಅಮೇಧ್ಯದ ಟಿಪ್ಸು ಪಡೆಯುತ್ತಾ, ಕಾಲಕಾಲಕ್ಕೆ ಸಮ್ಮೇಳನಗಳ ಅಧ್ಯಕ್ಷತೆ, ಅಕಾಡೆಮಿ ಮೆಂಬರ್‍ಶಿಪ್ಪುಗಳಿಗೆ ಟವಲ್ ಹಾಕಿಟ್ಟು ಕಾಯುತ್ತಿದ್ದಾರೆ.
ವಿಚಿತ್ರವೆಂದರೆ ಶತ್ರುವಾಗಿದ್ದ ಬ್ರಿಟಿಷರನ್ನು ತನ್ನ ವೈರಿ ಎಂದೆಣಿಸುವ ಟಿಪ್ಪು, ಅವರನ್ನು ತಡೆಯಲಾಗದೆ ಜಗತ್ತಿನ ಯುದ್ಧ ಪಿಪಾಸು ನೆಪೆÇೀಲಿಯನ್ ಬೋನಾಪಾರ್ಟೆಯ ಬೆಂಬಲಕ್ಕಾಗಿ ಕಾಗದ ಬರೆಯುತ್ತಾನೆ. (1997 ಏಪ್ರಿಲ್ 21) ಪ್ರೆಂಚ್‍ರೊಡನೆ ಸೇರಿ ಬ್ರೀಟಿಷರನ್ನು ಓಡಿಸಿದರೆ ಸಂಪೂರ್ಣ ದೇಶವನ್ನು ಕೊಳ್ಳೆಹೊಡೆಯಬಹುದೆನ್ನುವ ದೂರಗಾಮಿ ಕುತಂತ್ರವನ್ನು ಎದುರಿಗಿಡುತ್ತಾನೆ. ಇದೆಲ್ಲಕ್ಕಿಂತಲೂ ಮಿಗಿಲು ಅವನನ್ನು ಸ್ವಾತಂತ್ರಯೋಧ ಎಂದು ಕೈಯ್ಯಲ್ಲಿ ಶಾಲು, ಮಾಲೆ ಹಿಡಿದು ಅವನ ಚಿತ್ರದೆದುರಿಗೆ ಗೌರವ ಸಲ್ಲಿಸಲು ಸಾಲು ಸಾಲಾಗಿ ಗುಲಾಮರ ತರಹ ನಿಲ್ಲುತ್ತಿದ್ದಾರಲ್ಲ. ಟಿಪ್ಪುವಿನ ಈ ಹೇಯ ಅವತಾರದ ಹೊತ್ತಿನಲ್ಲಿ ಭಾರತದಲ್ಲಿನ್ನೂ ಸ್ವಾತಂತ್ರ ಹೋರಾಟವೆಂಬ ಪರಿಕಲ್ಪನೆಯೇ ಇರಲಿಲ್ಲ. ಇವರಿಗೆಂಗೆ ಗೊತ್ತಾಯಿತೋ ಆತ `ಓರಾಟಗಾರ' ಎಂದು.
ಗೋಪಾಲ ರಾವ್ – ಖ್ಯಾತ ಅಧ್ಯಯನ ಮತ್ತು ಇತಿಹಾಸದ ನಿಖರ ಮಾಹಿತಿಯನ್ನು ನಮೂದಿಸಿರುವವರ  ಪ್ರಕಾರ 1792 ರಲ್ಲಿ ಟಿಪ್ಪು ಸೋತು ನೆಗೆದು ಬಿದ್ದನಲ್ಲ ಆಗ ಬ್ರೀಟಿಷರು ಅವನ ಸಂಪತ್ತು ಸೇರಿದಂತೆ ಸರ್ವಸ್ವವನ್ನು ಮುಟ್ಟುಗೋಲುಹಾಕಿ ಬಂಧಿಸಿದವರನ್ನು ಲೆಕ್ಕಿಸಿದರೆ ಇದ್ದ 65 ಜನ ಆಡಳಿತ ಮಂಡಳಿಯಲ್ಲಿ ಕೇವಲ 6 ಜನ ಮಾತ್ರ ಇತರೆ ಮತದವರಿದ್ದರೆ ಉಳಿದೆಲ್ಲರೂ ಮುಸ್ಲಿಂರಾಗಿದ್ದರು. (ಆದರೆ ಇದಕ್ಕೂ ಮೊದಲೇ ಹೈದರಾಬಾದಿನ ನಿಜಾಮ ಸಂಪೂರ್ಣವಾಗಿ ಆಡಳಿತದಲ್ಲಿ ಮುಸ್ಲಿಂರೇ ಇರಬೇಕೆಂದು ಫಾರ್ಮಾನು ಹೊರಡಿಸಿದ್ದರೆ,ýಟಿಪ್ಪು ಅದನ್ನು ಅಕ್ಷರಶ: ಜಾರಿಗೆ ತರಲು ಯತ್ನಿಸುತ್ತಿದ್ದ)ಟಿಪ್ಪು ಬರುತ್ತಿದ್ದಂತೆ ಮಾಡಿದ ಮೊದಲ ಕೆಲಸವೆಂದರೆ ಹಿಂದೂಗಳು ಮಾತ್ರವೇ ತಲೆಗಂದಾಯ ಕಟ್ಟಬೇಕು, ಉಳಿದಂತೆ ಮುಸ್ಲಿಂ ಹಾಗು ಮತಾಂತರಗೊಂಡ ಮುಸ್ಲಿಂರಿಗೂ ಇದರಿಂದ ವಿನಾಯಿತಿ ನೀಡಿದ್ದು. ತೀರ ಈಗಿನ ಮತ ರಾಜಕೀಯವನ್ನು ಆಗಿನ ಟಿಪ್ಪು ಅನಾಮತ್ತಾಗಿ ಅನುಸರಿಸಿದ್ದ ಮತ್ತು ತೀವ್ರವಾಗಿ ತನ್ನ ಅರಬ್ಬಿ ಮೂಲದ ಭಾಷೆಯನ್ನೇ ಹೇರಲು ಯತ್ನಿಸಿದ್ದು ಅದು ಸಾಮೂಹಿಕವಾಗಿ ಸಾಧ್ಯವಿಲ್ಲ ಎಂದು ಮನಗಾಣುತ್ತಿದ್ದಂತೆ ಹೆಚ್ಚಿನ ಭಾಗಗಳಲ್ಲಿ ಪದಗಳನ್ನು ತುರುಕುವ ಮೂಲಕ ಅದನ್ನು ಚಾಲನೆಯಲ್ಲಿಟ್ಟಿದ್ದ. ಅದರ ಪಳೆಯುಳಿಕೆಯಾಗಿ ಈಗಲೂ ಸರಕಾರಿ ಭಾಷೆಯಲ್ಲಿ ಪದಬಳಕೆಗಳು ಜಾರಿಯಲ್ಲಿವೆ.
ಟಿಪ್ಪು ತನ್ನ ಕಾಲಾವಧಿಯಲ್ಲಿ ರಾಜ್ಯಾಡಳಿತಕ್ಕಿಂತ ಮತಾಂತರ ಮತ್ತು ಹಿಂದೂ ಬ್ರಾಹ್ಮಣರ, ಮಲೆಯಾಳಿ ನಾಯರ್ ಮತ್ತು ನಂಬೂದಿರಿಗಳ ಹತ್ಯೆಗೆ ಅತಿ ಹೆಚ್ಚಿನ ಮಹತ್ವ ಹಾಗು ಗಮನ ನೀಡಿದ್ದ ಎನ್ನುವುದಕ್ಕೆ ಜಾಗತಿಕ ಉಲ್ಲೇಖಗಳು ಲಭ್ಯವಿದ್ದು ತೀವ್ರ ವಿಷಾದನೀಯವೆಂದರೆ ಅಂತಹ ಯಾವುದೇ ಇತಿಹಾಸವನ್ನು ಭಾರತೀಯರು ಉಲ್ಲೇಖಿಸುವಲ್ಲಿ ಹಿಂದೆ ಬಿದ್ದರು ಎನ್ನುವುದು. ಹೆಚ್ಚಾಗಿ ಇವತ್ತಿನ ಇಂತಹ ಟಿಪ್ಪುವಿನ ಮತಾಂಧಕಾರಿ ವರ್ತನೆಯನ್ನು ವಿವರಿಸಿದ್ದು ಮತ್ತು ಅತ್ಯಂತ ನಿಖರವಾಗಿ ದಾಖಲಿಸಿದ್ದು ವಿದೇಶಿ ಬರಹಗಾರರೇ, ತೀರ ಪಾಕಿಸ್ತಾನದಂತಹ ರಾಷ್ಟ್ರದಲ್ಲೂ ಇಂತಹ ಅನಾಹುತಕಾರಿ ಕಾರ್ಯಗಳ ಉಲ್ಲೇಖವಿದ್ದು ಟಿಪ್ಪು ತನ್ನ ಕಾಲಾವಧಿಯಲ್ಲಿ ಸರಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರನ್ನು ಮತಾತರಿಸಿದ್ದ ಎನ್ನುತ್ತವೆ ದಾಖಲೆಗಳು. 
ಅದರಲ್ಲೂ ಕೇರಳ ಮತ್ತು ಕರ್ನಾಟಕ ಅವನ ದಾಳಿಗೆ ನಲುಗಿದ ಪ್ರಮುಖ ರಾಜ್ಯಗಳು. ಇಲ್ಲೆಲ್ಲ ನಡೆಸಿದ ಮಾರಣ ಹೋಮದ ಬಗ್ಗೆ ಲಿಖಿತ್ ದಾಖಲೆ ಸಲ್ಲಿಸುತ್ತಿದ್ದ ಟಿಪ್ಪು ಅದನ್ನೊಂದು ಮಹತ್ಕಾರ್ಯ ಎಂದೇ ಭಾವಿಸಿದ್ದ. ಮಂಗಳೂರಿನಲ್ಲಿ ಅತ್ಯಂತ ಹೀನಾಯವಾಗಿ ಕ್ರಿಶ್ಚಿಯನ್ನರನ್ನು ನಡೆಸಿಕೊಂಡ ಟಿಪ್ಪು 60000 ಕ್ರಿಶ್ಚಿಯನ್ನರನ್ನು ಕಾಲಿಗೆ ಕೊಳ, ಕೈಗೆ ಬಳೆ ತೊಡಿಸಿ ಅವರನ್ನು ಮೈಸೂರಿನವರೆಗೂ ನಡೆಸಿಕೊಂಡು ಬಂದ. ಅವನ ದಾರಿಯ ಮೇಲಿನ ದೌರ್ಜನ್ಯಕ್ಕೆ ಶೇ.10 ರಷ್ಟು ಕ್ರಿಶ್ಚಿಯನ್ನರು ರಸ್ತೆಯ ಮೇಲೆ ಹುಳುಗಳಂತೆ ಬಿದ್ದು ಸತ್ತು ಹೋದರು. ಅಲ್ಲಲ್ಲೆ ಹೆಣಗಳನ್ನು ಸರಿಸಿ ನಡೆದು ಬಂದ ಟಿಪ್ಪು ಮಾಡಿದ ಮೊದಲ ಕೆಲಸ ಅವರನ್ನೆಲ್ಲಾ ಸುನ್ನತಿ ಮಾಡಿ ಮತಾಂತರಿಸಿದ್ದು ಮತ್ತು ಸೆರೆಗೆ ತಳ್ಳಿದ್ದು. ಈ ಅನಾಹುತಕ್ಕೆ ಸಾಕ್ಷಿ ಈಗಿನ ನೆತ್ತರಕೆರೆ ವಿಟ್ಲದ ಬಳಿಯಲ್ಲಿದೆ. 
ಅವನ ಕ್ರೌರ್ಯದ ಮಾಹಿತಿ ಮತ್ತು ವಿವರ " ಯೋಯೇಜ್ ಟು ಈಸ್ಟ್ ಇಂಡಿಯಾ " ಕೃತಿ ರಚಿಸಿದ ಲೇಖಕ, ಇತಿಹಾಸ ತಜ್ಞ ಬಾತರ್ ಲೋಮಿಯಾ ಎನ್ನುವವನಿಂದ ತಿಳಿಯುತ್ತದೆ. ಅವನ ಪ್ರಕಾರ ಕಲ್ಲಿಕೋಟೆಯ ಮಾರಣ ಹೋಮ ಜಗತ್ತು ಕಂಡು ಕೇಳರಿಯದ ಹಿಂಸೆಗಳ ಕೃತ್ಯ ಎನ್ನುತ್ತಾನೆ. ಸಾಲುಸಾಲಾಗಿ ಆನೆಯ ಸಾಲುಗಳನ್ನು ಹೊರಡಿಸುತ್ತಿದ್ದ ಟಿಪ್ಪು ಸರಿ ಸುಮಾರು 2000 ಬ್ರಾಹ್ಮಣ ಕುಟುಂಬಗಳನ್ನು ಒಂದು ಕುಡಿಯೂ ಉಳಿಸದಂತೆ ನಾಶ ಮಾಡುತ್ತಾನೆ, ಅವರ ದೇಹವನ್ನು ವಿನೋದಾವಳಿಯ ನೆಪದಲ್ಲಿ ಆನೆಯ ಕಾಲಿಗೆ ಕಟ್ಟಿ ಹೊಸಕಿಸುತ್ತಾನೆ. ತೀರ ಬೆತ್ತಲೆ ಮಾಡಿ ಗಂಡು ಹೆಣ್ಣು ಎನ್ನುವ ಬೇಧವಿಲ್ಲದೆ ಅವರನ್ನೆಲ್ಲ ಮೆರವಣಿಗೆ ಮಾಡುತ್ತಾ ಸಾಯಿಸಿದ್ದನ್ನು ಬಾತರ್ ಲೋಮಿಯೋ ಅತ್ಯಂತ ಸ್ಪಷ್ಠವಾಗಿ ದಾಖಲಿಸಿದ್ದಾನೆ. ಅಸಲಿಗೆ ಹಾಗೆ ತೀರಿ ಹೋದ ಕಲ್ಲಿಕೊಟೆಯ ಬ್ರಾಹ್ಮಣರಲ್ಲಿ ಉಳಿದು ಹೋದವರ ಪ್ರಾಣ ಉಳಿಸುವುದಕ್ಕಾಗೇ ಸ್ವತ: ಕಲ್ಲಿಕೋಟೆಯ ರಾಜ ಆ ಊರನ್ನೆ ತೊರೆದು ಹೋಗುತ್ತಾನೆ ಸುಮಾರು 1783 ರ ಹೊತ್ತಿಗೆ ದಿನಕ್ಕೆ ಹತ್ತಿಪ್ಪತ್ತು ಬ್ರಾಹ್ಮಣರ ತಲೆ ಕಡಿದು ಝಾಮೋರಿನ ಕೋಟೆಯ ಹೊರಗೆ ನೇತಾಡಿಸುವುದು ಅವನ ಹವ್ಯಾಸವಾಗಿ ಬದಲಾಗಿತ್ತು ಎನ್ನುತ್ತದೆ ಬ್ರಿಟಿಷ ಅಧಿಕಾರಿಯೊಬ್ಬನ ಡೈರಿ. ಈ ಸಮಯದಲ್ಲೇ ಸಾಮೂಹಿಕ ಸುನ್ನತಿ ಮಾಡಿಸುವ ಅವನ ಭಿಭತ್ಸಕಾರಿ ಕೃತಿ ಬೆಳಕಿಗೆ ಬಂದಿದ್ದು. 
ನೂರಾರು ಹಿಂದೂಗಳನ್ನು ಸಾಲಾಗಿ ಬೆತ್ತಲೆಯಾಗಿ ನಿಲ್ಲಿಸಿ ಕತ್ತಿಯಿಂದ ಅವರ ಮಾರ್ಮಾಂಗದ ತುದಿಯನ್ನು ಕತ್ತರಿಸಿ ಬಾಯಿಗೆ ಮಾಂಸವನ್ನು ತುಂಬಿ `ಇನ್ನು ಮೇಲೆ ಇವರೆಲ್ಲಾ ಇಸ್ಲಾಂ' ಧರ್ಮಕ್ಕೆ ಪರಿವರ್ತನೆಯಾದವರೆಂದು ಘೋಶಿಸುತ್ತಿದ್ದ. ಬರೆಯುತ್ತಾ ಹೋದರೆ ಬರೀ ನರಮೇಧದ ಕತೆಯನ್ನು ಇತಿಹಾಸವಾಗಿಸಿಕೊಂಡ ಟಿಪ್ಪು ಅಪ್ಪಟ ಸ್ತ್ರೀಲೋಲಕನಾಗಿ 600 ಕ್ಕೂ ಹೆಚ್ಚು ಜನರನ್ನು ತನ್ನ ಜನಾನದಲ್ಲಿ ತುಂಬಿಕೊಂಡಿದ್ದ. ಇಂಥವನ ಬಗ್ಗೆ ಇವತ್ತು ಹಬ್ಬ ಆಚರಿಸುವ ಮೊದಲೊಮ್ಮೆ ಇತಿಹಾಸ ದಾಖಲೆಯ ವಿವರವನ್ನೊಮ್ಮೆ ನೋಡುವುದೊಳಿತು. ಪೂರ್ತಿ ಬರೆದು ಪೂರೈಸುವ ಬದಲಿಗೆ ರೆಫೆರೆನ್ಸ್‍ಗಾಗಿ ಒಂದಷ್ಟು ಮಾಹಿತಿಯನ್ನು ಇಲ್ಲಿ ಕೊಟಿದ್ದೇನೆ. ಈ ಕೆಳಗಿನ ಇತಿಹಾಸದ ದಾಖಲೆಗಳನ್ನು ಕ್ರೊಢೀಕರಿಸಿದರೆ ಸಾವಿರ ಪುಟದ ಇನ್ನೊಂದು ಬಿಭತ್ಸಕಾರಿ ಹೊತ್ತಗೆಯಾದೀತು.
ವಿಲಿಯಂ ಲೋಗನ್ – ಮಲಬಾರ್ ಮ್ಯಾನ್ಯುಯೆಲ್ ( ಬ್ರಿಟೀಷ್ ಸರಕಾರದಲ್ಲಿ ವಿದೇಶಿ ಅಧಿಕಾರಿ ಸ್ಕಾಟಿಷ್. ಕೇರಳ ತಮಿಳನಾಡಿನಲ್ಲಿ ಎರಡು ದಶಕಗಳ ಕಾಲ ದಂಡಾಧಿಕಾರಿಯಾಗಿದ್ದ ಕಲೆಕ್ಟರ್ )
ವಟಂಕ್ಕೂರು ರಾಜವರ್ಮ - ಕೇರಳ ಸಂಸ್ಕೃತ ಸಾಹಿತ್ಯ ಚರಿತ.
ಲೇವಿಸ್ ರೈಸ್ - ಹಿಸ್ಟರಿ ಆಫ್ ಮೈಸೂರ್ ಆಂಡ್ ಕೂರ್ಗ್.
ಐ.ಎಮ್. ಮುತ್ತಣ್ಣನವರ – ಕೂರ್ಗ ಗೆಝೇಟಿಯರ್. (1785 ಡಿಸೆಂಬರ್  13 – ಭಾಗಮಂಡಲ ದೇವಟ್ಟಿ ಪರಂಬುನಲ್ಲಿ 30000 ಕೊಡವರ ಮಾರಣ ಹೋಮ. )
1797 ಏಪ್ರಿಲ್ 21 - ಪ್ರೆಂಚ್‍ರಿಗೆ ಟಿಪ್ಪು ಸಹಾಯ ಅಪೇಕ್ಷಿಸಿ, ಭಾರತ ಕೊಳ್ಳೆ ಹೊಡೆಯುವ ಪ್ರಲೋಭನೆಯ ಕಾಗದ ಬರೆದದ್ದು.
ಮೀರ್ ಹುಸೈನ್ ಕೀರ್ಮಾನಿ - 1788 ರ ಇತಿಹಾಸಕಾರ – ದಾಳಿಯ ದಾಖಲೆಗಳು. 
ಕ್ಯಾಪ್ಟನ್ ಥಾಮಸ್ ಮ್ಯಾರಿಯಟ್ – ಟಿಪ್ಪುವಿನ ಮರಣಾನಂತರದ ಲಭ್ಯವಿದ್ದ ಮಾಹಿತಿಯ ಇತಿಹಾಸಕಾರ. 
ಕೇಯಿಟ್ ಬ್ಯಾಂಕ್ – ಟಿಪ್ಪು ಸುಲ್ತಾನ ಸರ್ಚ್ ¥sóÁರ್ ಲೆಜಿಟ್ಮಸಿ ( ಇದು ಟಿಪ್ಪು ಸತ್ತ ನಂತರ ಅಖಂಡ ಆರ್ನೂರು ಚಿಲ್ರೆ ಹೆಂಗಸರ ಜನಾನಾದವರ ಕಥೆ ಏನಾಯಿತು ಎಂದು ದಾಖಲಿಸುತ್ತದೆ ) 
ಡಾ. ನರಸಿಂಹನ್ – 1792 ರ ಮೇಲು ಕೋಟೆಯಲ್ಲಿ ಅಯ್ಯಂಗಾರ್ ಬ್ರಾಹ್ಮಣರ ಮಾರಣ ಹೋಮದ ದಾಖಲೆ (ಇದರ ಕಾರಣ ಇವತ್ತಿಗೂ ಇಲ್ಲಿ ದೀಪಾವಳಿಯ ದಿನ ಸೂತಕ ಆಚರಿಸಲಾಗುತ್ತದೆ. ) 
ಬಾರ್ಟ್ ಲೋಮಿಯೋ – ವೋಯೇಜ್ ಟು ಈಸ್ಟ್ ಇಂಡೀಸ್ ( ಫೆÇೀರ್ತುಗೀಸ್ ಯಾತ್ರಿಕ ) 
ಕರ್ನಲ್ ಪುಲ್ಲೇಟಿನ್ - ಬ್ರಿಟಿಷ ಕರ್ನಲ್ – 1783 ಕಲ್ಲಿಕೋಟೆ ಮಾರಣಹೋಮದ ದಾಖಲೆಗಾರ.
1788 ಮಾರ್ಚ್ 22 – ಅಬ್ದುಲ್ ಖಾದೀರ್ ಪತ್ರ (12000 ಹಿಂದೂ ನಂಬೂದಿರಿ ಬ್ರಾಹ್ಮಣರನ್ನು ಮತಾಂತರಿಸಿದ ದಾಖಲೆ)
1790 ಜನೇವರಿ 18 - ಸಯ್ಯದ್ ಅಬ್ದುಲ್ ದುಲಾಯಿಗೆ ಬರೆದ ಕಾಗದ (ಕಲ್ಲಿಕೋಟೆ, ಕೊಚ್ಚಿ ಭಾಗದ ಎಲ್ಲಾ ಹಿಂದೂಗಳ ಮತಾಂತರದ ದಾಖಲೆ) 
1790 ಜನೇವರಿ 19 - ಬದ್ರುದ್ದಿನ್ ಜುಮಾನ್ ಖಾನ್ ಪತ್ರ(ಮಲಬಾರ್‍ನ ನಾಲ್ಕು ಲಕ್ಷ ಜನ ಹಿಂದೂ ಗಳನ್ನು ಮುಸ್ಲಿಂಗೆ ಪರಿವರ್ತಿಸಿದ ದಾಖಲೆ ಜತೆಗೆ ತಿರುವಾಂಕೂರಿನ ರಾಜ ರಾಮವರ್ಮನನ್ನು (ನಾಯರ್) ಮತಾಂತರಿಸುವ ಯೋಜನಾ ವರದಿ.
1964 - ಲೈಫ್ ಆಫ್ ಟಿಪ್ಪು ಸುಲ್ತಾನ್(ಪಾಕಿಸ್ತಾನ ಅಡ್ಮಿನಿಸ್ಟ್ರೆಟಿವ್ ಸ್ಟಾಫ್ ಕಾಲೇಜ್. ಲಾಹೋರ ಪ್ರಕಟ. 100000 ಹಿಂದೂಗಳು ಮತ್ತು 70000 ಕ್ರಿಶ್ಚಿಯನ್ನರನ್ನು ಮತಾಂತರಿಸಿದ ದಾಖಲೆಯ ಪುಸ್ತಕ )
ಪೆÇ್ರ.ಲೇವಿಸ್ ಬಾವರಿ - ಬ್ರಿಟಿಷ್ ಇತಿಹಾಸಕಾರ (ದೇಗುಲ ಮತ್ತು ಮೂರ್ತಿ ಭಂಜನೆಯ ದಾಖಲೆ. ದಕ್ಷಿಣ ಭಾರತದ ಸುಮಾರು 8000 ದೇವಸ್ಥಾನಗಳನ್ನು ಹಾಳುಗೆಡುವಿದ ಮಾಹಿತಿ. ಮಣಿಯೂರು(ಇಲ್ಲೀಗ ಮಸೀದಿ ಕಟ್ಟಲಾಗಿದೆ) ತೇಲಶ್ಚರಿ, ತಿರುವೆಂಕಟ ದೇವಸ್ಥಾನ, ಚಿರಕ್ಕಲ್, ಮೈಸೂರು ಕೊಡಗು, ಮಂಗಳೂರು, ತಳಿ, ಗೋವಿಂದಪುರ, ವಾರಂಕ್ಕಲ್, ತಿರುವಣ್ಣೂರು, ಪುತ್ತೂರು, ಮಧೂರು ಸೇರಿದಂತೆ ಅತ್ಯುತ್ತಮ ಎನ್ನಬಹುದಾಗಿದ್ದ ಶಿಲ್ಪಕಲೆಗಳಿಂದ ಕಂಗೊಳಿಸುತ್ತಿದ್ದ ದೇವಸ್ಥಾನಗಳು ಸಂಪೂರ್ಣ ನೆಲಕಚ್ಚಿದವು. ಇವನ್ನೆಲ್ಲ ವಿಲಯಂ ಲೋಗನ್ ಕೂಡಾ ದಾಖಲಿಸಿದ್ದಾನೆ. 
1784 ಸೆಂಟ್ ಮಿಲಾಗ್ರೀಸ್ ಚರ್ಚು - ಟಿಪ್ಪು ನೆಲಸಮಗೊಳಿಸಿದ. ಇದರ ನಿರ್ಮಾಣ 1640ರಲ್ಲಾಗಿತ್ತು. 
ಡಿಸೆಂಬರ್ 7, 1782 ರಿಂದ ಮೇ. 4 1799 – ಟಿಪ್ಪು ಮೈಸೂರು ಕೇರಳ ಮತ್ತು ಕರ್ನಾಟಕದ ಭಾಗದಲ್ಲಿ ನಡೆಸಿದ ಮಾರಣ ಹೋಮದ ಅವಧಿ ಹಾಗು ಅವನ ಆಡಳಿತ ಕಾಲಾವಧಿ.
ಇದೆಲ್ಲಾ ಇತಿಹಾಸ ಮತ್ತು ಕೇವಲ ಲಭ್ಯವಿರುವ ದಾಖಲೆಯಾಚೆಗೆ ಅದೆಷ್ಟು ನೆತ್ತರ ಕತೆಗಳನ್ನು ಟಿಪ್ಪುನ ಕಾಲಾವಧಿಯಲ್ಲಿ ಹಿಂದೂ ಜನಾಂಗ ಅನುಭವಿಸಿರಲಿಕ್ಕಿಲ್ಲ. ಹಿಂದೆಂದೋ ನಡೆದ ಘಟನೆಗಳಿಗೆ ಈಗಿನ ಬ್ರಾಹ್ಮಣರು ಮತ್ತು ಮೇಲ್ವರ್ಗ ಕೊಂಚ ಸಹಿಸಿಕೊಳ್ಳಬೇಕು ಎನ್ನುವ ಬುದ್ಧಿವಂತರೇ, ಕನಿಷ್ಟ ನಾವು ಭಾರತೀಯರು, ನಮ್ಮ ರಾಷ್ಟ್ರೀಯತೆಗೆ ಒಂದು ವಿಶೇಷತೆಯಿದೆ ಎನ್ನುವುದನ್ನು ಅರಿಯದೆ ಅಕಾಡೆಮಿ, ಪ್ರಶಸ್ತಿ, ಅಧ್ಯಕ್ಷತೆ, ಮೈಕು ಮತ್ತು ವೇದಿಕೆ ಎನ್ನುತ್ತಾ ನಂದೊಂದು ಸೀಟು ಎಂದು ಕರ್ಚೀಪ್ ಹಾಕುತ್ತಲೇ ಇದ್ದರೆ ನಿಮಗರಿವಾಗುವ ಮೊದಲೇ ಮತ್ತೊಮ್ಮೆ ನಿಮ್ಮನ್ನೂ ಬಹಿರಂಗವಾಗಿ ಬೆತ್ತಲಾಗಿಸಿ ಸುನ್ನತಿಗೊಳಪಡಿಸಿಯಾರು. ಈಗಲೂ ಕಾಲ ಮಿಂಚಿಲ್ಲ. ನನ್ನ ದೇಶ, ನಮ್ಮ ನಾಡು, ನಾವು ಭಾರತೀಯರು ಎನ್ನುವ ಸನಾತನತೆ ಇನ್ನಾದರೂ ಮೈಗೊಡಿಸಿಕೊಳ್ಳಿ. ಇತಿಹಾಸ ಬದಲಿಸಲಾಗದಿದ್ದರೂ ಕಲಿಯಬಹುದು. ಆದರೆ ವರ್ತಮಾನವನ್ನೂ ರೂಢಿಸಿಕೊಳ್ಳದಿದ್ದರೆ ನೀವು ಮತ್ತೊಮ್ಮೆ ಇತಿಹಾಸದ ಭಾಗವಾಗುವುದರಲ್ಲಿ ಸಂಶಯವಿಲ್ಲ. ಯಾರಿಗೆ ಗೊತ್ತು ಯಾವ ಸಮುದಾಯ ಭವಿಷ್ಯತ್ತಿನಲ್ಲಿ ದಸರೆಯನ್ನು ಬಿಡಬೇಕಾಗಿ ಬರಬಹುದೆಂದು. ಜಾಗ್ರತೆ.